<p>`ಶೂಟಿಂಗ್ಗೆ ವಿದಾಯ ಹೇಳಲು ಮುಂದಾಗುತ್ತೀರಾ?~<br /> ಲಂಡನ್ ಒಲಿಂಪಿಕ್ಸ್ನ ರಾಯಲ್ ಆರ್ಟಿಲರಿ ಬ್ಯಾರಕ್ಸ್ ಶೂಟಿಂಗ್ ರೇಂಜ್ನಲ್ಲಿ ಸೋತ ಕೆಲವೇ ನಿಮಿಷಗಳಲ್ಲಿ ಅಭಿನವ್ ಬಿಂದ್ರಾ ಅವರನ್ನು ಮುತ್ತಿಕೊಂಡ ಪತ್ರಕರ್ತರು ಪದೇಪದೇ ಕೇಳಿದ ಪ್ರಶ್ನೆ ಇದು. <br /> </p>.<p>10 ಮೀಟರ್ ಏರ್ ರೈಫಲ್ ಸ್ಪರ್ಧೆಯ ಹಿಂದಿನ ದಿನದವರೆಗೆ ಬಿಂದ್ರಾ ಅವರನ್ನು `ಇಂದ್ರ ಚಂದ್ರ~ ಎಂದು ಹೊಗಳಿದ್ದವರು ಏಕಾಏಕಿ ತೆಗಳಲು ಶುರು ಮಾಡಿದರು.<br /> <br /> ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದುಕೊಟ್ಟ ಮೊದಲ ವ್ಯಕ್ತಿ ಬಿಂದ್ರಾ ಎಂಬುದನ್ನು ಆ ಆವೇಶದಲ್ಲಿ ಮರೆತೇಬಿಟ್ಟರು. ಜೊತೆಗೆ ಈ ಒಂದು ಸೋಲಿನಿಂದ `ಚಿನ್ನದ ಹುಡುಗ~ ಬಿಂದ್ರಾ ಅವರ ಕ್ರೀಡಾ ಜೀವನವೇ ಮುಗಿಯಿತು ಎಂಬಂತೆ ಬಿಂಬಿಸಲಾಯಿತು. ಇದೊಂದು ಕ್ರೀಡಾ ಲೋಕದ ದುರಂತಮಯ ಸಂಗತಿ. ಒಲಿಂಪಿಕ್ಸ್ ಧ್ಯೇಯಕ್ಕೆ ವಿರುದ್ಧವಾದ ವರ್ತನೆ ಇದು.<br /> <br /> ಆದರೆ ಬಿಂದ್ರಾ ಹೇಳಿದ್ದು ಒಂದೇ ಮಾತು. `ನಾನು ಕೇಳಿದ್ದನ್ನೆಲ್ಲಾ ಶೂಟಿಂಗ್ ನನಗೆ ನೀಡಿದೆ. ಈ ಕ್ರೀಡೆಯನ್ನು ನಾನು ಸದಾ ಪ್ರೀತಿಸುತ್ತೇನೆ. ವಿದಾಯ ಹೇಳಬೇಕೆಂದಿದ್ದರೆ ಚಿನ್ನ ಗೆದ್ದಾಗಲೇ ಆ ತೀರ್ಮಾನ ಕೈಗೊಳ್ಳುತ್ತಿದ್ದೆ~ ಎಂದರು. ಅವರಿಗಿನ್ನೂ 29 ವರ್ಷ ವಯಸ್ಸು ಅಷ್ಟೆ.<br /> <br /> ಬೀಜಿಂಗ್ ಒಲಿಂಪಿಕ್ಸ್ಗೂ ಮುನ್ನ ಬೆನ್ನು ನೋವಿನಿಂದಾಗಿ ಸುಮಾರು ಒಂದು ವರ್ಷ ಬಿಂದ್ರಾ ರೈಫಲ್ ಎತ್ತುವಂತಹ ಸ್ಥಿತಿಯಲ್ಲಿಯೇ ಇರಲಿಲ್ಲ. ಅವರ ಕಥೆ ಮುಗಿದೇ ಹೋಯಿತು ಎಂದು ಟೀಕಾಕಾರರು ಆಗಲೇ ಷರಾ ಬರೆದಿದ್ದರು. ಪುಟಗಟ್ಟಲೇ ಟೀಕೆಗಳು ಹರಿದು ಬಂದಿದ್ದವು.<br /> <br /> ಆದರೆ ಬೀಜಿಂಗ್ನಲ್ಲಿ ತ್ರಿವರ್ಣ ಧ್ವಜ ರಾರಾಜಿಸಲು ಕಾರಣರಾಗಿದ್ದು ಬಿಂದ್ರಾ. ಅದು ಅವರಿಗೆ ಮೂರನೇ ಒಲಿಂಪಿಕ್ಸ್ ಆಗಿತ್ತು. ಅದಕ್ಕೂ ಮುನ್ನ ಅಥೆನ್ಸ್ನಲ್ಲಿ ಏಳನೇ ಸ್ಥಾನ ಪಡೆದಿದ್ದರು. ಸಿಡ್ನಿ ಒಲಿಂಪಿಕ್ಸ್ನಲ್ಲಿ ಕಣಕ್ಕಿಳಿದಾಗ ಅವರಿಗೆ 18 ವರ್ಷ ವಯಸ್ಸು ಅಷ್ಟೆ.<br /> <br /> `ಪದಕ ಗೆದ್ದರೂ ನನ್ನ ವೈಯಕ್ತಿಕ ಬದುಕಿನ ಸ್ಥಿತಿಗತಿ ಬದಲಾಗುವುದಿಲ್ಲ. ಅದು ಯಥಾ ಪ್ರಕಾರ ಸಾಗುತ್ತಿರುತ್ತದೆ. ನಾನು ಗೆದ್ದ ಚಿನ್ನದ ಪದಕ ಉಳಿದ ಕ್ರೀಡೆಗಳಿಗೂ ಹೆಚ್ಚಿನ ಪ್ರೋತ್ಸಾಹ ದೊರೆಯುವಂತೆ ಪ್ರಭಾವ ಬೀರಿದರೆ ಅದೇ ಸಂತೋಷ~ ಎಂದು ಅಭಿನವ್ ಬೀಜಿಂಗ್ನಲ್ಲಿ ಚಿನ್ನ ಗೆದ್ದಾಗ ನುಡಿದಿದ್ದರು.</p>.<p><br /> ಅಷ್ಟೇ ಏಕೆ, ಚಿನ್ನದ ಪದಕದೊಂದಿಗೆ ವಿಜಯ ವೇದಿಕೆಯಲ್ಲಿ ನಿಂತಾಗ ಕೂಡ ಅವರ ಮುಖದ ಭಾವನೆಯಲ್ಲಿ ಅಂಥ ಬದಲಾವಣೆ ಇರಲಿಲ್ಲ. ಏಕೆಂದರೆ ಆ ಸಾಧನೆಯ ಮೆಟ್ಟಿಲೇರಲು ಅವರು ಪಟ್ಟಿದ್ದ ಕಷ್ಟ ಅಷ್ಟಿಷ್ಟಲ್ಲ.<br /> <br /> `ಯಾವುದೇ ವ್ಯಕ್ತಿಯ ಸಾಧನೆಯನ್ನು ಸಂಭ್ರಮಿಸಿ, ಆನಂದಿಸಿ. ಆದರೆ ಒಂದು ಮಾತು ನೆನಪಿರಲಿ; ಆ ವ್ಯಕ್ತಿ ಕೆಳಗೆ ಬಿದ್ದಾಗ ಅವರನ್ನು ಕಡೆಗಣಿಸಬೇಡಿ~ ಎಂದು ಅಂದು ತಮ್ಮನ್ನು ಮುತ್ತಿಕೊಂಡ ಪತ್ರಕರ್ತರನ್ನು ಉದ್ದೇಶಿಸಿ ಬಿಂದ್ರಾ ಹೇಳಿದ್ದರು. ತಮ್ಮ ಜೀವನ ಚರಿತ್ರೆ `ಎ ಶಾಟ್ ಅಟ್ ಹಿಸ್ಟರಿ~ ಎಂಬ ಪುಸ್ತಕದಲ್ಲೂ ಇದೇ ವಿಷಯ ಬರೆದಿದ್ದಾರೆ. <br /> <br /> ಬಿಂದ್ರಾ ತಮ್ಮ ನಿವಾಸದಲ್ಲಿ ಶೂಟಿಂಗ್ ರೇಂಜ್ ಕಟ್ಟಿಸಿಕೊಂಡು ಬೆಳಿಗ್ಗೆ ಮೂರು ಗಂಟೆಗೆ ಎದ್ದು ಅಭ್ಯಾಸ ನಡೆಸಿ ಆ ಸಾಧನೆ ಮಾಡಿದ್ದರು. ವಿದೇಶದಲ್ಲಿ ತರಬೇತಿ ಪಡೆಯಲು ಸ್ವಂತ ಜೇಬಿನಿಂದ ದುಡ್ಡು ಖರ್ಚು ಮಾಡಿದ್ದರು. ಪೋಷಕರು ತಮ್ಮ ಉದ್ದಿಮೆಯನ್ನು ಕಡೆಗಣಿಸಿ ಮಗನ ಶೂಟಿಂಗ್ನತ್ತ ಗಮನ ಹರಿಸಿದ್ದರು. <br /> <br /> ಆದರೆ ಅವರು ಚಿನ್ನ ಗೆದ್ದಿದ್ದು ಭಾರತದ ಕೋಟಿ ಕೋಟಿ ಜನರಲ್ಲಿ ಸ್ಫೂರ್ತಿ ತುಂಬಿತು. ಅದು ಕೇವಲ ಅವರ ವೈಯಕ್ತಿಕ ಸಾಧನೆ ಮಾತ್ರವಲ್ಲ; ದೇಶಕ್ಕೆ ನೀಡಿದ ದೊಡ್ಡ ಕೊಡುಗೆ. ಒಂದು ಚಿನ್ನ ಗೆಲ್ಲಲು ಸಾಧ್ಯವಾಗುತ್ತಿಲ್ಲ ಎಂದು ಹೀಯಾಳಿಸುತ್ತಿದ್ದವರಿಗೆ ನೀಡಿದ ಉತ್ತರವಾಗಿತ್ತು. ಜೊತೆಗೆ ಭಾರತೀಯರ ಮನಸ್ಥಿತಿಯನ್ನು ಬದಲಾಯಿಸಲು ಕಾರಣವಾಯಿತು. <br /> <br /> ಈ ಬಾರಿ ಬಿಂದ್ರಾ ವಿಫಲವಾಗಿರಬಹುದು. ಆದರೆ ಗಗನ್ ನಾರಂಗ್ ಕಂಚು ಗೆದ್ದು ಶೂಟಿಂಗ್ನಲ್ಲಿ ಭಾರತ `ಹ್ಯಾಟ್ರಿಕ್~ ಪದಕದ ಸಾಧನೆ ಮಾಡಲು ಕಾರಣರಾಗಿದ್ದಾರೆ. ವಿಜಯ್ ಕುಮಾರ್ ಬೆಳ್ಳಿ ಜಯಿಸಿದ್ದಾರೆ. ಲಂಡನ್ನಲ್ಲಿ ಬಿಂದ್ರಾ ಸೋತರೂ ಅವರು ಸದಾ `ಚಿನ್ನದ ಹುಡುಗ~. ಏಕೆಂದರೆ ಅವರು ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಮೊದಲ ವ್ಯಕ್ತಿ ಎಂದು ಇತಿಹಾಸದ ಪುಟಗಳಲ್ಲಿಯೂ ರಾರಾಜಿಸುತ್ತಿದ್ದಾರೆ. ಜ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಶೂಟಿಂಗ್ಗೆ ವಿದಾಯ ಹೇಳಲು ಮುಂದಾಗುತ್ತೀರಾ?~<br /> ಲಂಡನ್ ಒಲಿಂಪಿಕ್ಸ್ನ ರಾಯಲ್ ಆರ್ಟಿಲರಿ ಬ್ಯಾರಕ್ಸ್ ಶೂಟಿಂಗ್ ರೇಂಜ್ನಲ್ಲಿ ಸೋತ ಕೆಲವೇ ನಿಮಿಷಗಳಲ್ಲಿ ಅಭಿನವ್ ಬಿಂದ್ರಾ ಅವರನ್ನು ಮುತ್ತಿಕೊಂಡ ಪತ್ರಕರ್ತರು ಪದೇಪದೇ ಕೇಳಿದ ಪ್ರಶ್ನೆ ಇದು. <br /> </p>.<p>10 ಮೀಟರ್ ಏರ್ ರೈಫಲ್ ಸ್ಪರ್ಧೆಯ ಹಿಂದಿನ ದಿನದವರೆಗೆ ಬಿಂದ್ರಾ ಅವರನ್ನು `ಇಂದ್ರ ಚಂದ್ರ~ ಎಂದು ಹೊಗಳಿದ್ದವರು ಏಕಾಏಕಿ ತೆಗಳಲು ಶುರು ಮಾಡಿದರು.<br /> <br /> ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದುಕೊಟ್ಟ ಮೊದಲ ವ್ಯಕ್ತಿ ಬಿಂದ್ರಾ ಎಂಬುದನ್ನು ಆ ಆವೇಶದಲ್ಲಿ ಮರೆತೇಬಿಟ್ಟರು. ಜೊತೆಗೆ ಈ ಒಂದು ಸೋಲಿನಿಂದ `ಚಿನ್ನದ ಹುಡುಗ~ ಬಿಂದ್ರಾ ಅವರ ಕ್ರೀಡಾ ಜೀವನವೇ ಮುಗಿಯಿತು ಎಂಬಂತೆ ಬಿಂಬಿಸಲಾಯಿತು. ಇದೊಂದು ಕ್ರೀಡಾ ಲೋಕದ ದುರಂತಮಯ ಸಂಗತಿ. ಒಲಿಂಪಿಕ್ಸ್ ಧ್ಯೇಯಕ್ಕೆ ವಿರುದ್ಧವಾದ ವರ್ತನೆ ಇದು.<br /> <br /> ಆದರೆ ಬಿಂದ್ರಾ ಹೇಳಿದ್ದು ಒಂದೇ ಮಾತು. `ನಾನು ಕೇಳಿದ್ದನ್ನೆಲ್ಲಾ ಶೂಟಿಂಗ್ ನನಗೆ ನೀಡಿದೆ. ಈ ಕ್ರೀಡೆಯನ್ನು ನಾನು ಸದಾ ಪ್ರೀತಿಸುತ್ತೇನೆ. ವಿದಾಯ ಹೇಳಬೇಕೆಂದಿದ್ದರೆ ಚಿನ್ನ ಗೆದ್ದಾಗಲೇ ಆ ತೀರ್ಮಾನ ಕೈಗೊಳ್ಳುತ್ತಿದ್ದೆ~ ಎಂದರು. ಅವರಿಗಿನ್ನೂ 29 ವರ್ಷ ವಯಸ್ಸು ಅಷ್ಟೆ.<br /> <br /> ಬೀಜಿಂಗ್ ಒಲಿಂಪಿಕ್ಸ್ಗೂ ಮುನ್ನ ಬೆನ್ನು ನೋವಿನಿಂದಾಗಿ ಸುಮಾರು ಒಂದು ವರ್ಷ ಬಿಂದ್ರಾ ರೈಫಲ್ ಎತ್ತುವಂತಹ ಸ್ಥಿತಿಯಲ್ಲಿಯೇ ಇರಲಿಲ್ಲ. ಅವರ ಕಥೆ ಮುಗಿದೇ ಹೋಯಿತು ಎಂದು ಟೀಕಾಕಾರರು ಆಗಲೇ ಷರಾ ಬರೆದಿದ್ದರು. ಪುಟಗಟ್ಟಲೇ ಟೀಕೆಗಳು ಹರಿದು ಬಂದಿದ್ದವು.<br /> <br /> ಆದರೆ ಬೀಜಿಂಗ್ನಲ್ಲಿ ತ್ರಿವರ್ಣ ಧ್ವಜ ರಾರಾಜಿಸಲು ಕಾರಣರಾಗಿದ್ದು ಬಿಂದ್ರಾ. ಅದು ಅವರಿಗೆ ಮೂರನೇ ಒಲಿಂಪಿಕ್ಸ್ ಆಗಿತ್ತು. ಅದಕ್ಕೂ ಮುನ್ನ ಅಥೆನ್ಸ್ನಲ್ಲಿ ಏಳನೇ ಸ್ಥಾನ ಪಡೆದಿದ್ದರು. ಸಿಡ್ನಿ ಒಲಿಂಪಿಕ್ಸ್ನಲ್ಲಿ ಕಣಕ್ಕಿಳಿದಾಗ ಅವರಿಗೆ 18 ವರ್ಷ ವಯಸ್ಸು ಅಷ್ಟೆ.<br /> <br /> `ಪದಕ ಗೆದ್ದರೂ ನನ್ನ ವೈಯಕ್ತಿಕ ಬದುಕಿನ ಸ್ಥಿತಿಗತಿ ಬದಲಾಗುವುದಿಲ್ಲ. ಅದು ಯಥಾ ಪ್ರಕಾರ ಸಾಗುತ್ತಿರುತ್ತದೆ. ನಾನು ಗೆದ್ದ ಚಿನ್ನದ ಪದಕ ಉಳಿದ ಕ್ರೀಡೆಗಳಿಗೂ ಹೆಚ್ಚಿನ ಪ್ರೋತ್ಸಾಹ ದೊರೆಯುವಂತೆ ಪ್ರಭಾವ ಬೀರಿದರೆ ಅದೇ ಸಂತೋಷ~ ಎಂದು ಅಭಿನವ್ ಬೀಜಿಂಗ್ನಲ್ಲಿ ಚಿನ್ನ ಗೆದ್ದಾಗ ನುಡಿದಿದ್ದರು.</p>.<p><br /> ಅಷ್ಟೇ ಏಕೆ, ಚಿನ್ನದ ಪದಕದೊಂದಿಗೆ ವಿಜಯ ವೇದಿಕೆಯಲ್ಲಿ ನಿಂತಾಗ ಕೂಡ ಅವರ ಮುಖದ ಭಾವನೆಯಲ್ಲಿ ಅಂಥ ಬದಲಾವಣೆ ಇರಲಿಲ್ಲ. ಏಕೆಂದರೆ ಆ ಸಾಧನೆಯ ಮೆಟ್ಟಿಲೇರಲು ಅವರು ಪಟ್ಟಿದ್ದ ಕಷ್ಟ ಅಷ್ಟಿಷ್ಟಲ್ಲ.<br /> <br /> `ಯಾವುದೇ ವ್ಯಕ್ತಿಯ ಸಾಧನೆಯನ್ನು ಸಂಭ್ರಮಿಸಿ, ಆನಂದಿಸಿ. ಆದರೆ ಒಂದು ಮಾತು ನೆನಪಿರಲಿ; ಆ ವ್ಯಕ್ತಿ ಕೆಳಗೆ ಬಿದ್ದಾಗ ಅವರನ್ನು ಕಡೆಗಣಿಸಬೇಡಿ~ ಎಂದು ಅಂದು ತಮ್ಮನ್ನು ಮುತ್ತಿಕೊಂಡ ಪತ್ರಕರ್ತರನ್ನು ಉದ್ದೇಶಿಸಿ ಬಿಂದ್ರಾ ಹೇಳಿದ್ದರು. ತಮ್ಮ ಜೀವನ ಚರಿತ್ರೆ `ಎ ಶಾಟ್ ಅಟ್ ಹಿಸ್ಟರಿ~ ಎಂಬ ಪುಸ್ತಕದಲ್ಲೂ ಇದೇ ವಿಷಯ ಬರೆದಿದ್ದಾರೆ. <br /> <br /> ಬಿಂದ್ರಾ ತಮ್ಮ ನಿವಾಸದಲ್ಲಿ ಶೂಟಿಂಗ್ ರೇಂಜ್ ಕಟ್ಟಿಸಿಕೊಂಡು ಬೆಳಿಗ್ಗೆ ಮೂರು ಗಂಟೆಗೆ ಎದ್ದು ಅಭ್ಯಾಸ ನಡೆಸಿ ಆ ಸಾಧನೆ ಮಾಡಿದ್ದರು. ವಿದೇಶದಲ್ಲಿ ತರಬೇತಿ ಪಡೆಯಲು ಸ್ವಂತ ಜೇಬಿನಿಂದ ದುಡ್ಡು ಖರ್ಚು ಮಾಡಿದ್ದರು. ಪೋಷಕರು ತಮ್ಮ ಉದ್ದಿಮೆಯನ್ನು ಕಡೆಗಣಿಸಿ ಮಗನ ಶೂಟಿಂಗ್ನತ್ತ ಗಮನ ಹರಿಸಿದ್ದರು. <br /> <br /> ಆದರೆ ಅವರು ಚಿನ್ನ ಗೆದ್ದಿದ್ದು ಭಾರತದ ಕೋಟಿ ಕೋಟಿ ಜನರಲ್ಲಿ ಸ್ಫೂರ್ತಿ ತುಂಬಿತು. ಅದು ಕೇವಲ ಅವರ ವೈಯಕ್ತಿಕ ಸಾಧನೆ ಮಾತ್ರವಲ್ಲ; ದೇಶಕ್ಕೆ ನೀಡಿದ ದೊಡ್ಡ ಕೊಡುಗೆ. ಒಂದು ಚಿನ್ನ ಗೆಲ್ಲಲು ಸಾಧ್ಯವಾಗುತ್ತಿಲ್ಲ ಎಂದು ಹೀಯಾಳಿಸುತ್ತಿದ್ದವರಿಗೆ ನೀಡಿದ ಉತ್ತರವಾಗಿತ್ತು. ಜೊತೆಗೆ ಭಾರತೀಯರ ಮನಸ್ಥಿತಿಯನ್ನು ಬದಲಾಯಿಸಲು ಕಾರಣವಾಯಿತು. <br /> <br /> ಈ ಬಾರಿ ಬಿಂದ್ರಾ ವಿಫಲವಾಗಿರಬಹುದು. ಆದರೆ ಗಗನ್ ನಾರಂಗ್ ಕಂಚು ಗೆದ್ದು ಶೂಟಿಂಗ್ನಲ್ಲಿ ಭಾರತ `ಹ್ಯಾಟ್ರಿಕ್~ ಪದಕದ ಸಾಧನೆ ಮಾಡಲು ಕಾರಣರಾಗಿದ್ದಾರೆ. ವಿಜಯ್ ಕುಮಾರ್ ಬೆಳ್ಳಿ ಜಯಿಸಿದ್ದಾರೆ. ಲಂಡನ್ನಲ್ಲಿ ಬಿಂದ್ರಾ ಸೋತರೂ ಅವರು ಸದಾ `ಚಿನ್ನದ ಹುಡುಗ~. ಏಕೆಂದರೆ ಅವರು ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಮೊದಲ ವ್ಯಕ್ತಿ ಎಂದು ಇತಿಹಾಸದ ಪುಟಗಳಲ್ಲಿಯೂ ರಾರಾಜಿಸುತ್ತಿದ್ದಾರೆ. ಜ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>