ಅರಣ್ಯದಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ವಾಹನ ಅಪಘಾತಕ್ಕೆ ಬಲಿಯಾಗಿರುವ ಚಿರತೆ
ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಹಾವಿನ ಮೇಲೆ ವಾಹನ ಹರಿದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿರುವ ಹಾವು
ಅರಣ್ಯದಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ವಾಹನ ಅಪಘಾತಕ್ಕೆ ಬಲಿಯಾಗಿರುವ ಕರಡಿ
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ವರ್ತುಲ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದ ಪುನುಗು ಬೆಕ್ಕು
ಮೈಸೂರು ವಿಮಾನ ನಿಲ್ದಾಣದ ಬಳಿ ಕಾರು ಡಿಕ್ಕಿಯಾಗಿ ಮೃತಪಟ್ಟಿದ್ದ ಹುಲಿ
ಬಂಡೀಪುರದಲ್ಲಿ ಲಾರಿ ಡಿಕ್ಕಿ ಹೊಡೆದಿದ್ದರಿಂದ ಮೃತಪಟ್ಟಿದ್ದ ಕಾಡಾನೆ
ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ನುಜ್ಜಿ ಸಮೀಪ ಸದಾಶಿವಗಡ–ಔರಾದ್ ರಾಜ್ಯ ಹೆದ್ದಾರಿಯಲ್ಲಿ ವಾಹನ ಅಪಘಾತದಿಂದ ಜಿಂಕೆ ಮೃತಪಟ್ಟಿರುವುದು (ಸಂಗ್ರಹ ಚಿತ್ರ)
ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ–275ರಲ್ಲಿ ಹೆದ್ದಾರಿ ಪ್ರಾಧಿಕಾರವು ನಿರ್ಮಿಸುವುದಾಗಿ ಅರಣ್ಯ ಇಲಾಖೆಗೆ ಭರವಸೆ ನೀಡಿದ್ದ ವನ್ಯಜೀವಿ ಕಾರಿಡಾರ್ ಮಾದರಿ
ಶ್ರೀರಂಗಪಟ್ಟಣ ತಾಲ್ಲೂಕಿನ ಕೆ. ಶೆಟ್ಟಿಹಳ್ಳಿ ಬಳಿ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ–27ರಲ್ಲಿ ವನ್ಯಜೀವಿಗಳ ಓಡಾಟಕ್ಕೆ ನಿರ್ಮಿಸಿರುವ ಮೇಲ್ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತಿದೆ
ಪೆಂಚ್ ರಾಷ್ಟ್ರೀಯ ಉದ್ಯಾನವನದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿರ್ಮಿಸಿರುವ ಎಲಿವೆಟೇಡ್ ಕಾರಿಡಾರ್ನಲ್ಲಿ ವನ್ಯಜೀವಿಗಳು ರಸ್ತೆ ದಾಟುವುದಕ್ಕಾಗಿ ನಿರ್ಮಿಸಿರುವ ಕೆಳ ಸೇತುವೆ ಚಿತ್ರ ಕೃಪೆ: ಎನ್ಎಚ್ಎಐ
ಪೆಂಚ್ ರಾಷ್ಟ್ರೀಯ ಉದ್ಯಾನವನದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿರ್ಮಿಸಿರುವ ಎಲಿವೆಟೇಡ್ ಕಾರಿಡಾರ್ ಚಿತ್ರ ಕೃಪೆ: ಎನ್ಎಚ್ಎಐ
ದೊಡ್ಡ ಪ್ರಾಣಿಗಳಾದರೆ ವಾಹನ ಸವಾರರಿಗೆ ಕಾಣಿಸುತ್ತವೆ. ಹಾವು ಓತಿಕ್ಯಾತ ಕಪ್ಪೆ ಸಿಂಗಳೀಕ ಸೇರಿ ಸಣ್ಣಪುಟ್ಟ ವನ್ಯಜೀವಿಗಳು ಲೆಕ್ಕಕ್ಕಿಲ್ಲವಾಗಿವೆ. ಇವು ಜೀವವೈವಿದ್ಯತೆಗೆ ಕೊಡುಗೆ ನೀಡುತ್ತಿಲ್ಲವೇ ಇವುಗಳನ್ನು ನಾವು ರಕ್ಷಣೆ ಮಾಡಬೇಕಲ್ಲವೆ?.ಡಿ.ವಿ. ಗಿರೀಶ್ ವೈಲ್ಟ್ ಕ್ಯಾಟ್ –ಸಿ ಸಂಸ್ಥೆ
ಬಂಡೀಪುರ ಕಳ್ಳಸಾಗಣೆಗೆ ದೊಡ್ಡ ದಾರಿ. ಅದಕ್ಕೆ ರಾತ್ರಿ ಸಂಚಾರಕ್ಕೆ ದೊಡ್ಡಮಟ್ಟದ ಲಾಬಿ ನಡೆಯುತ್ತಿದೆ. ಅಲ್ಲಿ ರಾತ್ರಿ ಸಂಚರಿಸುವ ಬಸ್ಗಳಲ್ಲಿ ಪ್ರಯಾಣಿಕರೇ ಇರುವುದಿಲ್ಲ. ಆದರೂ ರಾತ್ರಿ ಸಂಚಾರ ಯಾಕೆ ಬೇಕು? .ಜೋಸೆಫ್ ಹೂವರ್, ಪರಿಸರವಾದಿ
ಹೆದ್ದಾರಿಗಳಲ್ಲಿ ಪಕ್ಷಿಗಳು ಸಹ ವಾಹನ ಅಪಘಾತಕ್ಕೆ ಬಲಿಯಾಗುತ್ತಿರುವುದರ ಕುರಿತು ತಜ್ಞರ ನೇತೃತ್ವದಲ್ಲಿ ಅಧ್ಯಯನ ನಡೆಸಬೇಕು. ಪಕ್ಷಿಗಳು ವಾಹನಗಳಿಗೆ ಸಿಲುಕದಂತೆ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು.ಗೌರಿ ಶಿವಯೋಗಿ, ಪಶು–ಪಕ್ಷಿಗಳ ಸಂರಕ್ಷಕಿ
ಹೆದ್ದಾರಿ ನಿರ್ಮಾಣ ಮತ್ತು ವಿಸ್ತರಣೆ ಮಾಡುವಾಗ ವನ್ಯಜೀವಿಗಳು ರಸ್ತೆ ದಾಟಲು ಮೇಲ್ಸೇತುವೆ ಮತ್ತು ಅಂಡರ್ಪಾಸ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಕನಕಪುರ ರಸ್ತೆಯಲ್ಲಿ ಈಗಾಗಲೇ ನಿರ್ಮಾಣವಾಗಿದ್ದು ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ 3 ಕಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.ವಿಲಾಸ್ ಪಿ. ಬ್ರಹ್ಮಂಕರ್, ಪ್ರಾದೇಶಿಕ ಅಧಿಕಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಸುಪ್ರೀಂಕೋರ್ಟ್ ತೀರ್ಪಿನಂತೆ ಬಂಡೀಪುರದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವಾಹನ ಸಂಚಾರಕ್ಕೆ ನಿರ್ಬಂಧವಿದೆ. ನಿರ್ಬಂಧ ತೆರವಿಗೆ ಕೇರಳದಿಂದ ಅಧಿಕೃತ ಪ್ರಸ್ತಾವ ಬಂದಿಲ್ಲ. ಸಭೆಗಳೂ ನಡೆದಿಲ್ಲ. ಕೋರ್ಟ್ ಆದೇಶ ಮುಂದುವರಿಯಲಿದೆ.ಪ್ರಭಾಕರನ್, ನಿರ್ದೇಶಕ, ಬಂಡೀಪುರ ಹುಲಿ ಯೋಜನೆ
ಅರಣ್ಯ ಪ್ರದೇಶದಲ್ಲಿ ಹೆದ್ದಾರಿ ನಿರ್ಮಾಣ ಅಥವಾ ವಿಸ್ತರಣೆ ಯೋಜನೆ ರೂಪಿಸುವಾಗ ಆ ಮಾರ್ಗಗಳಲ್ಲಿ ಕಡ್ಡಾಯವಾಗಿ ವನ್ಯಜೀವಿಗಳ ಸರಾಗ ಓಡಾಟಕ್ಕೆ ಓವರ್ಪಾಸ್ ಮತ್ತು ಅಂಡರ್ಪಾಸ್ ಸೇತುವೆ ನಿರ್ಮಿಸಬೇಕಾಗುತ್ತದೆ. ಇಲ್ಲದಿದ್ದರೆ ಇಲಾಖೆ ಅರಣ್ಯದಲ್ಲಿ ಹೆದ್ದಾರಿ ನಿರ್ಮಾಣಕ್ಕೆ ಅನುಮತಿ ನೀಡದು.ಸುಭಾಷ್ ಕೆ. ಮಾಲ್ಖಡೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)
ಹೆದ್ದಾರಿ ನಿರ್ಮಿಸುವಾಗ ಅರಣ್ಯದೊಳಗೆ ಮಾತ್ರ ವನ್ಯಜೀವಿಗಳಿಗೆ ಸೌಲಭ್ಯ ಕಲ್ಪಿಸುವ ಬಗ್ಗೆ ಯೋಚಿಸಲಾಗುತ್ತದೆ. ಅರಣ್ಯೇತರ ಪ್ರದೇಶದಲ್ಲೂ ಸಾಗುವ ಪ್ರಾಣಿಗಳ ಸುರಕ್ಷತೆಗೂ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ದೂರದೃಷ್ಟಿಯುಳ್ಳ ತಜ್ಞರು ಹಾಗೂ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿ ಯೋಜನೆ ರೂಪಿಸಬೇಕು.ಗಿರಿಧರ ಕುಲಕರ್ಣಿ, ಪರಿಸರ ಕಾರ್ಯಕರ್ತ
ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ
ಪೂರಕ ಮಾಹಿತಿ: ಮೋಹನ್ ಕುಮಾರ ಸಿ., ಕೆ.ಎಸ್. ಗಿರೀಶ, ಸಿದ್ದು ಆರ್.ಜಿ. ಹಳ್ಳಿ, ಹನೂರು ಬಸವರಾಜ್, ವೆಂಕಟೇಶ್ ಜಿ.ಎಚ್, ಆರ್. ಮಂಜುನಾಥ್, ವಿಜಯಕುಮಾರ್ ಎಸ್.ಕೆ, ಗಣಪತಿ ಹೆಗಡೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.