‘ದೇಶದೆಲ್ಲೆಡೆ ಕೋವಿಡ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊರೊನಾ ವೈರಸ್ ದೃಢಪಟ್ಟ ಪ್ರತಿಯೊಬ್ಬ ರೋಗಿಯ ಆರೈಕೆಗೆ ಕೇಂದ್ರ ಸರ್ಕಾರವು ₹1.5 ಲಕ್ಷವನ್ನು ದೇಶದ ಪುರಸಭೆಗಳಿಗೆ ಪಾವತಿ ಮಾಡುತ್ತಿದೆ’ ಎಂಬ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರ ಮೂಲ ಮರಾಠಿ. ಬಳಿಕ ಹಿಂದಿಯಲ್ಲೂ ಈ ಸಂದೇಶ ಪ್ರಸರಣ ಆಗುತ್ತಿದೆ. ‘ಕೇಂದ್ರದ ಹಣವನ್ನು ಪಡೆಯುವ ಉದ್ದೇಶದಿಂದ, ಸಾಮಾನ್ಯ ನೆಗಡಿ ಹಾಗೂ ಸಣ್ಣ ಜ್ವರದಿಂದ ಬಳಲುವ ಜನರನ್ನೂ ಕೋವಿಡ್ ರೋಗಿಗಳು ಎಂದು ಘೋಷಿಸಲಾಗುತ್ತಿದೆ’ ಎಂಬ ಅಂಶವೂ ಒಂದು ಸಂದೇಶದಲ್ಲಿ ಇದೆ. ಇದು ನಿಜವೇ ಎಂದು ಹಲವರು ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.