ಛತ್ತೀಸಗಡದ ರಾಯಪುರದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಮಹಾಧಿವೇಶದನಲ್ಲಿ ಪಾಲ್ಗೊಂಡಿದ್ದ ಪಕ್ಷದ ಮುಖಂಡರಿಗೆ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರು ದುಬಾರಿ ಉಡುಗೊರೆ ನೀಡಿ ಸ್ವಾಗತ ಮಾಡಿದರು ಎಂಬ ಚರ್ಚೆ ಶುರುವಾಗಿದೆ. ಬಘೆಲ್ ಅವರು ಮುಖಂಡರಿಗೆ ‘ಚಿನ್ನದ ಹಾರ’ ತೊಡಿಸುತ್ತಿದ್ದಾರೆ ಎಂದು ಹೇಳಲಾಗುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ರಾಜ್ಯದಲ್ಲಿ ಆಲೂಗಡ್ಡೆಗಿಂತ ಚಿನ್ನ ಅಗ್ಗವಾಗಿದೆಯೇ’ ಎಂದು ಜಾಲತಾಣ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. ಬಘೆಲ್ ಅವರು ಚಿನ್ನದ ಸರ ಖರೀದಿಸಲು ಮಾಡಿರುವ ವೆಚ್ಚದ ವಿವರ ನೀಡುವಂತೆ ಆಗ್ರಹಿಸಿದ್ದಾರೆ. ಆದರೆ, ಈ ಸುದ್ದಿ ಸುಳ್ಳು.