<p><strong>ನವದೆಹಲಿ:</strong> 3 ತಿಂಗಳಿಗಿಂತ ಹೆಚ್ಚು ಕಾಲ ಇರುವ ದೀರ್ಘಕಾಲದ ನೋವಿನ ಸಮಸ್ಯೆಯಿಂದ ಉಂಟಾಗುವ ಖಿನ್ನತೆ ಮತ್ತು ಉರಿಯೂತ ಸಮಸ್ಯೆ ವಯಸ್ಕರಲ್ಲಿ ಅಧಿಕ ರಕ್ತದೊತ್ತಡವನ್ನು ಹೆಚ್ಚಿಸಬಹುದು ಎಂದು ಅಧ್ಯಯನವೊಂದು ತಿಳಿಸಿದೆ.</p><p>ಇಂಗ್ಲೆಂಡ್ ಬಯೋಬ್ಯಾಂಕ್ನ 2 ಲಕ್ಷಕ್ಕೂ ಅಧಿಕ ವಯಸ್ಕರ ಡೇಟಾವನ್ನು ಪರಿಶೀಲಿಸಿದ ಬಳಿಕ ಅಧಿಕ ರಕ್ತದೊತ್ತಡ ಜರ್ನಲ್ ವರದಿಯೊಂದನ್ನು ಪ್ರಕಟಿಸಿದೆ. ಸರಾಸರಿ 13.5 ವರ್ಷಗಳ ಮೇಲ್ವಿಚಾರಣೆಯ ಬಳಿಕ ಸುಮಾರು ಶೇ 10ರಷ್ಟು ವ್ಯಕ್ತಿಗಳಲ್ಲಿ ಅಧಿಕ ರಕ್ತದೊತ್ತಡ ಹೆಚ್ಚಾಗಿರುವುದು ತಿಳಿದು ಬಂದಿದೆ.</p><p>ದೀರ್ಘಕಾಲದ ನೋವು ಹೆಚ್ಚಿರುವವರಲ್ಲಿ ಅಧಿಕ ರಕ್ತದೊತ್ತಡದ ಅಪಾಯ ಸಾಮಾನ್ಯವಾಗಿದೆ ಎಂದು ಅಧ್ಯಯನ ಸ್ಪಷ್ಟಪಡಿಸಿದೆ. ನೋವು ಇಲ್ಲದವರಿಗೆ ಹೋಲಿಸಿದರೆ ಶೇ 75ರಷ್ಟು ಹೆಚ್ಚಿನ ಅಧಿಕ ರಕ್ತದೊತ್ತಡದ ಅಪಾಯವನ್ನು ನೋವು ಇರುವವದರು ಎದುರಿಸುತ್ತಿದ್ದಾರೆ.</p><p>ಅಲ್ಪಾವಧಿಯ ನೋವು ಶೇ 10ರಷ್ಟು ಅಧಿಕ ರಕ್ತದೊತ್ತಡದ ಅಪಾಯವನ್ನು ಸೂಚಿಸಿದರೆ, ದೀರ್ಘಕಾಲದ ನೋವು ಶೇ 20ರಷ್ಟು ಹೆಚ್ಚಿನ ಅಪಾಯವನ್ನು ಸೂಚಿಸಿದೆ ಎಂದು ಅಧ್ಯಯನ ತಿಳಿಸಿದೆ.</p><p>‘ಜನರಲ್ಲಿ ನೋವಿನ ತೀವ್ರತೆ ಹೆಚ್ಚಾದಷ್ಟು ಅಧಿಕ ರಕ್ತದೊತ್ತಡ ಬರುವ ಅಪಾಯ ಹೆಚ್ಚಾಗುತ್ತದೆ’ ಎಂದು ಯುಕೆಯ ಗ್ಲ್ಯಾಸ್ಗೋ ವಿವಿಯ ಸಾರ್ವಜನಿಕ ಆರೋಗ್ಯ ಪ್ರಾಧ್ಯಾಪಕ ಹಾಗೂ ಲೇಖಕ ಜಿಲ್ ಪೆಲ್ ಹೇಳಿದ್ದಾರೆ.</p><p>ಪೆಲ್ ಪ್ರಕಾರ, ಈ ಸಂಶೋಧನೆಯಲ್ಲಿ ತಿಳಿದು ಬಂದ ಅಂಶವೇನೆಂದರೆ ದೀರ್ಘಕಾಲದ ನೋವು ಜನರನ್ನು ಖಿನ್ನತೆಗೆ ಒಳಪಡಿಸುವ ಸಾಧ್ಯತೆ ಹೆಚ್ಚಿರುತ್ತದೆ. ಈ ಖಿನ್ನತೆಯಿಂದಾಗಿ ಜನರಲ್ಲಿ ಅಧಿಕ ರಕ್ತದೊತ್ತಡ ಹೆಚ್ಚಾಗುತ್ತದೆ ಎಂದಿದ್ದಾರೆ.</p><p>‘ನೋವು ಇರುವ ವ್ಯಕ್ತಿಗಳು ಸರಿಯಾದ ಚಿಕಿತ್ಸೆ ಪಡೆಯುವುದರಿಂದ ಅಧಿಕ ರಕ್ತದೊತ್ತಡ ಉಂಟಾಗುವ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು’ ಎಂದು ಪೆಲ್ ತಿಳಿಸಿದ್ದಾರೆ..</p><p>ಈ ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಶೇ 35ಕ್ಕಿಂತ ಹೆಚ್ಚು ಜನರು ದೀರ್ಘಕಾಲದ ಸ್ನಾಯು–ಅಸ್ಥಿಪಂಜರದ ನೋವನ್ನು ಅನುಭವಿಸುತ್ತಿದ್ದಾರೆ. ಶೇ 62.2ರಷ್ಟು ಜನರು ದೇಹದ ಒಂದು ಭಾಗದಲ್ಲಿ ದೀರ್ಘಕಾಲದ ನೋವನ್ನು ಅನುಭವಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. </p><p>ಉರಿಯೂತ ಮತ್ತು ಖಿನ್ನತೆ ಎರಡೂ ಕೂಡ ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತವೆ ಎಂಬುದು ತಿಳಿದಿದ್ದರೂ ಈ ಬಗ್ಗೆ ಹಿಂದಿನ ಯಾವುದೇ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಅಧ್ಯಯನಗಳು ಗಮನಹರಿಸಿಲ್ಲ ಎಂದು ಪೆಲ್ ತಿಳಿಸಿದ್ದಾರೆ.</p>.ಅಧಿಕ ರಕ್ತದೊತ್ತಡ: ಭಾರತದಲ್ಲಿ 6.7 ಕೋಟಿ ಜನರಿಗೆ ಚಿಕಿತ್ಸೆ ಬೇಕು– ಡಬ್ಲ್ಯುಎಚ್ಒ.ತರೀಕೆರೆ: ರಕ್ತದೊತ್ತಡ ಪರೀಕ್ಷೆ, ಚಿಕಿತ್ಸೆ ಅಗತ್ಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> 3 ತಿಂಗಳಿಗಿಂತ ಹೆಚ್ಚು ಕಾಲ ಇರುವ ದೀರ್ಘಕಾಲದ ನೋವಿನ ಸಮಸ್ಯೆಯಿಂದ ಉಂಟಾಗುವ ಖಿನ್ನತೆ ಮತ್ತು ಉರಿಯೂತ ಸಮಸ್ಯೆ ವಯಸ್ಕರಲ್ಲಿ ಅಧಿಕ ರಕ್ತದೊತ್ತಡವನ್ನು ಹೆಚ್ಚಿಸಬಹುದು ಎಂದು ಅಧ್ಯಯನವೊಂದು ತಿಳಿಸಿದೆ.</p><p>ಇಂಗ್ಲೆಂಡ್ ಬಯೋಬ್ಯಾಂಕ್ನ 2 ಲಕ್ಷಕ್ಕೂ ಅಧಿಕ ವಯಸ್ಕರ ಡೇಟಾವನ್ನು ಪರಿಶೀಲಿಸಿದ ಬಳಿಕ ಅಧಿಕ ರಕ್ತದೊತ್ತಡ ಜರ್ನಲ್ ವರದಿಯೊಂದನ್ನು ಪ್ರಕಟಿಸಿದೆ. ಸರಾಸರಿ 13.5 ವರ್ಷಗಳ ಮೇಲ್ವಿಚಾರಣೆಯ ಬಳಿಕ ಸುಮಾರು ಶೇ 10ರಷ್ಟು ವ್ಯಕ್ತಿಗಳಲ್ಲಿ ಅಧಿಕ ರಕ್ತದೊತ್ತಡ ಹೆಚ್ಚಾಗಿರುವುದು ತಿಳಿದು ಬಂದಿದೆ.</p><p>ದೀರ್ಘಕಾಲದ ನೋವು ಹೆಚ್ಚಿರುವವರಲ್ಲಿ ಅಧಿಕ ರಕ್ತದೊತ್ತಡದ ಅಪಾಯ ಸಾಮಾನ್ಯವಾಗಿದೆ ಎಂದು ಅಧ್ಯಯನ ಸ್ಪಷ್ಟಪಡಿಸಿದೆ. ನೋವು ಇಲ್ಲದವರಿಗೆ ಹೋಲಿಸಿದರೆ ಶೇ 75ರಷ್ಟು ಹೆಚ್ಚಿನ ಅಧಿಕ ರಕ್ತದೊತ್ತಡದ ಅಪಾಯವನ್ನು ನೋವು ಇರುವವದರು ಎದುರಿಸುತ್ತಿದ್ದಾರೆ.</p><p>ಅಲ್ಪಾವಧಿಯ ನೋವು ಶೇ 10ರಷ್ಟು ಅಧಿಕ ರಕ್ತದೊತ್ತಡದ ಅಪಾಯವನ್ನು ಸೂಚಿಸಿದರೆ, ದೀರ್ಘಕಾಲದ ನೋವು ಶೇ 20ರಷ್ಟು ಹೆಚ್ಚಿನ ಅಪಾಯವನ್ನು ಸೂಚಿಸಿದೆ ಎಂದು ಅಧ್ಯಯನ ತಿಳಿಸಿದೆ.</p><p>‘ಜನರಲ್ಲಿ ನೋವಿನ ತೀವ್ರತೆ ಹೆಚ್ಚಾದಷ್ಟು ಅಧಿಕ ರಕ್ತದೊತ್ತಡ ಬರುವ ಅಪಾಯ ಹೆಚ್ಚಾಗುತ್ತದೆ’ ಎಂದು ಯುಕೆಯ ಗ್ಲ್ಯಾಸ್ಗೋ ವಿವಿಯ ಸಾರ್ವಜನಿಕ ಆರೋಗ್ಯ ಪ್ರಾಧ್ಯಾಪಕ ಹಾಗೂ ಲೇಖಕ ಜಿಲ್ ಪೆಲ್ ಹೇಳಿದ್ದಾರೆ.</p><p>ಪೆಲ್ ಪ್ರಕಾರ, ಈ ಸಂಶೋಧನೆಯಲ್ಲಿ ತಿಳಿದು ಬಂದ ಅಂಶವೇನೆಂದರೆ ದೀರ್ಘಕಾಲದ ನೋವು ಜನರನ್ನು ಖಿನ್ನತೆಗೆ ಒಳಪಡಿಸುವ ಸಾಧ್ಯತೆ ಹೆಚ್ಚಿರುತ್ತದೆ. ಈ ಖಿನ್ನತೆಯಿಂದಾಗಿ ಜನರಲ್ಲಿ ಅಧಿಕ ರಕ್ತದೊತ್ತಡ ಹೆಚ್ಚಾಗುತ್ತದೆ ಎಂದಿದ್ದಾರೆ.</p><p>‘ನೋವು ಇರುವ ವ್ಯಕ್ತಿಗಳು ಸರಿಯಾದ ಚಿಕಿತ್ಸೆ ಪಡೆಯುವುದರಿಂದ ಅಧಿಕ ರಕ್ತದೊತ್ತಡ ಉಂಟಾಗುವ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು’ ಎಂದು ಪೆಲ್ ತಿಳಿಸಿದ್ದಾರೆ..</p><p>ಈ ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಶೇ 35ಕ್ಕಿಂತ ಹೆಚ್ಚು ಜನರು ದೀರ್ಘಕಾಲದ ಸ್ನಾಯು–ಅಸ್ಥಿಪಂಜರದ ನೋವನ್ನು ಅನುಭವಿಸುತ್ತಿದ್ದಾರೆ. ಶೇ 62.2ರಷ್ಟು ಜನರು ದೇಹದ ಒಂದು ಭಾಗದಲ್ಲಿ ದೀರ್ಘಕಾಲದ ನೋವನ್ನು ಅನುಭವಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. </p><p>ಉರಿಯೂತ ಮತ್ತು ಖಿನ್ನತೆ ಎರಡೂ ಕೂಡ ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತವೆ ಎಂಬುದು ತಿಳಿದಿದ್ದರೂ ಈ ಬಗ್ಗೆ ಹಿಂದಿನ ಯಾವುದೇ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಅಧ್ಯಯನಗಳು ಗಮನಹರಿಸಿಲ್ಲ ಎಂದು ಪೆಲ್ ತಿಳಿಸಿದ್ದಾರೆ.</p>.ಅಧಿಕ ರಕ್ತದೊತ್ತಡ: ಭಾರತದಲ್ಲಿ 6.7 ಕೋಟಿ ಜನರಿಗೆ ಚಿಕಿತ್ಸೆ ಬೇಕು– ಡಬ್ಲ್ಯುಎಚ್ಒ.ತರೀಕೆರೆ: ರಕ್ತದೊತ್ತಡ ಪರೀಕ್ಷೆ, ಚಿಕಿತ್ಸೆ ಅಗತ್ಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>