<p>ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗ ಕ್ಷಯದ ಮೂಲ ಮೈಕೋಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾ. ಕಫದಲ್ಲಿ ಬ್ಯಾಕ್ಟೀರಿಯಾ ಇರುವ ರೋಗಿಗಳು ಕೆಮ್ಮುವಾಗ, ಉಗುಳುವಾಗ ಈ ಕ್ರಿಮಿಗಳು ಗಾಳಿಯಲ್ಲಿ ಸೇರಿಕೊಂಡು ಉಸಿರಿನ ಮೂಲಕ ಇತರರಿಗೆ ಹರಡುತ್ತದೆ.</p>.<p><strong>ರೋಗ ತಗಲಬಹುದಾದ ಅಂಗಾಂಗಗಳು:</strong> ಶ್ವಾಸಕೋಶಗಳು, ಸಣ್ಣ ಕರುಳು, ಗ್ರಂಥಿಗಳು, ಮೆದುಳು ಮತ್ತು ಅದರ ಹೊರಪದರಗಳು, ಎಲುಬುಗಳು ಹಾಗೂ ಗರ್ಭಕೋಶ ಈ ಸೋಂಕಿಗೆ ಸಾಮಾನ್ಯವಾಗಿ ತುತ್ತಾಗುತ್ತವೆ. ಆದರೆ ಕೂದಲು ಮತ್ತು ಉಗುರುಗಳನ್ನು ಬಿಟ್ಟು ಯಾವುದೇ ಅಂಗಗಳನ್ನು ಇದು ಬಲಿ ತೆಗೆದುಕೊಳ್ಳಬಹುದು.</p>.<p>ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸಿದಾಗ, ದೇಹದ ರೋಗ ನಿರೋಧಕ ವ್ಯವಸ್ಥೆಯು ಅವನ್ನು ದಮನಿಸಲು ಪ್ರಯತ್ನಿಸುತ್ತದೆ. ಆ ಜಾಗಕ್ಕೆ ಹೊಂದಿಕೊಂಡಂತಹ ಗ್ರಂಥಿಗಳು ವಿಪರೀತವಾಗಿ ಊದಿರುತ್ತವೆ. ಈ ಹಂತವನ್ನು ರೋಗದ ಪ್ರಾಥಮಿಕ ಹಂತವೆನ್ನುತ್ತೇವೆ. ಈ ಹಂತವು ಹೆಚ್ಚಿನ ಸಂದರ್ಭಗಳಲ್ಲಿ ತನ್ನಿಂದ ತಾನಾಗಿಯೇ ಶಮನವಾಗುತ್ತದೆ.</p>.<p>ಇದಾಗಿ ಎಷ್ಟೋ ವರ್ಷಗಳ ನಂತರ ವ್ಯಕ್ತಿಯ ರೋಗನಿರೋಧಕ ಶಕ್ತಿಯಲ್ಲಿ ಕೊರತೆಯುಂಟಾದಾಗ ಸೋಂಕಿನ ಬ್ಯಾಕ್ಟೀರಿಯಾಗಳು ದೇಹದ ಅಂಗಗಳಲ್ಲಿ ವೃದ್ಧಿಯಾಗಿ ರೋಗ ಉಂಟುಮಾಡುತ್ತವೆ. ಈ ಹಂತವನ್ನು ‘ಪೋಸ್ಟ್ ಪ್ರೈಮರಿ’ ಹಂತವೆನ್ನುತ್ತಾರೆ. ಕೆಲವು ಸಂದರ್ಭಗಳಲ್ಲಿ ದೇಹದ ಎಲ್ಲಾ ಅಂಗಾಂಗಗಳಿಗೂ ವ್ಯಾಪಕವಾಗಿ ಹರಡಬಹುದು. ಈ ಪ್ರಭೇದವನ್ನು ಮಿಲಿಯರಿ ಕ್ಷಯರೋಗವೆನ್ನುತ್ತಾರೆ.</p>.<p><strong>ರೋಗ ಲಕ್ಷಣಗಳೇನು?</strong></p>.<p>l ಯಾವುದೇ ವ್ಯಕ್ತಿ ಎರಡು-ಮೂರು ವಾರಗಳಿಗಿಂತ ಹೆಚ್ಚಾಗಿ ಕೆಮ್ಮುತ್ತಿದ್ದರೆ ತಪಾಸಣೆಗೆ ಒಳಗಾಗಬೇಕು.</p>.<p>l ಕಫದಲ್ಲಿ ರಕ್ತ ಬರುವುದು.</p>.<p>l ಸಾಯಂಕಾಲ ಬರುವ ಸಣ್ಣ ಜ್ವರ-ಎರಡು ಮೂರು ವಾರಗಳಿಗಿಂತ ಹೆಚ್ಚಾಗಿ ಸುಸ್ತು, ರಾತ್ರಿ ಹೊತ್ತು ಬೆವರುವುದು.</p>.<p>l ಹಸಿವೆ ಕಡಿಮೆಯಾಗುವುದು ಮತ್ತು ತೂಕ ಕಡಿಮೆಯಾಗುವುದು.</p>.<p>l ಹೊಟ್ಟೆ ನೋವು, ಉಬ್ಬರ, ಭೇದಿಯಾಗುವುದು.</p>.<p>l ಬೆನ್ನು, ಮೂಳೆಗಳಲ್ಲಿ ವಿಪರೀತ ನೋವು.</p>.<p>l ಕತ್ತಿನಲ್ಲಿ, ಕಂಕುಳಲ್ಲಿ ಕಾಣಿಸುವ ಊತ.</p>.<p>l ತಲೆ ನೋವು, ವಾಂತಿ, ಮಂಪರು, ಅಪಸ್ಮಾರ.</p>.<p><strong>ರೋಗ ಪತ್ತೆ ಹೇಗೆ?</strong></p>.<p>ಕಫ ಪರೀಕ್ಷೆ- ಮೈಕ್ರೋಸ್ಕೊಪಿ, ಟಿ.ಬಿ.ಕಲ್ಚರ್ ಮತ್ತು ಸೆನ್ಸಿಟಿವಿಟಿ.</p>.<p><strong>ಕ್ಷ- ಕಿರಣ</strong></p>.<p>ಬಯಾಪ್ಸಿ- ಗ್ರಂಥಿಯ ಅಥವಾ ರೋಗ ತಗಲಿರಬಹುದಾದ ಅಂಗದ ತುಣುಕನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಪರೀಕ್ಷೆಗೆ ಒಳಪಡಿಸುವುದು.</p>.<p>ಮ್ಯಾಂಟೂ ಪರೀಕ್ಷೆ- ಇದು ದೊಡ್ಡವರಲ್ಲಿ ಸಹಾಯಕವಲ್ಲ. ಕೆಲವು ಮಕ್ಕಳಲ್ಲಿ ಸಹಾಯವಾಗಬಹುದು.</p>.<p>ಇತ್ತೀಚಿಗೆ ಬಂದಿರುವ ಪರೀಕ್ಷೆಗಳು: ಸಿಬಿ-ನಾಟ್ ಮತ್ತು ಲೈನ್ ಪ್ರೋಬ್ ಅಸ್ಸೇಗಳು ಬಹುಸಂಖ್ಯೆಯಲ್ಲಿ, ಬಹುಬೇಗ ಮತ್ತು ನಿಖರವಾಗಿ ರೋಗ ಪತ್ತೆ ಮಾಡಲು ಸಹಾಯಕ.</p>.<p><strong>ಚಿಕಿತ್ಸೆ</strong></p>.<p>ಕ್ಷಯರೋಗ ಎಲ್ಲಾ ಸೋಂಕುಗಳಂತಲ್ಲ. ರೋಗಪೀಡಿತ ಜಾಗದಲ್ಲಿ ಬೇರೆ ಬೇರೆ ಹಂತದ ಬೆಳವಣಿಗೆಯಲ್ಲಿರುವ ಮತ್ತು ಬೇರೆ ಬೇರೆ ವೇಗದಲ್ಲಿ ಹೆಚ್ಚುತ್ತಿರುವ ಬ್ಯಾಕ್ಟೀರಿಯಾಗಳಿರುತ್ತವೆ. ಇವೆಲ್ಲವನ್ನೂ ತಹಬಂದಿಗೆ ತರಲು ಹಲವು ಔಷಧಿಗಳನ್ನು ಒಟ್ಟಿಗೇ ಕೊಡಬೇಕಾಗುತ್ತದೆ ಮತ್ತು ಚಿಕಿತ್ಸೆಗೆ ದೀರ್ಘಕಾಲ ಹಿಡಿಯುತ್ತದೆ.</p>.<p>ಔಷಧಿಗಳನ್ನು ದಿನವೂ ಸೇವಿಸಬೇಕು. ವಾರಕ್ಕೆ ಮೂರು ದಿನ ಔಷಧಿ ಸೇವನೆಯ ಕ್ರಮವನ್ನು ಇತ್ತೀಚಿಗೆ ದಿನನಿತ್ಯದ ಸೇವನೆಗೆ ಬದಲಾಯಿಸಲಾಗಿದೆ. ಮರು ಚಿಕಿತ್ಸೆಯ ಸಂದರ್ಭದಲ್ಲಿ ತಜ್ಞರ ಸಲಹೆ ರೋಗಿಯಿಂದ ರೋಗಿಗೆ ಸಂದರ್ಭಾನುಸಾರ ವ್ಯತ್ಯಾಸವಾಗುತ್ತದೆ.</p>.<p>ಭಾರತ ಸರ್ಕಾರದ ಡಾಟ್ಸ್ ಕಾರ್ಯಕ್ರಮದ ಮೂಲಕ ಔಷಧ ಸೇವನೆಯನ್ನು ಆರೋಗ್ಯ ಕಾರ್ಯಕರ್ತರ ಸಮಕ್ಷಮದಲ್ಲಿ ಮಾಡಿಸಲಾಗುತ್ತದೆ. ಉತ್ತಮ ಗುಣಮಟ್ಟದ ಔಷಧಿಗಳನ್ನು ಸರಕಾರದಿಂದ ಉಚಿತವಾಗಿ ಪೂರೈಸಲಾಗುತ್ತದೆ.</p>.<p>***</p>.<p><strong>ರೋಗ ತಡೆಗಟ್ಟುವಿಕೆ</strong></p>.<p>ಬಿ.ಸಿ.ಜಿ.: ಕ್ಷಯರೋಗ ತಡೆಗಟ್ಟಲು ಬಿ.ಸಿ.ಜಿ. ಚುಚ್ಚುಮದ್ದನ್ನು ಮಗು ಹುಟ್ಟಿದ ಹಲವು ದಿನಗಳಲ್ಲಿ ಹಾಕಲಾಗುತ್ತದೆ. ಇದು ಖಂಡಿತವಾಗಿಯೂ ಮಿಲಿಯರಿ ಎಂಬ ತೀವ್ರ ಸ್ವರೂಪದ ಮತ್ತು ದೇಹದ ಎಲ್ಲ ಅಂಗಗಳಿಗೂ ಹರಡುವ ತೀವ್ರ ಕ್ಷಯರೋಗವನ್ನು ಹಾಗೂ ಟಿಬಿ ಮೆನಿಂಜೈಟಿಸ್ ಎಂಬ ಮೆದುಳು ಕವಚಗಳ ಉರಿಯೂತವನ್ನು ತಡೆಗಟ್ಟುತ್ತದೆ.</p>.<p><strong>ರೋಗಿಗಳಿಗೆ ಕಿವಿಮಾತು</strong></p>.<p>l ಸಂಶಯ ಬಂದಾಗ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಿ.</p>.<p>l ಕೊಟ್ಟ ಔಷಧಿಗಳನ್ನು ಸರಿಯಾದ ರೀತಿಯಲ್ಲಿ ಸೇವಿಸಿ.</p>.<p>l ಔಷಧಿಗಳನ್ನು ಅವಧಿಗೆ ಮುನ್ನ ನಿಲ್ಲಿಸಬೇಡಿ.</p>.<p>l ಔಷಧಿಗಳಿಗೆ ವ್ಯತಿರಿಕ್ತ ಪರಿಣಾಮ ಕಂಡು ಬಂದರೆ ಕೂಡಲೇ ವೈದ್ಯರ ಸಲಹೆ ಪಡೆಯಿರಿ.</p>.<p>l ಎಲ್ಲೆಂದರಲ್ಲಿ ಕಫ ಉಗಿಯಬೇಡಿ.</p>.<p>l ರೋಗ ಶಮನವಾಗಲು ಪೂರಕವಾಗಿ ಪೌಷ್ಟಿಕ ಆಹಾರವನ್ನು ಸೇವಿಸಿ.</p>.<p>l ಮದ್ಯ ಸಿಗರೇಟುಗಳಿಂದ ದೂರವಿರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗ ಕ್ಷಯದ ಮೂಲ ಮೈಕೋಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾ. ಕಫದಲ್ಲಿ ಬ್ಯಾಕ್ಟೀರಿಯಾ ಇರುವ ರೋಗಿಗಳು ಕೆಮ್ಮುವಾಗ, ಉಗುಳುವಾಗ ಈ ಕ್ರಿಮಿಗಳು ಗಾಳಿಯಲ್ಲಿ ಸೇರಿಕೊಂಡು ಉಸಿರಿನ ಮೂಲಕ ಇತರರಿಗೆ ಹರಡುತ್ತದೆ.</p>.<p><strong>ರೋಗ ತಗಲಬಹುದಾದ ಅಂಗಾಂಗಗಳು:</strong> ಶ್ವಾಸಕೋಶಗಳು, ಸಣ್ಣ ಕರುಳು, ಗ್ರಂಥಿಗಳು, ಮೆದುಳು ಮತ್ತು ಅದರ ಹೊರಪದರಗಳು, ಎಲುಬುಗಳು ಹಾಗೂ ಗರ್ಭಕೋಶ ಈ ಸೋಂಕಿಗೆ ಸಾಮಾನ್ಯವಾಗಿ ತುತ್ತಾಗುತ್ತವೆ. ಆದರೆ ಕೂದಲು ಮತ್ತು ಉಗುರುಗಳನ್ನು ಬಿಟ್ಟು ಯಾವುದೇ ಅಂಗಗಳನ್ನು ಇದು ಬಲಿ ತೆಗೆದುಕೊಳ್ಳಬಹುದು.</p>.<p>ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸಿದಾಗ, ದೇಹದ ರೋಗ ನಿರೋಧಕ ವ್ಯವಸ್ಥೆಯು ಅವನ್ನು ದಮನಿಸಲು ಪ್ರಯತ್ನಿಸುತ್ತದೆ. ಆ ಜಾಗಕ್ಕೆ ಹೊಂದಿಕೊಂಡಂತಹ ಗ್ರಂಥಿಗಳು ವಿಪರೀತವಾಗಿ ಊದಿರುತ್ತವೆ. ಈ ಹಂತವನ್ನು ರೋಗದ ಪ್ರಾಥಮಿಕ ಹಂತವೆನ್ನುತ್ತೇವೆ. ಈ ಹಂತವು ಹೆಚ್ಚಿನ ಸಂದರ್ಭಗಳಲ್ಲಿ ತನ್ನಿಂದ ತಾನಾಗಿಯೇ ಶಮನವಾಗುತ್ತದೆ.</p>.<p>ಇದಾಗಿ ಎಷ್ಟೋ ವರ್ಷಗಳ ನಂತರ ವ್ಯಕ್ತಿಯ ರೋಗನಿರೋಧಕ ಶಕ್ತಿಯಲ್ಲಿ ಕೊರತೆಯುಂಟಾದಾಗ ಸೋಂಕಿನ ಬ್ಯಾಕ್ಟೀರಿಯಾಗಳು ದೇಹದ ಅಂಗಗಳಲ್ಲಿ ವೃದ್ಧಿಯಾಗಿ ರೋಗ ಉಂಟುಮಾಡುತ್ತವೆ. ಈ ಹಂತವನ್ನು ‘ಪೋಸ್ಟ್ ಪ್ರೈಮರಿ’ ಹಂತವೆನ್ನುತ್ತಾರೆ. ಕೆಲವು ಸಂದರ್ಭಗಳಲ್ಲಿ ದೇಹದ ಎಲ್ಲಾ ಅಂಗಾಂಗಗಳಿಗೂ ವ್ಯಾಪಕವಾಗಿ ಹರಡಬಹುದು. ಈ ಪ್ರಭೇದವನ್ನು ಮಿಲಿಯರಿ ಕ್ಷಯರೋಗವೆನ್ನುತ್ತಾರೆ.</p>.<p><strong>ರೋಗ ಲಕ್ಷಣಗಳೇನು?</strong></p>.<p>l ಯಾವುದೇ ವ್ಯಕ್ತಿ ಎರಡು-ಮೂರು ವಾರಗಳಿಗಿಂತ ಹೆಚ್ಚಾಗಿ ಕೆಮ್ಮುತ್ತಿದ್ದರೆ ತಪಾಸಣೆಗೆ ಒಳಗಾಗಬೇಕು.</p>.<p>l ಕಫದಲ್ಲಿ ರಕ್ತ ಬರುವುದು.</p>.<p>l ಸಾಯಂಕಾಲ ಬರುವ ಸಣ್ಣ ಜ್ವರ-ಎರಡು ಮೂರು ವಾರಗಳಿಗಿಂತ ಹೆಚ್ಚಾಗಿ ಸುಸ್ತು, ರಾತ್ರಿ ಹೊತ್ತು ಬೆವರುವುದು.</p>.<p>l ಹಸಿವೆ ಕಡಿಮೆಯಾಗುವುದು ಮತ್ತು ತೂಕ ಕಡಿಮೆಯಾಗುವುದು.</p>.<p>l ಹೊಟ್ಟೆ ನೋವು, ಉಬ್ಬರ, ಭೇದಿಯಾಗುವುದು.</p>.<p>l ಬೆನ್ನು, ಮೂಳೆಗಳಲ್ಲಿ ವಿಪರೀತ ನೋವು.</p>.<p>l ಕತ್ತಿನಲ್ಲಿ, ಕಂಕುಳಲ್ಲಿ ಕಾಣಿಸುವ ಊತ.</p>.<p>l ತಲೆ ನೋವು, ವಾಂತಿ, ಮಂಪರು, ಅಪಸ್ಮಾರ.</p>.<p><strong>ರೋಗ ಪತ್ತೆ ಹೇಗೆ?</strong></p>.<p>ಕಫ ಪರೀಕ್ಷೆ- ಮೈಕ್ರೋಸ್ಕೊಪಿ, ಟಿ.ಬಿ.ಕಲ್ಚರ್ ಮತ್ತು ಸೆನ್ಸಿಟಿವಿಟಿ.</p>.<p><strong>ಕ್ಷ- ಕಿರಣ</strong></p>.<p>ಬಯಾಪ್ಸಿ- ಗ್ರಂಥಿಯ ಅಥವಾ ರೋಗ ತಗಲಿರಬಹುದಾದ ಅಂಗದ ತುಣುಕನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಪರೀಕ್ಷೆಗೆ ಒಳಪಡಿಸುವುದು.</p>.<p>ಮ್ಯಾಂಟೂ ಪರೀಕ್ಷೆ- ಇದು ದೊಡ್ಡವರಲ್ಲಿ ಸಹಾಯಕವಲ್ಲ. ಕೆಲವು ಮಕ್ಕಳಲ್ಲಿ ಸಹಾಯವಾಗಬಹುದು.</p>.<p>ಇತ್ತೀಚಿಗೆ ಬಂದಿರುವ ಪರೀಕ್ಷೆಗಳು: ಸಿಬಿ-ನಾಟ್ ಮತ್ತು ಲೈನ್ ಪ್ರೋಬ್ ಅಸ್ಸೇಗಳು ಬಹುಸಂಖ್ಯೆಯಲ್ಲಿ, ಬಹುಬೇಗ ಮತ್ತು ನಿಖರವಾಗಿ ರೋಗ ಪತ್ತೆ ಮಾಡಲು ಸಹಾಯಕ.</p>.<p><strong>ಚಿಕಿತ್ಸೆ</strong></p>.<p>ಕ್ಷಯರೋಗ ಎಲ್ಲಾ ಸೋಂಕುಗಳಂತಲ್ಲ. ರೋಗಪೀಡಿತ ಜಾಗದಲ್ಲಿ ಬೇರೆ ಬೇರೆ ಹಂತದ ಬೆಳವಣಿಗೆಯಲ್ಲಿರುವ ಮತ್ತು ಬೇರೆ ಬೇರೆ ವೇಗದಲ್ಲಿ ಹೆಚ್ಚುತ್ತಿರುವ ಬ್ಯಾಕ್ಟೀರಿಯಾಗಳಿರುತ್ತವೆ. ಇವೆಲ್ಲವನ್ನೂ ತಹಬಂದಿಗೆ ತರಲು ಹಲವು ಔಷಧಿಗಳನ್ನು ಒಟ್ಟಿಗೇ ಕೊಡಬೇಕಾಗುತ್ತದೆ ಮತ್ತು ಚಿಕಿತ್ಸೆಗೆ ದೀರ್ಘಕಾಲ ಹಿಡಿಯುತ್ತದೆ.</p>.<p>ಔಷಧಿಗಳನ್ನು ದಿನವೂ ಸೇವಿಸಬೇಕು. ವಾರಕ್ಕೆ ಮೂರು ದಿನ ಔಷಧಿ ಸೇವನೆಯ ಕ್ರಮವನ್ನು ಇತ್ತೀಚಿಗೆ ದಿನನಿತ್ಯದ ಸೇವನೆಗೆ ಬದಲಾಯಿಸಲಾಗಿದೆ. ಮರು ಚಿಕಿತ್ಸೆಯ ಸಂದರ್ಭದಲ್ಲಿ ತಜ್ಞರ ಸಲಹೆ ರೋಗಿಯಿಂದ ರೋಗಿಗೆ ಸಂದರ್ಭಾನುಸಾರ ವ್ಯತ್ಯಾಸವಾಗುತ್ತದೆ.</p>.<p>ಭಾರತ ಸರ್ಕಾರದ ಡಾಟ್ಸ್ ಕಾರ್ಯಕ್ರಮದ ಮೂಲಕ ಔಷಧ ಸೇವನೆಯನ್ನು ಆರೋಗ್ಯ ಕಾರ್ಯಕರ್ತರ ಸಮಕ್ಷಮದಲ್ಲಿ ಮಾಡಿಸಲಾಗುತ್ತದೆ. ಉತ್ತಮ ಗುಣಮಟ್ಟದ ಔಷಧಿಗಳನ್ನು ಸರಕಾರದಿಂದ ಉಚಿತವಾಗಿ ಪೂರೈಸಲಾಗುತ್ತದೆ.</p>.<p>***</p>.<p><strong>ರೋಗ ತಡೆಗಟ್ಟುವಿಕೆ</strong></p>.<p>ಬಿ.ಸಿ.ಜಿ.: ಕ್ಷಯರೋಗ ತಡೆಗಟ್ಟಲು ಬಿ.ಸಿ.ಜಿ. ಚುಚ್ಚುಮದ್ದನ್ನು ಮಗು ಹುಟ್ಟಿದ ಹಲವು ದಿನಗಳಲ್ಲಿ ಹಾಕಲಾಗುತ್ತದೆ. ಇದು ಖಂಡಿತವಾಗಿಯೂ ಮಿಲಿಯರಿ ಎಂಬ ತೀವ್ರ ಸ್ವರೂಪದ ಮತ್ತು ದೇಹದ ಎಲ್ಲ ಅಂಗಗಳಿಗೂ ಹರಡುವ ತೀವ್ರ ಕ್ಷಯರೋಗವನ್ನು ಹಾಗೂ ಟಿಬಿ ಮೆನಿಂಜೈಟಿಸ್ ಎಂಬ ಮೆದುಳು ಕವಚಗಳ ಉರಿಯೂತವನ್ನು ತಡೆಗಟ್ಟುತ್ತದೆ.</p>.<p><strong>ರೋಗಿಗಳಿಗೆ ಕಿವಿಮಾತು</strong></p>.<p>l ಸಂಶಯ ಬಂದಾಗ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಿ.</p>.<p>l ಕೊಟ್ಟ ಔಷಧಿಗಳನ್ನು ಸರಿಯಾದ ರೀತಿಯಲ್ಲಿ ಸೇವಿಸಿ.</p>.<p>l ಔಷಧಿಗಳನ್ನು ಅವಧಿಗೆ ಮುನ್ನ ನಿಲ್ಲಿಸಬೇಡಿ.</p>.<p>l ಔಷಧಿಗಳಿಗೆ ವ್ಯತಿರಿಕ್ತ ಪರಿಣಾಮ ಕಂಡು ಬಂದರೆ ಕೂಡಲೇ ವೈದ್ಯರ ಸಲಹೆ ಪಡೆಯಿರಿ.</p>.<p>l ಎಲ್ಲೆಂದರಲ್ಲಿ ಕಫ ಉಗಿಯಬೇಡಿ.</p>.<p>l ರೋಗ ಶಮನವಾಗಲು ಪೂರಕವಾಗಿ ಪೌಷ್ಟಿಕ ಆಹಾರವನ್ನು ಸೇವಿಸಿ.</p>.<p>l ಮದ್ಯ ಸಿಗರೇಟುಗಳಿಂದ ದೂರವಿರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>