<p><strong>ಮುಂಗಾರು ಮಳೆ ಆರಂಭವಾಗಿದೆ. ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವ ಈ ಬದಲಾವಣೆಯ ಕಾಲದಲ್ಲಿ ಆರೋಗ್ಯದಲ್ಲಿ ತುಸು ವ್ಯತ್ಯಾಸವಾಗುವುದು ಸಹಜ. ಇಂಥ ಸಮಯದಲ್ಲಿ ಮನೆಯಲ್ಲಿ ನಿತ್ಯ ಬಳಕೆಯಲ್ಲಿರುವ ವಸ್ತುಗಳನ್ನು ಬಳಸಿ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು. ಈ ಕುರಿತ ಟಿಪ್ಸ್ ಇಲ್ಲಿದೆ.</strong></p>.<p>l→ಮಳೆಗೆ ನೆನೆದಾಗ ನೆಗಡಿ, ಜ್ವರ ಬಾಧಿಸುವುದು ಸಾಮಾನ್ಯ. ನೆಗಡಿಯಾದಾಗ ಅರಿಶಿನದ ಪುಡಿಯನ್ನು ಕೆಂಡದ ಮೇಲೆ ಹಾಕಿ ಅದರ ಹೊಗೆ ತಗೊಳ್ಳಬಹುದು.</p>.<p>l→ಒಂದು ಲೋಟ ಬಿಸಿ ಹಾಲು ಅಥವಾ ಬಿಸಿ ನೀರಿಗೆ ಅರಿಶಿನ ಪುಡಿ ಬೆರೆಸಿ, ಸ್ವಲ್ಪ ಬೆಲ್ಲ ಹಾಕಿ ಬೆಳಿಗ್ಗೆ ಹೊತ್ತು ಕುಡಿಯಬಹುದು. ಇದರಿಂದ ನೆಗಡಿ ನಿಯಂತ್ರಣವಾಗುತ್ತದೆ.</p>.<p>l→ಥಂಡಿಕಾಲದಲ್ಲಿ ನೆಗಡಿ ಜೊತೆಗೆ ಗಂಟಲು ಕೆರೆತ, ಕೆಮ್ಮು ಬಾಧಿಸುತ್ತದೆ. ಕೆಮ್ಮು ನಿವಾರಣೆಗೆ ಹೀಗೆ ಮಾಡಿ; ಶುಂಠಿ, ಹಿಪ್ಪಲಿ, ಮೆಣಸು ಮೂರು ತಲಾ 10 ಗ್ರಾಂ, ಜೇಷ್ಟಮಧು 30 ಗ್ರಾಂ. ಎಲ್ಲವನ್ನೂ ಕುಟ್ಟಿ ನುಣ್ಣಗೆ ಪುಡಿ ಮಾಡಿ. ಒಂದು ಚಮಚ ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ, ದಿನಕ್ಕೆ ಮೂರು ಸಾರಿ ಸೇವಿಸಿ.</p>.<p>l→ನೀರು, ಆಹಾರದ ವ್ಯತ್ಯಾಸ, ವಾತಾವರಣದ ಏರುಪೇರಿನ ಕಾರಣಕ್ಕೆ ಮಳೆಗಾಲದಲ್ಲಿ ಗಂಟಲ ನೋವು ಬಾಧಿಸುತ್ತದೆ. ಇದರ ನಿವಾರಣೆಗೆ ಹೀಗೆ ಮಾಡಿ; ದ್ರಾಕ್ಷಿ, ಕಾಳುಮೆಣಸು, ಜೇಷ್ಠ ಮಧು ಇವೆಲ್ಲವನ್ನೂ ಸಮಪ್ರಮಾಣದಲ್ಲಿ ತೆಗೆದು ಕೊಂಡು, ಕುಟ್ಟಿ ಮಾತ್ರೆ ಮಾಡಿ. ಅದನ್ನು ಗುಳಿಗೆ ಮಾಡಿ. ದಿನಕ್ಕೆ ಮೂರು ಬಾರಿ ಸೇವಿಸಬಹುದು.</p>.<p>l→ಮಳೆಗಾಲದಲ್ಲಿ ನೀರಿನ ಬಗ್ಗೆಯೂ ಎಚ್ಚರವಹಿಸಬೇಕು. ಈ ಸಮಯದಲ್ಲಿ ದೇಹವೂ ತಂಪಾಗಿರುತ್ತದೆ. ಹಾಗಾಗಿ ನೀರು ಕಾಯಿಸಿ ಕುಡಿಯುವುದು ಒಳ್ಳೆಯುದು. ನೀರನ್ನು ಕಾಯಿಸುವಾಗ ಚಿಕ್ಕತುಂಡು ಶುಂಠಿ ಅಥವಾ ತುಳಸಿ ಹಾಕಿ. ಹದವಾದ ಬಿಸಿಯಲ್ಲೇ ನೀರು ಕುಡಿಯಿರಿ.</p>.<p>l→ಗಂಟಲು ಕಟ್ಟಿ ಧ್ವನಿ ತೊಂದರೆಯಿರುವವರು ಒಂದೆಲಗ,ಬಜೆ ಶುಂಠಿ ಹಿಪ್ಪಲಿ ಸಮಭಾಗ, ಕುಟ್ಟಿ ಪುಡಿ ಮಾಡಿಟ್ಟುಕೊಂಡು ಜೇನುತಪ್ಪದಲ್ಲಿ ಸೇರಿಸಿ, ದಿನಕ್ಕೆ ಎರಡು ಬಾರಿ ಸೇವಿಸಬಹುದು.</p>.<p>lಥಂಡಿ ವಾತಾವರಣಕ್ಕೆ ಮಂಡಿ ನೋವು, ಸಂದಿವಾತಗಳಂತಹ ನೋವು ಕಾಣಿಸಿ ಕೊಳ್ಳುತ್ತವೆ. ಇದಕ್ಕೆ ಪರಿಹಾರವಾಗಿ, ಹತ್ತು ಗ್ರಾಂನಷ್ಟು ದನಿಯಾ, ಒಣಶುಂಠಿ ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಿ. ನಾಲ್ಕು ಲೋಟ ನೀರಿಗೆ ಬೆರೆಸಿ ಕಾಯಿಸಿ, ಒಂದು ಲೋಟಕ್ಕೆ ಇಳಿಸಿ. ದಿನಕ್ಕೆ ಎರಡು ಸಾರಿ ಇದನ್ನು ಕುಡಿಯಿರಿ. ಈ ವಾತದ ನೋವು ತಕ್ಕಮಟ್ಟಿಗೆ ಶಮನವಾಗುತ್ತದೆ.</p>.<p>l→ಮಳೆಗಾಲದಲ್ಲಿ ಜೀರ್ಣಶಕ್ತಿ ಕಡಿಮೆ ಇರುತ್ತದೆ. ಇಂಥ ಸಮಯದಲ್ಲಿ ನಿತ್ಯದ ತರಕಾರಿ ಸಾಂಬಾರಿನ ಬದಲಿಗೆ, ತೊಗರಿಬೇಳೆ, ಹುರುಳಿಕಟ್ಟಿನ ಸಾರನ್ನು ಬಳಸಿದರೆ, ಜೀರ್ಣಶಕ್ತಿಗೆ ಒಳ್ಳೆಯದು.</p>.<p>l→ಮಳೆಗಾಲದಲ್ಲಿ ಮೊಸರು ಬಳಸುವುದು ಬೇಡ. ಮೊಸರು ತಿನ್ನುವುದರಿಂದ ಕೆಲವರಲ್ಲಿ ಕಫವಾಗುತ್ತದೆ. ಜೀರ್ಣಶಕ್ತಿಯೂ ಕಡಿಮೆಯಾಗುತ್ತದೆ. ‘ಮೊಸರಿಲ್ಲ<br />ದಿದ್ದರೆ ಊಟ ಮುಗಿಯುವುದಿಲ್ಲ’ ಎನ್ನುವವರು, ಮೊಸರು ಕಡೆದು, ಅದಕ್ಕೆ ಕಾಳುಮೆಣಸಿನ ಪುಡಿ ಮತ್ತು ಉಪ್ಪು(ರುಚಿಗೆ ತಕ್ಕಷ್ಟು) ಬೆರೆಸಿ ಮಿತ ಪ್ರಮಾಣದಲ್ಲಿ ಉಪಯೋಗಿಸಬಹುದು.</p>.<p>l→ದಾಳಿಂಬೆ, ಮಾವಿನಕಾಯಿ ಸಾರು, ನೆಲ್ಲಿಕಾಯಿ(ಒಣಗಿದ) ಸಾರು, ನೆಲ್ಲಿಕಾಯಿ ಉಪ್ಪಿನಕಾಯಿ.. ಈ ಎಲ್ಲವೂ ಮಳೆಗಾಲದ ಆರೋಗ್ಯಕ್ಕೆ ಪೂರಕವಾದ ಆಹಾರ ಪದಾರ್ಥಗಳು.</p>.<p>lಒಂದು ಭಾಗ ಗೋಧಿಹಿಟ್ಟು, ಕಡ್ಲೆಹಿಟ್ಟು, ಓಮ, ಇಂಗು, ತುಪ್ಪ ಹಾಕಿ ಹಿಟ್ಟು ಕಲಸಿ. ರೊಟ್ಟಿ ಲಟ್ಟಿಸಿ. ಕೆಂಡದಲ್ಲಿ ಬೇಯಿಸಬೇಕು. ಮಳೆಗಾಲದಲ್ಲಿ ಈ ಕೆಂಡದ ರೊಟ್ಟಿ ಸೇವನೆಯಿಂದ ವಾತದ ಸಮಸ್ಯೆಯಿರುವವರಿಗೆ ಉತ್ತಮ ಔಷಧ. ಕಫ ನಿವಾರಣೆಗೆ ಉತ್ತಮ ಆಹಾರ. ಜೀರ್ಣಶಕ್ತಿ ಹೆಚ್ಚಾಗುತ್ತದೆ.</p>.<p>lಹೆಸರುಕಾಳು, ಮಡಕೆ ಕಾಳು ನೆನೆಸಿ ಒಗ್ಗರಣೆ ಹಾಕಿ<br />ಗುಗ್ಗುರಿ ಮಾಡಿಕೊಂಡು ತಿನ್ನಬಹುದು. ಇದೂ ಮಳೆಗಾಲದ ಉತ್ತಮ ಆಹಾರ. </p>.<p>ಚರ್ಮದ ಆರೈಕೆ</p>.<p>l→ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ, ಚರ್ಮ ಒರಟಾಗುತ್ತದೆ. ಮುಖದ ತ್ವಚೆಯೂ ಬಿರುಸಾಗುತ್ತದೆ. ಇದಕ್ಕೆ ಪರಿಹಾರವಾಗಿ, ಲೋಳೆಸರ/ತಿರುಳು / ಜೆಲ್ ಎರಡು ಚಮಚ, ಒಂದು ಚಮಚ ಬಾದಾಮಿ ಎಣ್ಣೆ, ಬೆಣ್ಣೆ ಅರ್ಧ ಚಮಚ, ಗುಲಾಬಿ ಜಲ(ರೋಸ್ವಾಟರ್) ಒಂದು ಚಮಚ. ಇವೆಲ್ಲವನ್ನೂ ಬೆರೆಸಿ, ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿಕೊಂಡರೆ, ಮುಖದ ಕಾಂತಿ ಹೆಚ್ಚುತ್ತದೆ.</p>.<p>l→ರಾತ್ರಿ ಮಲಗುವಾಗ ತುಪ್ಪ ಅಥವಾ ಬೆಣ್ಣೆ, ಮಜ್ಜಿಗೆಯನ್ನು ತುಟಿಗೆ ಹಗುರವಾಗಿ ಮಸಾಜ್ ಮಾಡಿಕೊಂಡರೆ,ತುಟಿ ಬಿರಿಯುವುದನ್ನು ತಡೆಯಬಹುದು.</p>.<p>ಉಬ್ಬಸ ಇರುವವರು ಆಯಾಸ, ಉಸಿರಾಟಕ್ಕೆ ತೊಂದರೆ ಇರುವವರು ಅರಿಸಿನ, ಕಾಳುಮೆಣಸು, ಹಿಪ್ಪಲಿ, ದ್ರಾಕ್ಷಿ, ಬೆಲ್ಲ, ಖಚೋರ, ಶುಂಠಿ ಇವೆಲ್ಲವನ್ನು ಸಮಭಾಗದಲ್ಲಿ ಪುಡಿ ಮಾಡಿಟ್ಟುಕೊಳ್ಳಿ. ಒಂದು ಚಮಚ ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ. ನಿತ್ಯ ಎರಡು ಅಥವಾ ಮೂರು ಸಾರಿ ಸೇವಿಸಬಹುದು.</p>.<p><strong>ಪೂರಕ ಮಾಹಿತಿ: ಡಾ. ವಸುಂಧರಾ ಭೂಪತಿ, ಆಯುರ್ವೇದ ತಜ್ಞೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಗಾರು ಮಳೆ ಆರಂಭವಾಗಿದೆ. ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವ ಈ ಬದಲಾವಣೆಯ ಕಾಲದಲ್ಲಿ ಆರೋಗ್ಯದಲ್ಲಿ ತುಸು ವ್ಯತ್ಯಾಸವಾಗುವುದು ಸಹಜ. ಇಂಥ ಸಮಯದಲ್ಲಿ ಮನೆಯಲ್ಲಿ ನಿತ್ಯ ಬಳಕೆಯಲ್ಲಿರುವ ವಸ್ತುಗಳನ್ನು ಬಳಸಿ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು. ಈ ಕುರಿತ ಟಿಪ್ಸ್ ಇಲ್ಲಿದೆ.</strong></p>.<p>l→ಮಳೆಗೆ ನೆನೆದಾಗ ನೆಗಡಿ, ಜ್ವರ ಬಾಧಿಸುವುದು ಸಾಮಾನ್ಯ. ನೆಗಡಿಯಾದಾಗ ಅರಿಶಿನದ ಪುಡಿಯನ್ನು ಕೆಂಡದ ಮೇಲೆ ಹಾಕಿ ಅದರ ಹೊಗೆ ತಗೊಳ್ಳಬಹುದು.</p>.<p>l→ಒಂದು ಲೋಟ ಬಿಸಿ ಹಾಲು ಅಥವಾ ಬಿಸಿ ನೀರಿಗೆ ಅರಿಶಿನ ಪುಡಿ ಬೆರೆಸಿ, ಸ್ವಲ್ಪ ಬೆಲ್ಲ ಹಾಕಿ ಬೆಳಿಗ್ಗೆ ಹೊತ್ತು ಕುಡಿಯಬಹುದು. ಇದರಿಂದ ನೆಗಡಿ ನಿಯಂತ್ರಣವಾಗುತ್ತದೆ.</p>.<p>l→ಥಂಡಿಕಾಲದಲ್ಲಿ ನೆಗಡಿ ಜೊತೆಗೆ ಗಂಟಲು ಕೆರೆತ, ಕೆಮ್ಮು ಬಾಧಿಸುತ್ತದೆ. ಕೆಮ್ಮು ನಿವಾರಣೆಗೆ ಹೀಗೆ ಮಾಡಿ; ಶುಂಠಿ, ಹಿಪ್ಪಲಿ, ಮೆಣಸು ಮೂರು ತಲಾ 10 ಗ್ರಾಂ, ಜೇಷ್ಟಮಧು 30 ಗ್ರಾಂ. ಎಲ್ಲವನ್ನೂ ಕುಟ್ಟಿ ನುಣ್ಣಗೆ ಪುಡಿ ಮಾಡಿ. ಒಂದು ಚಮಚ ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ, ದಿನಕ್ಕೆ ಮೂರು ಸಾರಿ ಸೇವಿಸಿ.</p>.<p>l→ನೀರು, ಆಹಾರದ ವ್ಯತ್ಯಾಸ, ವಾತಾವರಣದ ಏರುಪೇರಿನ ಕಾರಣಕ್ಕೆ ಮಳೆಗಾಲದಲ್ಲಿ ಗಂಟಲ ನೋವು ಬಾಧಿಸುತ್ತದೆ. ಇದರ ನಿವಾರಣೆಗೆ ಹೀಗೆ ಮಾಡಿ; ದ್ರಾಕ್ಷಿ, ಕಾಳುಮೆಣಸು, ಜೇಷ್ಠ ಮಧು ಇವೆಲ್ಲವನ್ನೂ ಸಮಪ್ರಮಾಣದಲ್ಲಿ ತೆಗೆದು ಕೊಂಡು, ಕುಟ್ಟಿ ಮಾತ್ರೆ ಮಾಡಿ. ಅದನ್ನು ಗುಳಿಗೆ ಮಾಡಿ. ದಿನಕ್ಕೆ ಮೂರು ಬಾರಿ ಸೇವಿಸಬಹುದು.</p>.<p>l→ಮಳೆಗಾಲದಲ್ಲಿ ನೀರಿನ ಬಗ್ಗೆಯೂ ಎಚ್ಚರವಹಿಸಬೇಕು. ಈ ಸಮಯದಲ್ಲಿ ದೇಹವೂ ತಂಪಾಗಿರುತ್ತದೆ. ಹಾಗಾಗಿ ನೀರು ಕಾಯಿಸಿ ಕುಡಿಯುವುದು ಒಳ್ಳೆಯುದು. ನೀರನ್ನು ಕಾಯಿಸುವಾಗ ಚಿಕ್ಕತುಂಡು ಶುಂಠಿ ಅಥವಾ ತುಳಸಿ ಹಾಕಿ. ಹದವಾದ ಬಿಸಿಯಲ್ಲೇ ನೀರು ಕುಡಿಯಿರಿ.</p>.<p>l→ಗಂಟಲು ಕಟ್ಟಿ ಧ್ವನಿ ತೊಂದರೆಯಿರುವವರು ಒಂದೆಲಗ,ಬಜೆ ಶುಂಠಿ ಹಿಪ್ಪಲಿ ಸಮಭಾಗ, ಕುಟ್ಟಿ ಪುಡಿ ಮಾಡಿಟ್ಟುಕೊಂಡು ಜೇನುತಪ್ಪದಲ್ಲಿ ಸೇರಿಸಿ, ದಿನಕ್ಕೆ ಎರಡು ಬಾರಿ ಸೇವಿಸಬಹುದು.</p>.<p>lಥಂಡಿ ವಾತಾವರಣಕ್ಕೆ ಮಂಡಿ ನೋವು, ಸಂದಿವಾತಗಳಂತಹ ನೋವು ಕಾಣಿಸಿ ಕೊಳ್ಳುತ್ತವೆ. ಇದಕ್ಕೆ ಪರಿಹಾರವಾಗಿ, ಹತ್ತು ಗ್ರಾಂನಷ್ಟು ದನಿಯಾ, ಒಣಶುಂಠಿ ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಿ. ನಾಲ್ಕು ಲೋಟ ನೀರಿಗೆ ಬೆರೆಸಿ ಕಾಯಿಸಿ, ಒಂದು ಲೋಟಕ್ಕೆ ಇಳಿಸಿ. ದಿನಕ್ಕೆ ಎರಡು ಸಾರಿ ಇದನ್ನು ಕುಡಿಯಿರಿ. ಈ ವಾತದ ನೋವು ತಕ್ಕಮಟ್ಟಿಗೆ ಶಮನವಾಗುತ್ತದೆ.</p>.<p>l→ಮಳೆಗಾಲದಲ್ಲಿ ಜೀರ್ಣಶಕ್ತಿ ಕಡಿಮೆ ಇರುತ್ತದೆ. ಇಂಥ ಸಮಯದಲ್ಲಿ ನಿತ್ಯದ ತರಕಾರಿ ಸಾಂಬಾರಿನ ಬದಲಿಗೆ, ತೊಗರಿಬೇಳೆ, ಹುರುಳಿಕಟ್ಟಿನ ಸಾರನ್ನು ಬಳಸಿದರೆ, ಜೀರ್ಣಶಕ್ತಿಗೆ ಒಳ್ಳೆಯದು.</p>.<p>l→ಮಳೆಗಾಲದಲ್ಲಿ ಮೊಸರು ಬಳಸುವುದು ಬೇಡ. ಮೊಸರು ತಿನ್ನುವುದರಿಂದ ಕೆಲವರಲ್ಲಿ ಕಫವಾಗುತ್ತದೆ. ಜೀರ್ಣಶಕ್ತಿಯೂ ಕಡಿಮೆಯಾಗುತ್ತದೆ. ‘ಮೊಸರಿಲ್ಲ<br />ದಿದ್ದರೆ ಊಟ ಮುಗಿಯುವುದಿಲ್ಲ’ ಎನ್ನುವವರು, ಮೊಸರು ಕಡೆದು, ಅದಕ್ಕೆ ಕಾಳುಮೆಣಸಿನ ಪುಡಿ ಮತ್ತು ಉಪ್ಪು(ರುಚಿಗೆ ತಕ್ಕಷ್ಟು) ಬೆರೆಸಿ ಮಿತ ಪ್ರಮಾಣದಲ್ಲಿ ಉಪಯೋಗಿಸಬಹುದು.</p>.<p>l→ದಾಳಿಂಬೆ, ಮಾವಿನಕಾಯಿ ಸಾರು, ನೆಲ್ಲಿಕಾಯಿ(ಒಣಗಿದ) ಸಾರು, ನೆಲ್ಲಿಕಾಯಿ ಉಪ್ಪಿನಕಾಯಿ.. ಈ ಎಲ್ಲವೂ ಮಳೆಗಾಲದ ಆರೋಗ್ಯಕ್ಕೆ ಪೂರಕವಾದ ಆಹಾರ ಪದಾರ್ಥಗಳು.</p>.<p>lಒಂದು ಭಾಗ ಗೋಧಿಹಿಟ್ಟು, ಕಡ್ಲೆಹಿಟ್ಟು, ಓಮ, ಇಂಗು, ತುಪ್ಪ ಹಾಕಿ ಹಿಟ್ಟು ಕಲಸಿ. ರೊಟ್ಟಿ ಲಟ್ಟಿಸಿ. ಕೆಂಡದಲ್ಲಿ ಬೇಯಿಸಬೇಕು. ಮಳೆಗಾಲದಲ್ಲಿ ಈ ಕೆಂಡದ ರೊಟ್ಟಿ ಸೇವನೆಯಿಂದ ವಾತದ ಸಮಸ್ಯೆಯಿರುವವರಿಗೆ ಉತ್ತಮ ಔಷಧ. ಕಫ ನಿವಾರಣೆಗೆ ಉತ್ತಮ ಆಹಾರ. ಜೀರ್ಣಶಕ್ತಿ ಹೆಚ್ಚಾಗುತ್ತದೆ.</p>.<p>lಹೆಸರುಕಾಳು, ಮಡಕೆ ಕಾಳು ನೆನೆಸಿ ಒಗ್ಗರಣೆ ಹಾಕಿ<br />ಗುಗ್ಗುರಿ ಮಾಡಿಕೊಂಡು ತಿನ್ನಬಹುದು. ಇದೂ ಮಳೆಗಾಲದ ಉತ್ತಮ ಆಹಾರ. </p>.<p>ಚರ್ಮದ ಆರೈಕೆ</p>.<p>l→ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ, ಚರ್ಮ ಒರಟಾಗುತ್ತದೆ. ಮುಖದ ತ್ವಚೆಯೂ ಬಿರುಸಾಗುತ್ತದೆ. ಇದಕ್ಕೆ ಪರಿಹಾರವಾಗಿ, ಲೋಳೆಸರ/ತಿರುಳು / ಜೆಲ್ ಎರಡು ಚಮಚ, ಒಂದು ಚಮಚ ಬಾದಾಮಿ ಎಣ್ಣೆ, ಬೆಣ್ಣೆ ಅರ್ಧ ಚಮಚ, ಗುಲಾಬಿ ಜಲ(ರೋಸ್ವಾಟರ್) ಒಂದು ಚಮಚ. ಇವೆಲ್ಲವನ್ನೂ ಬೆರೆಸಿ, ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿಕೊಂಡರೆ, ಮುಖದ ಕಾಂತಿ ಹೆಚ್ಚುತ್ತದೆ.</p>.<p>l→ರಾತ್ರಿ ಮಲಗುವಾಗ ತುಪ್ಪ ಅಥವಾ ಬೆಣ್ಣೆ, ಮಜ್ಜಿಗೆಯನ್ನು ತುಟಿಗೆ ಹಗುರವಾಗಿ ಮಸಾಜ್ ಮಾಡಿಕೊಂಡರೆ,ತುಟಿ ಬಿರಿಯುವುದನ್ನು ತಡೆಯಬಹುದು.</p>.<p>ಉಬ್ಬಸ ಇರುವವರು ಆಯಾಸ, ಉಸಿರಾಟಕ್ಕೆ ತೊಂದರೆ ಇರುವವರು ಅರಿಸಿನ, ಕಾಳುಮೆಣಸು, ಹಿಪ್ಪಲಿ, ದ್ರಾಕ್ಷಿ, ಬೆಲ್ಲ, ಖಚೋರ, ಶುಂಠಿ ಇವೆಲ್ಲವನ್ನು ಸಮಭಾಗದಲ್ಲಿ ಪುಡಿ ಮಾಡಿಟ್ಟುಕೊಳ್ಳಿ. ಒಂದು ಚಮಚ ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ. ನಿತ್ಯ ಎರಡು ಅಥವಾ ಮೂರು ಸಾರಿ ಸೇವಿಸಬಹುದು.</p>.<p><strong>ಪೂರಕ ಮಾಹಿತಿ: ಡಾ. ವಸುಂಧರಾ ಭೂಪತಿ, ಆಯುರ್ವೇದ ತಜ್ಞೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>