<p><strong>ವಿಶ್ವಸಂಸ್ಥೆ: </strong>ವಿಶ್ವದ ಅರ್ಧದಷ್ಟು ಯುವ ಜನರು ಸಂದರ್ಭ, ಸನ್ನಿವೇಶಗಳಿಂದ ಖಿನ್ನತೆ ಅಥವಾ ಆತಂಕಕ್ಕೆ ಒಳಗಾಗುತ್ತಿದ್ದರೆ, ಮೂರನೇ ಒಂದು ಭಾಗದಷ್ಟು ಯುವ ಜನರು ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಎದುರಾಗಿರುವ ಭವಿಷ್ಯದ ವೃತ್ತಿ ಜೀವನದ ಅನಿಶ್ಚತತೆ, ಅಭದ್ರತೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.</p>.<p>ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯು (ಐಎಲ್ಒ) ‘ಕೋವಿಡ್–19: ವೃತ್ತಿ, ಶಿಕ್ಷಣ, ಹಕ್ಕು ಮತ್ತು ಮಾನಸಿಕ ಯೋಗಕ್ಷೇಮದ ಮೇಲಿನ ಪರಿಣಾಮ’ ಕುರಿತುನಡೆಸಿರುವ ಸಮೀಕ್ಷೆಯಿಂದ ಇದು ಗೊತ್ತಾಗಿದೆ. ಈ ಬಗ್ಗೆ ತಕ್ಷಣವೇ ಕ್ರಮ ತೆಗೆದುಕೊಳ್ಳದಿದ್ದರೆ, ಯುವ ಸಮೂಹ ಗಂಭೀರವಾದ ಸಂಕಷ್ಟದಲ್ಲಿ ಸಿಲುಕುತ್ತಾದೆ. ಇದು ಕೋವಿಡ್ನಿಂದ ಸಂಭವಿಸುವ ದೀರ್ಘಕಾಲಿಕ ಪರಿಣಾಮವೂ ಆಗಲಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.</p>.<p>‘ಕೋವಿಡ್ ಬಿಕ್ಕಟ್ಟು ಎದುರಾಗುವುದಕ್ಕೂ ಮುನ್ನ ಯುವ ಸಮೂಹ, ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುವಲ್ಲಿ ನಿರತವಾಗಿತ್ತು. ಈಗ ಕೋವಿಡ್, ಜೀವನದ ಪ್ರತಿ ಹಂತದಲ್ಲೂ ಅಡ್ಡಿಯುಂಟು ಮಾಡುತ್ತಿದೆ. ಈಗ ತುರ್ತು ಕ್ರಮ ಕೈಗೊಳ್ಳಬೇಕಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.</p>.<p>ಈ ಸಮೀಕ್ಷೆಯಲ್ಲಿ 112 ದೇಶಗಳಿಂದ 12 ಸಾವಿರಕ್ಕೂ ಹೆಚ್ಚು ಮಂದಿಯಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. 18 ರಿಂದ 29 ವಯಸ್ಸಿನೊಳಗಿನ ವಿದ್ಯಾವಂತರು ಮತ್ತು ಅಂತರ್ಜಾಲ ಸೌಕರ್ಯ ಹೊಂದಿರುವವರು ಸಮೀಕ್ಷೆಯಲ್ಲಿಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವಸಂಸ್ಥೆ: </strong>ವಿಶ್ವದ ಅರ್ಧದಷ್ಟು ಯುವ ಜನರು ಸಂದರ್ಭ, ಸನ್ನಿವೇಶಗಳಿಂದ ಖಿನ್ನತೆ ಅಥವಾ ಆತಂಕಕ್ಕೆ ಒಳಗಾಗುತ್ತಿದ್ದರೆ, ಮೂರನೇ ಒಂದು ಭಾಗದಷ್ಟು ಯುವ ಜನರು ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಎದುರಾಗಿರುವ ಭವಿಷ್ಯದ ವೃತ್ತಿ ಜೀವನದ ಅನಿಶ್ಚತತೆ, ಅಭದ್ರತೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.</p>.<p>ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯು (ಐಎಲ್ಒ) ‘ಕೋವಿಡ್–19: ವೃತ್ತಿ, ಶಿಕ್ಷಣ, ಹಕ್ಕು ಮತ್ತು ಮಾನಸಿಕ ಯೋಗಕ್ಷೇಮದ ಮೇಲಿನ ಪರಿಣಾಮ’ ಕುರಿತುನಡೆಸಿರುವ ಸಮೀಕ್ಷೆಯಿಂದ ಇದು ಗೊತ್ತಾಗಿದೆ. ಈ ಬಗ್ಗೆ ತಕ್ಷಣವೇ ಕ್ರಮ ತೆಗೆದುಕೊಳ್ಳದಿದ್ದರೆ, ಯುವ ಸಮೂಹ ಗಂಭೀರವಾದ ಸಂಕಷ್ಟದಲ್ಲಿ ಸಿಲುಕುತ್ತಾದೆ. ಇದು ಕೋವಿಡ್ನಿಂದ ಸಂಭವಿಸುವ ದೀರ್ಘಕಾಲಿಕ ಪರಿಣಾಮವೂ ಆಗಲಿದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.</p>.<p>‘ಕೋವಿಡ್ ಬಿಕ್ಕಟ್ಟು ಎದುರಾಗುವುದಕ್ಕೂ ಮುನ್ನ ಯುವ ಸಮೂಹ, ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುವಲ್ಲಿ ನಿರತವಾಗಿತ್ತು. ಈಗ ಕೋವಿಡ್, ಜೀವನದ ಪ್ರತಿ ಹಂತದಲ್ಲೂ ಅಡ್ಡಿಯುಂಟು ಮಾಡುತ್ತಿದೆ. ಈಗ ತುರ್ತು ಕ್ರಮ ಕೈಗೊಳ್ಳಬೇಕಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.</p>.<p>ಈ ಸಮೀಕ್ಷೆಯಲ್ಲಿ 112 ದೇಶಗಳಿಂದ 12 ಸಾವಿರಕ್ಕೂ ಹೆಚ್ಚು ಮಂದಿಯಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. 18 ರಿಂದ 29 ವಯಸ್ಸಿನೊಳಗಿನ ವಿದ್ಯಾವಂತರು ಮತ್ತು ಅಂತರ್ಜಾಲ ಸೌಕರ್ಯ ಹೊಂದಿರುವವರು ಸಮೀಕ್ಷೆಯಲ್ಲಿಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>