<p>ಇನ್ನೇನು ಶಿವರಾತ್ರಿ ಹತ್ತಿರ ಬರುತ್ತಿದೆ. ಹೀಗಾಗಿ ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುತ್ತದೆ. ವಾತಾವರಣದಲ್ಲಿ ಬದಲಾವಣೆಯಾದಂತೆ ಆರೋಗ್ಯದಲ್ಲಿಯೂ ಏರುಪೇರಾಗುತ್ತದೆ. ಹೀಗಾಗಿ ಋತುಗಳ ಬದಲಾವಣೆಯ ಸಂದರ್ಭದಲ್ಲಿ ಆಹಾರದ ಬಗ್ಗೆ ಗಮನ ಹರಿಸುವುದು ಬಹು ಮುಖ್ಯವಾಗಿರುತ್ತದೆ. ಈ ಸಮಯದಲ್ಲಿ ಯಾವ ರೀತಿ ಆಹಾರಗಳನ್ನು ಸೇವಿಸಬೇಕು ಎಂಬ ಮಾಹಿತಿ ಇಲ್ಲಿದೆ.</p>.<blockquote><strong><ins>ಬೇಸಿಗೆಯಲ್ಲಿ ಪಾಲಿಸಬೇಕಾದ ಆಹಾರ ಕ್ರಮಗಳು</ins></strong></blockquote>.<h2><strong>ಮಜ್ಜಿಗೆ ಸೇವನೆ</strong></h2>.<p>ಬೇಸಿಗೆಯಲ್ಲಿ ಪ್ರತಿದಿನ ಮಜ್ಜಿಗೆಯ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. 1 ಲೋಟ ಮಜ್ಜಿಗೆಗೆ ಅರ್ಧ ಲೋಟ ನೀರು ಸೇರಿಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಬೇಸಿಗೆ ಸಮಯದಲ್ಲಿ ದೇಹವನ್ನು ತಂಪಾಗಿರಿಸಲು ಸಹಕರಿಸುತ್ತದೆ. ಜತೆಗೆ ನಿರ್ಜಲೀಕರಣವನ್ನೂ ತಡೆಯುತ್ತದೆ.</p>.ಮಕ್ಕಳಲ್ಲಿ ಅಡಿನಾಯ್ಡ್ ಹೆಚ್ಚಳ : ಇದರ ಲಕ್ಷಣ,ಪರಿಹಾರ ಕ್ರಮದ ಮಾಹಿತಿ ಇಲ್ಲಿದೆ.<h2><strong>ಹಣ್ಣಿನ ಜ್ಯೂಸ್ ಸೇವನೆ</strong></h2>.<p>ಹಣ್ಣುಗಳ ಜ್ಯೂಸ್ ಬೇಸಿಗೆಯಲ್ಲಿ ದೇಹಕ್ಕೆ ಹಿತವಾಗಿರುತ್ತದೆ. ಕಲ್ಲಂಗಡಿ, ಅನಾನಸ್ ಹಣ್ಣುಗಳ ಜ್ಯೂಸ್, ಲಿಂಬು ಶರಬತ್, ಕಬ್ಬಿನ ಹಾಲು, ಎಳೆ ನೀರನ್ನು ಸೇವನೆ ಮಾಡುವುದರಿಂದ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು.</p>.<h2><strong>ಮೊಳಕೆ ಕಾಳುಗಳ ಸೇವನೆ</strong></h2>.<p>ಬೇಸಿಗೆಯಲ್ಲಿ ಹೆಸರುಕಾಳಿನ ಖಾದ್ಯ ಅಥವಾ ಮೊಳಕೆ ಕಟ್ಟಿದ ಕಾಳುಗಳನ್ನು ಸೇವನೆ ಮಾಡುವುದರಿಂದ ದೇಹದ ಉಷ್ಣತೆಯನ್ನು ಸಮತೋಲದಲ್ಲಿ ಇರಿಸಲು ಸಹಕರಿಸುತ್ತದೆ.</p>.<h2>ರಾಗಿ ಅಂಬಲಿ ಅಥವಾ ಗಂಜಿ ಸೇವಿಸಬಹುದು</h2>.<p>ರಾಗಿಯು ಅಧಿಕ ಪೋಷಕಾಂಶವನ್ನು ಹೊಂದಿದೆ. ಬೇಸಿಗೆ ಸಮಯದಲ್ಲಿ ರಾಗಿ ಗಂಜಿ ಅಥವಾ ಅಂಬಲಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹದ ಉಷ್ಣತೆ ಹೆಚ್ಚಾಗುವುದನ್ನು ತಡೆಯಬಹುದು.</p>.<h2>ಕೋಸಂಬರಿ ಸೇವನೆ</h2>.<p>ಕೋಸಂಬರಿ ತಯಾರಿಸಲು ಬಳಸುವ ಸೌತೆಕಾಯಿ, ಹೆಸರುಬೇಳೆ, ದಾಳಿಂಬೆ ಕಾಳು, ಕೊತ್ತಂಬರಿ ಸೊಪ್ಪು,ಕ್ಯಾರೆಟ್ನಲ್ಲಿ ಪೋಷಕಾಂಶ ಹೇರಳವಾಗಿರುತ್ತದೆ. ಅಲ್ಲದೆ ಹೆಸರು ಬೇಳೆ ದೇಹದಲ್ಲಿ ಪಿತ್ತವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಕೋಸಂಬರಿ ಸೇವನೆ ಒಳ್ಳೆಯದು.</p>
<p>ಇನ್ನೇನು ಶಿವರಾತ್ರಿ ಹತ್ತಿರ ಬರುತ್ತಿದೆ. ಹೀಗಾಗಿ ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುತ್ತದೆ. ವಾತಾವರಣದಲ್ಲಿ ಬದಲಾವಣೆಯಾದಂತೆ ಆರೋಗ್ಯದಲ್ಲಿಯೂ ಏರುಪೇರಾಗುತ್ತದೆ. ಹೀಗಾಗಿ ಋತುಗಳ ಬದಲಾವಣೆಯ ಸಂದರ್ಭದಲ್ಲಿ ಆಹಾರದ ಬಗ್ಗೆ ಗಮನ ಹರಿಸುವುದು ಬಹು ಮುಖ್ಯವಾಗಿರುತ್ತದೆ. ಈ ಸಮಯದಲ್ಲಿ ಯಾವ ರೀತಿ ಆಹಾರಗಳನ್ನು ಸೇವಿಸಬೇಕು ಎಂಬ ಮಾಹಿತಿ ಇಲ್ಲಿದೆ.</p>.<blockquote><strong><ins>ಬೇಸಿಗೆಯಲ್ಲಿ ಪಾಲಿಸಬೇಕಾದ ಆಹಾರ ಕ್ರಮಗಳು</ins></strong></blockquote>.<h2><strong>ಮಜ್ಜಿಗೆ ಸೇವನೆ</strong></h2>.<p>ಬೇಸಿಗೆಯಲ್ಲಿ ಪ್ರತಿದಿನ ಮಜ್ಜಿಗೆಯ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. 1 ಲೋಟ ಮಜ್ಜಿಗೆಗೆ ಅರ್ಧ ಲೋಟ ನೀರು ಸೇರಿಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಬೇಸಿಗೆ ಸಮಯದಲ್ಲಿ ದೇಹವನ್ನು ತಂಪಾಗಿರಿಸಲು ಸಹಕರಿಸುತ್ತದೆ. ಜತೆಗೆ ನಿರ್ಜಲೀಕರಣವನ್ನೂ ತಡೆಯುತ್ತದೆ.</p>.ಮಕ್ಕಳಲ್ಲಿ ಅಡಿನಾಯ್ಡ್ ಹೆಚ್ಚಳ : ಇದರ ಲಕ್ಷಣ,ಪರಿಹಾರ ಕ್ರಮದ ಮಾಹಿತಿ ಇಲ್ಲಿದೆ.<h2><strong>ಹಣ್ಣಿನ ಜ್ಯೂಸ್ ಸೇವನೆ</strong></h2>.<p>ಹಣ್ಣುಗಳ ಜ್ಯೂಸ್ ಬೇಸಿಗೆಯಲ್ಲಿ ದೇಹಕ್ಕೆ ಹಿತವಾಗಿರುತ್ತದೆ. ಕಲ್ಲಂಗಡಿ, ಅನಾನಸ್ ಹಣ್ಣುಗಳ ಜ್ಯೂಸ್, ಲಿಂಬು ಶರಬತ್, ಕಬ್ಬಿನ ಹಾಲು, ಎಳೆ ನೀರನ್ನು ಸೇವನೆ ಮಾಡುವುದರಿಂದ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು.</p>.<h2><strong>ಮೊಳಕೆ ಕಾಳುಗಳ ಸೇವನೆ</strong></h2>.<p>ಬೇಸಿಗೆಯಲ್ಲಿ ಹೆಸರುಕಾಳಿನ ಖಾದ್ಯ ಅಥವಾ ಮೊಳಕೆ ಕಟ್ಟಿದ ಕಾಳುಗಳನ್ನು ಸೇವನೆ ಮಾಡುವುದರಿಂದ ದೇಹದ ಉಷ್ಣತೆಯನ್ನು ಸಮತೋಲದಲ್ಲಿ ಇರಿಸಲು ಸಹಕರಿಸುತ್ತದೆ.</p>.<h2>ರಾಗಿ ಅಂಬಲಿ ಅಥವಾ ಗಂಜಿ ಸೇವಿಸಬಹುದು</h2>.<p>ರಾಗಿಯು ಅಧಿಕ ಪೋಷಕಾಂಶವನ್ನು ಹೊಂದಿದೆ. ಬೇಸಿಗೆ ಸಮಯದಲ್ಲಿ ರಾಗಿ ಗಂಜಿ ಅಥವಾ ಅಂಬಲಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹದ ಉಷ್ಣತೆ ಹೆಚ್ಚಾಗುವುದನ್ನು ತಡೆಯಬಹುದು.</p>.<h2>ಕೋಸಂಬರಿ ಸೇವನೆ</h2>.<p>ಕೋಸಂಬರಿ ತಯಾರಿಸಲು ಬಳಸುವ ಸೌತೆಕಾಯಿ, ಹೆಸರುಬೇಳೆ, ದಾಳಿಂಬೆ ಕಾಳು, ಕೊತ್ತಂಬರಿ ಸೊಪ್ಪು,ಕ್ಯಾರೆಟ್ನಲ್ಲಿ ಪೋಷಕಾಂಶ ಹೇರಳವಾಗಿರುತ್ತದೆ. ಅಲ್ಲದೆ ಹೆಸರು ಬೇಳೆ ದೇಹದಲ್ಲಿ ಪಿತ್ತವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಕೋಸಂಬರಿ ಸೇವನೆ ಒಳ್ಳೆಯದು.</p>