<p>ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆ ಫಲಿತಾಂಶ ಬಂತು, ಆತ್ಮಹತ್ಯೆಗಳ ಸುದ್ದಿ ಪೇಪರ್ ತುಂಬಾ. ಪ್ರೇಮ-ಪ್ರೀತಿ ವೈಫಲ್ಯಗಳ ನಂತರ 16-17ರ ವಯಸ್ಸಿನ ಮಕ್ಕಳು ಮಾಡುವ ಆತ್ಮಹತ್ಯೆಯ ಪ್ರಯತ್ನಗಳ, ಪ್ರಾಣ ಕಳೆದುಕೊಳ್ಳುವ ಸಂದರ್ಭಗಳೂ ಸಾಮಾನ್ಯವೇ. <br /> <br /> ಸೆಪ್ಟೆಂಬರ್ 8ರ ಜಾಗತಿಕ ಆತ್ಮಹತ್ಯಾ ತಡೆಗಟ್ಟುವ ದಿನದ ಈ ಬಾರಿಯ ಧ್ಯೇಯ ~ಬಹು ಸಂಸ್ಕೃತಿ ಸಮಾಜಗಳಲ್ಲಿ ಆತ್ಮಹತ್ಯೆಯನ್ನು ತಡೆಗಟ್ಟುವುದು~ (Preventing suicide in multicultural societies).ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲೂ, ಭಾರತದಂತಹ ಬಹುಸಂಸ್ಕೃತಿ ಸಮಾಜಗಳಲ್ಲಿ ಹದಿಹರೆಯದ ಮಕ್ಕಳಲ್ಲಿನ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚುತ್ತಿರುವುದು ಒಂದು ಆತಂಕಕಾರಿ ಬೆಳವಣಿಗೆ. <br /> <br /> 15 ರಿಂದ 24 ವರ್ಷ ವಯಸ್ಸಿನ ಯುವ ಜನರಲ್ಲಿ ಆತ್ಮಹತ್ಯೆ ಮರಣದ ಮೂರನೇ ಸಾಮಾನ್ಯ ಕಾರಣ. ಹದಿಹರೆಯದಲ್ಲಿ ಆತ್ಮಹತ್ಯೆ ಕೇವಲ ಖಿನ್ನತೆಯಂಥ ಮಾನಸಿಕ ಸಮಸ್ಯೆಗೆ ಸಂಬಂಧಿಸಿದ್ದಲ್ಲ. <br /> <br /> ಸಾಮಾಜಿಕವಾಗಿ ಇಂದಿನ ಹದಿಹರೆಯದ ಮಕ್ಕಳು ಎದುರಿಸುತ್ತಿರುವ ವಿವಿಧ ಸಾಮಾಜಿಕ - ಮಾನಸಿಕ - ದೈಹಿಕ ಒತ್ತಡಗಳ, ಸಂಘರ್ಷಗಳ ಪ್ರತಿಫಲವೂ ಹೌದು. ಶೈಕ್ಷಣಿಕ - ಸಂಬಂಧಗಳಲ್ಲಿನ ಭಾವನಾತ್ಮಕ ತಾಕಲಾಟ - ಒಂಟಿತನ ಈ ಮೂರು ಇಂದಿನ ಭಾರತೀಯ ಹದಿಹರೆಯದ ಮಕ್ಕಳು ಆತ್ಮಹತ್ಯಾ ಪ್ರಯತ್ನ ಮಾಡುವ ಮುಖ್ಯ ಕಾರಣಗಳು- <br /> <br /> <strong>* </strong>ಶೈಕ್ಷಣಿಕ - ಸಾಮರ್ಥ್ಯದ ಕೊರತೆ, ಅತಿ ನಿರೀಕ್ಷೆ, ತಮ್ಮ ಸಾಮರ್ಥ್ಯದ ಮಿತಿಗಳನ್ನು ಅರಿಯದೆ ಆರಿಸಿಕೊಳ್ಳುವ ಕಲಿಕೆಯ ಕ್ಷೇತ್ರಗಳು, ತಂದೆ-ತಾಯಿ-ಮಕ್ಕಳ ನಡುವಿನ ಕಲಿಕಾ ಕ್ಷೇತ್ರದ ಬಗೆಗಿನ ಭಿನ್ನಾಭಿಪ್ರಾಯ ಗಳು ಹೀಗೆ ಶೈಕ್ಷಣಿಕ ಒತ್ತಡ ವಿವಿಧ ರೀತಿಗಳಲ್ಲಿ ಕಾಡಬಹುದು. <br /> <br /> <strong>* </strong> ಸಂಬಂಧಗಳಲ್ಲಿನ ಭಾವನಾತ್ಮಕ ಸಮಸ್ಯೆಗಳು ತಂದೆ-ತಾಯಿಗಳೊಡನೆ ಇರದ ಮುಕ್ತ ಭಾವನಾತ್ಮಕ ಸಂಬಂಧ, ಸ್ನೇಹಿತರ ಒತ್ತಡ, ಜೊತೆಗೇ ಅಪ್ರಬುದ್ಧ ಪ್ರೇಮ ಸಂಬಂಧಗಳು ಹದಿಹರೆಯದ ಮನಸ್ಸಿನ ತುಂಬ ಗೊಂದಲವನ್ನುಂಟು ಮಾಡಬಹುದು. <br /> <br /> <strong>* </strong> ಒಂಟಿತನ - ಅಂತರ್ಮುಖಿಯಾದ ಹದಿಹರೆ ಯದ ಮನಸ್ಸುಗಳು ಒಂಟಿತನ ದಿಂದ ಯಾರೊಡನೆಯೂ ಮನಸ್ಸಿನ ಭಾವನೆ ಗಳನ್ನು ಹಂಚಿಕೊಳ್ಳ ಲಾಗದ ಖಿನ್ನತೆ ಅನುಭವಿಸಬಹುದು. ಅದೇ ಬಹಿರ್ಮುಖಿಯಾದ ಹದಿಹರೆಯದ ಮಕ್ಕಳು ಒಂಟಿತನ ವನ್ನು ನೀಗಲು ಮಾದಕ ದ್ರವ್ಯ ವ್ಯಸನ, ಸ್ನೇಹಿತರ ಅತಿಯಾದ ಸಹವಾಸ, ಇವುಗಳಲ್ಲಿ ತೊಡಗಬಹುದು. <br /> <br /> ಇವೆಲ್ಲದರ ಪರಿಣಾಮ ಖಿನ್ನತೆ, ನಡವಳಿಕೆಯಲ್ಲಿ ಹಿಂಸೆ - ಹಿಂದು ಮುಂದು ನೋಡದೆ ವರ್ತಿಸುವ ಪ್ರವೃತ್ತಿ ತಲೆದೋರುವುದು. ಇವು `ಆತ್ಮಹತ್ಯೆ~ ಎಂಬ ನಡವಳಿಕೆಯ ಹಿಂದಿನ ಹಂತಗಳು. ಈ ಹಂತಗಳು ಕ್ರಮೇಣ ಆತ್ಮಹತ್ಯೆ ಯ `ಯೋಚನೆ~ ಗಳಿಗೆ ದಾರಿಯಾಗುತ್ತವೆ. ಈ ಯೋಚನೆಗಳು:<br /> <br /> <strong>* </strong> ಸಾಯುವ ಬಗ್ಗೆ ಯೋಚಿಸುವುದು, ಮಾತನಾಡುವುದು, ಸಾಯುವ ವಿಧಗಳನ್ನು ಚಿಂತಿಸುವುದು. <br /> <strong>* </strong>ಉದ್ದೇಶವಿಲ್ಲದೆ ಬದುಕಲಾರಂಭಿಸುವುದು<br /> <strong>* </strong> ಆತಂಕ, ನಿದ್ರಾಹೀನತೆ <br /> <strong>* </strong> ಹೊರಹೋಗುವ ದಾರಿಯೇ ಮುಚ್ಚಿಹೋದಂತೆ, ಬಂಧನಕ್ಕೆ ಸಿಲುಕಿದಂತೆ ಅನಿಸುವುದು. <br /> <br /> <strong>ಕೋಪ, ಖಿನ್ನತೆ <br /> </strong>ಹೆಚ್ಚಿನ ಜನರ ಒಂದು ತಪ್ಪು ಭಾವನೆಯೆಂದರೆ ಆತ್ಮಹತ್ಯೆಯ ಬಗ್ಗೆ ಮಾತನಾಡುವವರು ಹಾಗೆ ಮಾಡುವುದಿಲ್ಲ ಎನ್ನುವುದು. ಆತ್ಮಹತ್ಯೆಗೆ ಪ್ರಯತ್ನಿಸುವ ಶೇಕಡ 75ರಷ್ಟು ಜನ ಅದರ ಬಗ್ಗೆ ಯಾವುದೇ ರೀತಿಯಲ್ಲಾದರೂ ಮೊದಲೇ ವ್ಯಕ್ತಪಡಿಸಿರುತ್ತಾರೆ ಎಂಬುದು ವೈಜ್ಞಾನಿಕ ಸತ್ಯ.<br /> <br /> ಅಷ್ಟೇ ಅಲ್ಲ, ಆತ್ಮಹತ್ಯೆಯ ಬಗ್ಗೆ ಕೇಳುವುದರಿಂದ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿದಂತಾಗುವ ಬದಲು ನಡೆಯಬಹುದಾದ ಆತ್ಮಹತ್ಯೆಯನ್ನು ತಡೆಗಟ್ಟಲು ಸಾಧ್ಯ ಎನ್ನುವ ಅಂಶವೂ ಮುಖ್ಯವೇ. <br /> <br /> ಹದಿಹರೆಯದ ಆತ್ಮಹತ್ಯೆಗಳನ್ನು ತಡೆಗಟ್ಟಲು ಹದಿಹರೆಯದ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವುದು ಅತ್ಯಗತ್ಯ. ಹಿರಿಯರೆ ಲ್ಲರೂ, ವಿಶೇಷವಾಗಿ ಹದಿಹರೆಯದ ಮಕ್ಕಳ ತಂದೆ-ತಾಯಿಗಳು ತಮ್ಮ ಹದಿಹರೆಯವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದ್ದು ಅತ್ಯಗತ್ಯ. <br /> <br /> ದೇಹದಲ್ಲಿ ಹಲವು ಬದಲಾವಣೆಗಳು, ಸಾಮಾಜಿಕ -ಶೈಕ್ಷಣಿಕ - ಔದ್ಯೋಗಿಕ ಕ್ಷೇತ್ರದ ಆಯ್ಕೆ - ಜವಾಬ್ದಾರಿಗಳ ಒತ್ತಡ, ತನ್ನ ರೂಪ -ಲೈಂಗಿಕತೆಯ ಅರಿವು, ತಂದೆ-ತಾಯಿಗಳ ಜೊತೆಗಿನ ಭಿನ್ನಾಭಿಪ್ರಾಯ-ತಲೆಮಾರುಗಳ ಅಂತರ ಇವು ನಮ್ಮ ಹದಿಹರೆಯದಲ್ಲಿಯೂ ಇದ್ದವು ತಾನೆ? ಅವುಗಳಿಂದ ನಾವು ಹೊರಬರುವ ದಾರಿಗಳು ಯಾವುದಾಗಿದ್ದವು?<br /> <br /> ಕುಟುಂಬದ ಬೆಂಬಲ-ಮಾರ್ಗದರ್ಶನ, ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಬಲಗೊಳ್ಳುವ ಆತ್ಮ ವಿಶ್ವಾಸ, ಹವ್ಯಾಸಗಳು ಈ ದಾರಿಗಳು ಇಂದಿನ ಸಮಾಜದಲ್ಲಿಯೂ ಇವುಗಳನ್ನು ಕಂಡು ಕೊಳ್ಳುವ ಪ್ರಾಮಾಣಿಕ ಪ್ರಯತ್ನ ಆಗಬೇಕು. <br /> <br /> ಹದಿಹರೆಯದ ಮಕ್ಕಳು ಈ ಕೆಳಗಿನ ವಿಷಯಗಳ ಬಗ್ಗೆ ಮಾತನಾಡಿದಾಗ ತಂದೆ- ತಾಯಿಗಳು ಎಚ್ಚರವಹಿಸಬೇಕು. ಇದು `ಮಾತನಾಡಬೇಕಾದ~, `ಗಮನಿಸಬೇಕಾದ~ ಸಮಯ ಎಂದು ತಿಳಿದುಕೊಳ್ಳಬೇಕು. <br /> <br /> <strong>* </strong> ಸಾವಿನ ಬಗ್ಗೆ ಸಾಮಾನ್ಯವಾಗಿಯೂ ಮತ್ತೆ ಮತ್ತೆ ಮಾತನಾಡಲಾರಂಭಿಸಿದರೆ <br /> <strong>* </strong> ``ನಾನು ಎಲ್ಲಾದರೂ ಹೋಗಿಬಿಡುತ್ತೇನೆ~~ ಎಂದಾಗ <br /> <strong>* </strong> ``ನನಗೆ ಮುಂದೇನೂ ಉಳಿದಿಲ್ಲ~~ ಅಥವಾ ``ನಾನು ತಪ್ಪು ಮಾಡಿದ್ದೇನೆ~~ ಎಂಬಂಥ ಅಭಿಪ್ರಾಯಗಳನ್ನು ಸೂಚಿಸಿದಾಗ.<br /> <strong>* </strong> ಸ್ನೇಹಿತರು, ಕುಟುಂಬದಿಂದ ದೂರವಾಗಿ ಒಂಟಿಯಾಗಿ ಸಮಯ ಕಳೆಯಲಾರಂಭಿಸಿದರೆ .<br /> <br /> <strong>ಹದಿಹರೆಯದ ಮಕ್ಕಳ ತಂದೆ ತಾಯಿಗಳು ನೀವಾಗಿದ್ದರೆ:</strong><br /> <strong>* </strong> ಆತ್ಮಹತ್ಯೆಯ ಸಾಧ್ಯತೆಯ ಬಗೆಗೆ ಎಚ್ಚರವಿರಲಿ.<br /> <strong>* </strong> ಹದಿಹರೆಯದ ಮಕ್ಕಳಿಗೆ `ಶಿಸ್ತು - ಸ್ವಾತಂತ್ರ್ಯ~ ಎರಡರ ಅವಶ್ಯಕತೆಯೂ ಇದೆ. <br /> <strong>* </strong> ಹದಿಹರೆಯದ ಮಕ್ಕಳ ಬಳಿ ತಂದೆ-ತಾಯಿ ಪ್ರತಿದಿನ ಉತ್ತಮ ಗುಣಮಟ್ಟದ ಸಮಯ ಕಳೆಯಬೇಕಾದ್ದು ಅತ್ಯಗತ್ಯ. <br /> <strong>* </strong> ನಿಮ್ಮ ನಿರೀಕ್ಷೆಗಳು ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತಿರಬೇಕು. ಮಕ್ಕಳ ನಿರೀಕ್ಷೆಗಳೂ ಅಷ್ಟೆ. ಅವರ ಸಾಮರ್ಥ್ಯ - ಶ್ರಮಪಡುವ ಸ್ವಭಾವಕ್ಕೆ ತಕ್ಕಂತೆ ಇರುವಂತೆ ತಂದೆ-ತಾಯಿ ನೋಡಿಕೊಳ್ಳಬೇಕು. <br /> <strong>* </strong> ಕೆಲವೊಮ್ಮೆ ಭಾವನಾತ್ಮಕ ಅಸ್ಥಿರತೆಯ ವ್ಯಕ್ತಿತ್ವದಿಂದ ಹದಿಹರೆಯದ ಮಕ್ಕಳು ಮಾಡುವ `ಸಾಯುವ ಪ್ರಯತ್ನಗಳು~ ನಿಜವಾಗಿ ಸಾಯುವ ದಾರಿಗಳಲ್ಲದಿ ರಬಹುದು. ಆದರೆ ಅವು ``ನನಗೆ ಸಹಾಯ ಬೇಕು~~ ಎಂದು ಬೇಡುವ ನೋವಿನ ಕರೆಗಳು. ಹಾಗಾಗಿ ತತ್ಕ್ಷಣ ಮನೋ ವೈದ್ಯರ ಸಲಹೆಗೆ ಅವರನ್ನು ಕರೆದೊಯ್ಯಬೇಕಾದ್ದು ಅತ್ಯವಶ್ಯ. <br /> <strong>* </strong> ಹದಿಹರೆಯದ ಮಕ್ಕಳ ನಡವಳಿಕೆ ಹೆಚ್ಚಿನ ತಂದೆ-ತಾಯಿಗಳಿಗೆ ಮಾನಸಿಕ ಒತ್ತಡ ತರಬಹುದು ರೇಗದಿರಲು, ಕೋಪಿಸದಿರಲು ಅಸಾಧ್ಯ ಎನಿಸುವಂತೆಯೂ ಮಾಡಬಹುದು. ಆದರೆ ಇದು ತಾತ್ಕಾಲಿಕ. `ಹದಿಹರೆಯ~ದಿಂದ ಮಕ್ಕಳು ಹರೆಯ-ಯೌವ್ವನದ ಪ್ರಬುದ್ಧತೆಗೆ ಬರುವವರೆಗೆ ಈ ಸಂಘರ್ಷ ಕಾಲ. ಆ ಸಮಯವನ್ನು ಎದುರಿಸಲು ಮಾನಸಿಕವಾಗಿ ಸಿದ್ಧತೆ ಅಗತ್ಯ. <br /> <strong>* </strong> ಹದಿಹರೆಯದ ಮಕ್ಕಳ - ನಿಮ್ಮ ನಡುವಣ ತಾಕಲಾಟಗಳು ಮತ್ತೆ ಮತ್ತೆ ನಡೆಯುತ್ತಿದ್ದರೆ, ನಿಮಗೂ ಅದನ್ನು ನಿಭಾಯಿಸಲು ಕಷ್ಟ ಎನಿಸಿದರೆ ಸಂದೇಹಿಸದೆ ಕೌಟುಂಬಿಕ ಆಪ್ತ ಸಲಹೆ ಪಡೆಯಿರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆ ಫಲಿತಾಂಶ ಬಂತು, ಆತ್ಮಹತ್ಯೆಗಳ ಸುದ್ದಿ ಪೇಪರ್ ತುಂಬಾ. ಪ್ರೇಮ-ಪ್ರೀತಿ ವೈಫಲ್ಯಗಳ ನಂತರ 16-17ರ ವಯಸ್ಸಿನ ಮಕ್ಕಳು ಮಾಡುವ ಆತ್ಮಹತ್ಯೆಯ ಪ್ರಯತ್ನಗಳ, ಪ್ರಾಣ ಕಳೆದುಕೊಳ್ಳುವ ಸಂದರ್ಭಗಳೂ ಸಾಮಾನ್ಯವೇ. <br /> <br /> ಸೆಪ್ಟೆಂಬರ್ 8ರ ಜಾಗತಿಕ ಆತ್ಮಹತ್ಯಾ ತಡೆಗಟ್ಟುವ ದಿನದ ಈ ಬಾರಿಯ ಧ್ಯೇಯ ~ಬಹು ಸಂಸ್ಕೃತಿ ಸಮಾಜಗಳಲ್ಲಿ ಆತ್ಮಹತ್ಯೆಯನ್ನು ತಡೆಗಟ್ಟುವುದು~ (Preventing suicide in multicultural societies).ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲೂ, ಭಾರತದಂತಹ ಬಹುಸಂಸ್ಕೃತಿ ಸಮಾಜಗಳಲ್ಲಿ ಹದಿಹರೆಯದ ಮಕ್ಕಳಲ್ಲಿನ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚುತ್ತಿರುವುದು ಒಂದು ಆತಂಕಕಾರಿ ಬೆಳವಣಿಗೆ. <br /> <br /> 15 ರಿಂದ 24 ವರ್ಷ ವಯಸ್ಸಿನ ಯುವ ಜನರಲ್ಲಿ ಆತ್ಮಹತ್ಯೆ ಮರಣದ ಮೂರನೇ ಸಾಮಾನ್ಯ ಕಾರಣ. ಹದಿಹರೆಯದಲ್ಲಿ ಆತ್ಮಹತ್ಯೆ ಕೇವಲ ಖಿನ್ನತೆಯಂಥ ಮಾನಸಿಕ ಸಮಸ್ಯೆಗೆ ಸಂಬಂಧಿಸಿದ್ದಲ್ಲ. <br /> <br /> ಸಾಮಾಜಿಕವಾಗಿ ಇಂದಿನ ಹದಿಹರೆಯದ ಮಕ್ಕಳು ಎದುರಿಸುತ್ತಿರುವ ವಿವಿಧ ಸಾಮಾಜಿಕ - ಮಾನಸಿಕ - ದೈಹಿಕ ಒತ್ತಡಗಳ, ಸಂಘರ್ಷಗಳ ಪ್ರತಿಫಲವೂ ಹೌದು. ಶೈಕ್ಷಣಿಕ - ಸಂಬಂಧಗಳಲ್ಲಿನ ಭಾವನಾತ್ಮಕ ತಾಕಲಾಟ - ಒಂಟಿತನ ಈ ಮೂರು ಇಂದಿನ ಭಾರತೀಯ ಹದಿಹರೆಯದ ಮಕ್ಕಳು ಆತ್ಮಹತ್ಯಾ ಪ್ರಯತ್ನ ಮಾಡುವ ಮುಖ್ಯ ಕಾರಣಗಳು- <br /> <br /> <strong>* </strong>ಶೈಕ್ಷಣಿಕ - ಸಾಮರ್ಥ್ಯದ ಕೊರತೆ, ಅತಿ ನಿರೀಕ್ಷೆ, ತಮ್ಮ ಸಾಮರ್ಥ್ಯದ ಮಿತಿಗಳನ್ನು ಅರಿಯದೆ ಆರಿಸಿಕೊಳ್ಳುವ ಕಲಿಕೆಯ ಕ್ಷೇತ್ರಗಳು, ತಂದೆ-ತಾಯಿ-ಮಕ್ಕಳ ನಡುವಿನ ಕಲಿಕಾ ಕ್ಷೇತ್ರದ ಬಗೆಗಿನ ಭಿನ್ನಾಭಿಪ್ರಾಯ ಗಳು ಹೀಗೆ ಶೈಕ್ಷಣಿಕ ಒತ್ತಡ ವಿವಿಧ ರೀತಿಗಳಲ್ಲಿ ಕಾಡಬಹುದು. <br /> <br /> <strong>* </strong> ಸಂಬಂಧಗಳಲ್ಲಿನ ಭಾವನಾತ್ಮಕ ಸಮಸ್ಯೆಗಳು ತಂದೆ-ತಾಯಿಗಳೊಡನೆ ಇರದ ಮುಕ್ತ ಭಾವನಾತ್ಮಕ ಸಂಬಂಧ, ಸ್ನೇಹಿತರ ಒತ್ತಡ, ಜೊತೆಗೇ ಅಪ್ರಬುದ್ಧ ಪ್ರೇಮ ಸಂಬಂಧಗಳು ಹದಿಹರೆಯದ ಮನಸ್ಸಿನ ತುಂಬ ಗೊಂದಲವನ್ನುಂಟು ಮಾಡಬಹುದು. <br /> <br /> <strong>* </strong> ಒಂಟಿತನ - ಅಂತರ್ಮುಖಿಯಾದ ಹದಿಹರೆ ಯದ ಮನಸ್ಸುಗಳು ಒಂಟಿತನ ದಿಂದ ಯಾರೊಡನೆಯೂ ಮನಸ್ಸಿನ ಭಾವನೆ ಗಳನ್ನು ಹಂಚಿಕೊಳ್ಳ ಲಾಗದ ಖಿನ್ನತೆ ಅನುಭವಿಸಬಹುದು. ಅದೇ ಬಹಿರ್ಮುಖಿಯಾದ ಹದಿಹರೆಯದ ಮಕ್ಕಳು ಒಂಟಿತನ ವನ್ನು ನೀಗಲು ಮಾದಕ ದ್ರವ್ಯ ವ್ಯಸನ, ಸ್ನೇಹಿತರ ಅತಿಯಾದ ಸಹವಾಸ, ಇವುಗಳಲ್ಲಿ ತೊಡಗಬಹುದು. <br /> <br /> ಇವೆಲ್ಲದರ ಪರಿಣಾಮ ಖಿನ್ನತೆ, ನಡವಳಿಕೆಯಲ್ಲಿ ಹಿಂಸೆ - ಹಿಂದು ಮುಂದು ನೋಡದೆ ವರ್ತಿಸುವ ಪ್ರವೃತ್ತಿ ತಲೆದೋರುವುದು. ಇವು `ಆತ್ಮಹತ್ಯೆ~ ಎಂಬ ನಡವಳಿಕೆಯ ಹಿಂದಿನ ಹಂತಗಳು. ಈ ಹಂತಗಳು ಕ್ರಮೇಣ ಆತ್ಮಹತ್ಯೆ ಯ `ಯೋಚನೆ~ ಗಳಿಗೆ ದಾರಿಯಾಗುತ್ತವೆ. ಈ ಯೋಚನೆಗಳು:<br /> <br /> <strong>* </strong> ಸಾಯುವ ಬಗ್ಗೆ ಯೋಚಿಸುವುದು, ಮಾತನಾಡುವುದು, ಸಾಯುವ ವಿಧಗಳನ್ನು ಚಿಂತಿಸುವುದು. <br /> <strong>* </strong>ಉದ್ದೇಶವಿಲ್ಲದೆ ಬದುಕಲಾರಂಭಿಸುವುದು<br /> <strong>* </strong> ಆತಂಕ, ನಿದ್ರಾಹೀನತೆ <br /> <strong>* </strong> ಹೊರಹೋಗುವ ದಾರಿಯೇ ಮುಚ್ಚಿಹೋದಂತೆ, ಬಂಧನಕ್ಕೆ ಸಿಲುಕಿದಂತೆ ಅನಿಸುವುದು. <br /> <br /> <strong>ಕೋಪ, ಖಿನ್ನತೆ <br /> </strong>ಹೆಚ್ಚಿನ ಜನರ ಒಂದು ತಪ್ಪು ಭಾವನೆಯೆಂದರೆ ಆತ್ಮಹತ್ಯೆಯ ಬಗ್ಗೆ ಮಾತನಾಡುವವರು ಹಾಗೆ ಮಾಡುವುದಿಲ್ಲ ಎನ್ನುವುದು. ಆತ್ಮಹತ್ಯೆಗೆ ಪ್ರಯತ್ನಿಸುವ ಶೇಕಡ 75ರಷ್ಟು ಜನ ಅದರ ಬಗ್ಗೆ ಯಾವುದೇ ರೀತಿಯಲ್ಲಾದರೂ ಮೊದಲೇ ವ್ಯಕ್ತಪಡಿಸಿರುತ್ತಾರೆ ಎಂಬುದು ವೈಜ್ಞಾನಿಕ ಸತ್ಯ.<br /> <br /> ಅಷ್ಟೇ ಅಲ್ಲ, ಆತ್ಮಹತ್ಯೆಯ ಬಗ್ಗೆ ಕೇಳುವುದರಿಂದ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿದಂತಾಗುವ ಬದಲು ನಡೆಯಬಹುದಾದ ಆತ್ಮಹತ್ಯೆಯನ್ನು ತಡೆಗಟ್ಟಲು ಸಾಧ್ಯ ಎನ್ನುವ ಅಂಶವೂ ಮುಖ್ಯವೇ. <br /> <br /> ಹದಿಹರೆಯದ ಆತ್ಮಹತ್ಯೆಗಳನ್ನು ತಡೆಗಟ್ಟಲು ಹದಿಹರೆಯದ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವುದು ಅತ್ಯಗತ್ಯ. ಹಿರಿಯರೆ ಲ್ಲರೂ, ವಿಶೇಷವಾಗಿ ಹದಿಹರೆಯದ ಮಕ್ಕಳ ತಂದೆ-ತಾಯಿಗಳು ತಮ್ಮ ಹದಿಹರೆಯವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದ್ದು ಅತ್ಯಗತ್ಯ. <br /> <br /> ದೇಹದಲ್ಲಿ ಹಲವು ಬದಲಾವಣೆಗಳು, ಸಾಮಾಜಿಕ -ಶೈಕ್ಷಣಿಕ - ಔದ್ಯೋಗಿಕ ಕ್ಷೇತ್ರದ ಆಯ್ಕೆ - ಜವಾಬ್ದಾರಿಗಳ ಒತ್ತಡ, ತನ್ನ ರೂಪ -ಲೈಂಗಿಕತೆಯ ಅರಿವು, ತಂದೆ-ತಾಯಿಗಳ ಜೊತೆಗಿನ ಭಿನ್ನಾಭಿಪ್ರಾಯ-ತಲೆಮಾರುಗಳ ಅಂತರ ಇವು ನಮ್ಮ ಹದಿಹರೆಯದಲ್ಲಿಯೂ ಇದ್ದವು ತಾನೆ? ಅವುಗಳಿಂದ ನಾವು ಹೊರಬರುವ ದಾರಿಗಳು ಯಾವುದಾಗಿದ್ದವು?<br /> <br /> ಕುಟುಂಬದ ಬೆಂಬಲ-ಮಾರ್ಗದರ್ಶನ, ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಬಲಗೊಳ್ಳುವ ಆತ್ಮ ವಿಶ್ವಾಸ, ಹವ್ಯಾಸಗಳು ಈ ದಾರಿಗಳು ಇಂದಿನ ಸಮಾಜದಲ್ಲಿಯೂ ಇವುಗಳನ್ನು ಕಂಡು ಕೊಳ್ಳುವ ಪ್ರಾಮಾಣಿಕ ಪ್ರಯತ್ನ ಆಗಬೇಕು. <br /> <br /> ಹದಿಹರೆಯದ ಮಕ್ಕಳು ಈ ಕೆಳಗಿನ ವಿಷಯಗಳ ಬಗ್ಗೆ ಮಾತನಾಡಿದಾಗ ತಂದೆ- ತಾಯಿಗಳು ಎಚ್ಚರವಹಿಸಬೇಕು. ಇದು `ಮಾತನಾಡಬೇಕಾದ~, `ಗಮನಿಸಬೇಕಾದ~ ಸಮಯ ಎಂದು ತಿಳಿದುಕೊಳ್ಳಬೇಕು. <br /> <br /> <strong>* </strong> ಸಾವಿನ ಬಗ್ಗೆ ಸಾಮಾನ್ಯವಾಗಿಯೂ ಮತ್ತೆ ಮತ್ತೆ ಮಾತನಾಡಲಾರಂಭಿಸಿದರೆ <br /> <strong>* </strong> ``ನಾನು ಎಲ್ಲಾದರೂ ಹೋಗಿಬಿಡುತ್ತೇನೆ~~ ಎಂದಾಗ <br /> <strong>* </strong> ``ನನಗೆ ಮುಂದೇನೂ ಉಳಿದಿಲ್ಲ~~ ಅಥವಾ ``ನಾನು ತಪ್ಪು ಮಾಡಿದ್ದೇನೆ~~ ಎಂಬಂಥ ಅಭಿಪ್ರಾಯಗಳನ್ನು ಸೂಚಿಸಿದಾಗ.<br /> <strong>* </strong> ಸ್ನೇಹಿತರು, ಕುಟುಂಬದಿಂದ ದೂರವಾಗಿ ಒಂಟಿಯಾಗಿ ಸಮಯ ಕಳೆಯಲಾರಂಭಿಸಿದರೆ .<br /> <br /> <strong>ಹದಿಹರೆಯದ ಮಕ್ಕಳ ತಂದೆ ತಾಯಿಗಳು ನೀವಾಗಿದ್ದರೆ:</strong><br /> <strong>* </strong> ಆತ್ಮಹತ್ಯೆಯ ಸಾಧ್ಯತೆಯ ಬಗೆಗೆ ಎಚ್ಚರವಿರಲಿ.<br /> <strong>* </strong> ಹದಿಹರೆಯದ ಮಕ್ಕಳಿಗೆ `ಶಿಸ್ತು - ಸ್ವಾತಂತ್ರ್ಯ~ ಎರಡರ ಅವಶ್ಯಕತೆಯೂ ಇದೆ. <br /> <strong>* </strong> ಹದಿಹರೆಯದ ಮಕ್ಕಳ ಬಳಿ ತಂದೆ-ತಾಯಿ ಪ್ರತಿದಿನ ಉತ್ತಮ ಗುಣಮಟ್ಟದ ಸಮಯ ಕಳೆಯಬೇಕಾದ್ದು ಅತ್ಯಗತ್ಯ. <br /> <strong>* </strong> ನಿಮ್ಮ ನಿರೀಕ್ಷೆಗಳು ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತಿರಬೇಕು. ಮಕ್ಕಳ ನಿರೀಕ್ಷೆಗಳೂ ಅಷ್ಟೆ. ಅವರ ಸಾಮರ್ಥ್ಯ - ಶ್ರಮಪಡುವ ಸ್ವಭಾವಕ್ಕೆ ತಕ್ಕಂತೆ ಇರುವಂತೆ ತಂದೆ-ತಾಯಿ ನೋಡಿಕೊಳ್ಳಬೇಕು. <br /> <strong>* </strong> ಕೆಲವೊಮ್ಮೆ ಭಾವನಾತ್ಮಕ ಅಸ್ಥಿರತೆಯ ವ್ಯಕ್ತಿತ್ವದಿಂದ ಹದಿಹರೆಯದ ಮಕ್ಕಳು ಮಾಡುವ `ಸಾಯುವ ಪ್ರಯತ್ನಗಳು~ ನಿಜವಾಗಿ ಸಾಯುವ ದಾರಿಗಳಲ್ಲದಿ ರಬಹುದು. ಆದರೆ ಅವು ``ನನಗೆ ಸಹಾಯ ಬೇಕು~~ ಎಂದು ಬೇಡುವ ನೋವಿನ ಕರೆಗಳು. ಹಾಗಾಗಿ ತತ್ಕ್ಷಣ ಮನೋ ವೈದ್ಯರ ಸಲಹೆಗೆ ಅವರನ್ನು ಕರೆದೊಯ್ಯಬೇಕಾದ್ದು ಅತ್ಯವಶ್ಯ. <br /> <strong>* </strong> ಹದಿಹರೆಯದ ಮಕ್ಕಳ ನಡವಳಿಕೆ ಹೆಚ್ಚಿನ ತಂದೆ-ತಾಯಿಗಳಿಗೆ ಮಾನಸಿಕ ಒತ್ತಡ ತರಬಹುದು ರೇಗದಿರಲು, ಕೋಪಿಸದಿರಲು ಅಸಾಧ್ಯ ಎನಿಸುವಂತೆಯೂ ಮಾಡಬಹುದು. ಆದರೆ ಇದು ತಾತ್ಕಾಲಿಕ. `ಹದಿಹರೆಯ~ದಿಂದ ಮಕ್ಕಳು ಹರೆಯ-ಯೌವ್ವನದ ಪ್ರಬುದ್ಧತೆಗೆ ಬರುವವರೆಗೆ ಈ ಸಂಘರ್ಷ ಕಾಲ. ಆ ಸಮಯವನ್ನು ಎದುರಿಸಲು ಮಾನಸಿಕವಾಗಿ ಸಿದ್ಧತೆ ಅಗತ್ಯ. <br /> <strong>* </strong> ಹದಿಹರೆಯದ ಮಕ್ಕಳ - ನಿಮ್ಮ ನಡುವಣ ತಾಕಲಾಟಗಳು ಮತ್ತೆ ಮತ್ತೆ ನಡೆಯುತ್ತಿದ್ದರೆ, ನಿಮಗೂ ಅದನ್ನು ನಿಭಾಯಿಸಲು ಕಷ್ಟ ಎನಿಸಿದರೆ ಸಂದೇಹಿಸದೆ ಕೌಟುಂಬಿಕ ಆಪ್ತ ಸಲಹೆ ಪಡೆಯಿರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>