<p><strong>ಮುಂಬೈ:</strong> ಐಸಿಸಿ ಏಕದಿನ ವಿಶ್ವಕಪ್ ಗೆದ್ದುಕೊಂಡ ಭಾರತ ತಂಡದಲ್ಲಿರುವ ಮಹಾರಾಷ್ಟ್ರದ ಆಟಗಾರ್ತಿಯರಾದ ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್ ಮತ್ತು ರಾಧಾ ಯಾದವ್ ಅವರನ್ನು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಶುಕ್ರವಾರ ನಡೆದ ಸಮಾರಂಭದಲ್ಲಿ ಸನ್ಮಾನಿಸಿದರು. ಮೂವರಿಗೂ ತಲಾ ₹2.5 ಕೋಟಿ ನಗದು ಬಹುಮಾನ ನೀಡಲಾಯಿತು.</p>.<p>ಮುಖ್ಯಮಂತ್ರಿ ಅಧಿಕೃತ ನಿವಾಸ ‘ವರ್ಷಾ’ದಲ್ಲಿ ಕಾರ್ಯಕ್ರಮ ನಡೆಯಿತು. ಈ ಮೂವರು ಆಟಗಾರ್ತಿಯರನ್ನು ‘ಮಹಾರಾಷ್ಟ್ರದ ಹೆಮ್ಮೆ’ ಎಂದು ಮುಖ್ಯಮಂತ್ರಿ ಬಣ್ಣಿಸಿದರು.</p>.<p>ಹೋದ ಭಾನುವಾರ ನವಿ ಮುಂಬೈನಲ್ಲಿ ನಡೆದ ಫೈನಲ್ನಲ್ಲಿ ಭಾರತ ತಂಡವು 52 ರನ್ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ವಿಶ್ವ ಚಾಂಪಿಯನ್ ಆಗಿತ್ತು.</p>.<p>ತಂಡದ ಕೋಚ್ ಅಮೋಲ್ ಮಜುಂದಾರ್ ಅವರಿಗೆ ₹22.5 ಲಕ್ಷ ಮೊತ್ತದ ಚೆಕ್ ನೀಡಿ ಗೌರವಿಸಲಾಯಿತು. ಬೌಲಿಂಗ್ ಕೋಚ್ ಅವಿಷ್ಕಾರ್ ಸಾಳ್ವಿ, ಮಾಜಿ ದಿಗ್ಗಜ ಆಟಗಾರ್ತಿ ಡಯಾನ ಎಡುಲ್ಜಿ, ವಿಡಿಯೊ ಅನಲಿಸ್ಟ್ ಅನಿರುದ್ಧ ದೇಶಪಾಂಡೆ ಅವರಿಗೂ ನಗದು ಬಹುಮಾನ ನೀಡಲಾಯಿತು.</p>.<h2>ಶ್ರೀಚರಣಿಗೂ ಬಂಪರ್:</h2>.<p><strong>(ಹೈದರಾಬಾದ್ ವರದಿ/ ಪ್ರಜಾವಾಣಿ ವಾರ್ತೆ):</strong> ಮಹಿಳಾ ವಿಶ್ವಕಪ್ ತಂಡದಲ್ಲಿದ್ದ ಸ್ಪಿನ್ ಬೌಲರ್ ಶ್ರೀಚರಣಿ ಅವರಿಗೆ ಆಂಧ್ರ ಸರ್ಕಾರವು ಶುಕ್ರವಾರ ₹2.5 ಕೋಟಿ ನಗದು ಬಹುಮಾನ ಘೋಷಿಸಿದೆ. ವಸತಿ ನಿವೇಶನ ಮತ್ತು ಗ್ರೂಪ್1 ಸರ್ಕಾರಿ ಉದ್ಯೋಗ ನೀಡುವುದಾಗಿಯೂ ಪ್ರಕಟಿಸಿದೆ.</p>.<p>ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಅಮರಾವತಿಯಲ್ಲಿ ಶ್ರೀ ಚರಣೀ ಮತ್ತು ಭಾರತ ತಂಡದ ಮಾಜಿ ನಾಯಕಿ ಮಿತಾಲಿ ರಾಜ್ ಅವರನ್ನು ಭೇಟಿಯಾದ ವೇಳೆ ಈ ಕೊಡುಗೆ ಪ್ರಕಟಿಸಿದರು.</p>.<p>ಕಡಪ ಜಿಲ್ಲೆಯವರಾದ ಶ್ರೀಚರಣಿ ಅವರು ವಿಜಯವಾಡದ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಸಂಭ್ರಮದ ಸ್ವಾಗತ ನೀಡಲಾಯಿತು. ಮೂವರು ಸಚಿವರು ಅವರನ್ನು ಎದುರ್ಗೊಂಡರು.</p>.<h2>ಆಟಗಾರ್ತಿಯರಿಗೆ ಕಾರು ಕೊಡುಗೆ</h2>.<p>ವಿಶ್ವಕಪ್ ಗೆದ್ದ ಭಾರತ ತಂಡದ ಪ್ರತಿಯೊಬ್ಬ ಆಟಗಾರ್ತಿಗೆ ಹೊಸದಾಗಿ ಬಿಡುಗಡೆಯಾಗಲಿರುವ ಟಾಟಾ ಸಿಯೆರಾ ಕಾರು ಉಡುಗೊರೆಯಾಗಿ ನೀಡುವುದಾಗಿ ಟಾಟಾ ಮೋಟರ್ಸ್ ಗುರುವಾರ ಎಕ್ಸ್ನಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಐಸಿಸಿ ಏಕದಿನ ವಿಶ್ವಕಪ್ ಗೆದ್ದುಕೊಂಡ ಭಾರತ ತಂಡದಲ್ಲಿರುವ ಮಹಾರಾಷ್ಟ್ರದ ಆಟಗಾರ್ತಿಯರಾದ ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್ ಮತ್ತು ರಾಧಾ ಯಾದವ್ ಅವರನ್ನು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಶುಕ್ರವಾರ ನಡೆದ ಸಮಾರಂಭದಲ್ಲಿ ಸನ್ಮಾನಿಸಿದರು. ಮೂವರಿಗೂ ತಲಾ ₹2.5 ಕೋಟಿ ನಗದು ಬಹುಮಾನ ನೀಡಲಾಯಿತು.</p>.<p>ಮುಖ್ಯಮಂತ್ರಿ ಅಧಿಕೃತ ನಿವಾಸ ‘ವರ್ಷಾ’ದಲ್ಲಿ ಕಾರ್ಯಕ್ರಮ ನಡೆಯಿತು. ಈ ಮೂವರು ಆಟಗಾರ್ತಿಯರನ್ನು ‘ಮಹಾರಾಷ್ಟ್ರದ ಹೆಮ್ಮೆ’ ಎಂದು ಮುಖ್ಯಮಂತ್ರಿ ಬಣ್ಣಿಸಿದರು.</p>.<p>ಹೋದ ಭಾನುವಾರ ನವಿ ಮುಂಬೈನಲ್ಲಿ ನಡೆದ ಫೈನಲ್ನಲ್ಲಿ ಭಾರತ ತಂಡವು 52 ರನ್ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ವಿಶ್ವ ಚಾಂಪಿಯನ್ ಆಗಿತ್ತು.</p>.<p>ತಂಡದ ಕೋಚ್ ಅಮೋಲ್ ಮಜುಂದಾರ್ ಅವರಿಗೆ ₹22.5 ಲಕ್ಷ ಮೊತ್ತದ ಚೆಕ್ ನೀಡಿ ಗೌರವಿಸಲಾಯಿತು. ಬೌಲಿಂಗ್ ಕೋಚ್ ಅವಿಷ್ಕಾರ್ ಸಾಳ್ವಿ, ಮಾಜಿ ದಿಗ್ಗಜ ಆಟಗಾರ್ತಿ ಡಯಾನ ಎಡುಲ್ಜಿ, ವಿಡಿಯೊ ಅನಲಿಸ್ಟ್ ಅನಿರುದ್ಧ ದೇಶಪಾಂಡೆ ಅವರಿಗೂ ನಗದು ಬಹುಮಾನ ನೀಡಲಾಯಿತು.</p>.<h2>ಶ್ರೀಚರಣಿಗೂ ಬಂಪರ್:</h2>.<p><strong>(ಹೈದರಾಬಾದ್ ವರದಿ/ ಪ್ರಜಾವಾಣಿ ವಾರ್ತೆ):</strong> ಮಹಿಳಾ ವಿಶ್ವಕಪ್ ತಂಡದಲ್ಲಿದ್ದ ಸ್ಪಿನ್ ಬೌಲರ್ ಶ್ರೀಚರಣಿ ಅವರಿಗೆ ಆಂಧ್ರ ಸರ್ಕಾರವು ಶುಕ್ರವಾರ ₹2.5 ಕೋಟಿ ನಗದು ಬಹುಮಾನ ಘೋಷಿಸಿದೆ. ವಸತಿ ನಿವೇಶನ ಮತ್ತು ಗ್ರೂಪ್1 ಸರ್ಕಾರಿ ಉದ್ಯೋಗ ನೀಡುವುದಾಗಿಯೂ ಪ್ರಕಟಿಸಿದೆ.</p>.<p>ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಅಮರಾವತಿಯಲ್ಲಿ ಶ್ರೀ ಚರಣೀ ಮತ್ತು ಭಾರತ ತಂಡದ ಮಾಜಿ ನಾಯಕಿ ಮಿತಾಲಿ ರಾಜ್ ಅವರನ್ನು ಭೇಟಿಯಾದ ವೇಳೆ ಈ ಕೊಡುಗೆ ಪ್ರಕಟಿಸಿದರು.</p>.<p>ಕಡಪ ಜಿಲ್ಲೆಯವರಾದ ಶ್ರೀಚರಣಿ ಅವರು ವಿಜಯವಾಡದ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಸಂಭ್ರಮದ ಸ್ವಾಗತ ನೀಡಲಾಯಿತು. ಮೂವರು ಸಚಿವರು ಅವರನ್ನು ಎದುರ್ಗೊಂಡರು.</p>.<h2>ಆಟಗಾರ್ತಿಯರಿಗೆ ಕಾರು ಕೊಡುಗೆ</h2>.<p>ವಿಶ್ವಕಪ್ ಗೆದ್ದ ಭಾರತ ತಂಡದ ಪ್ರತಿಯೊಬ್ಬ ಆಟಗಾರ್ತಿಗೆ ಹೊಸದಾಗಿ ಬಿಡುಗಡೆಯಾಗಲಿರುವ ಟಾಟಾ ಸಿಯೆರಾ ಕಾರು ಉಡುಗೊರೆಯಾಗಿ ನೀಡುವುದಾಗಿ ಟಾಟಾ ಮೋಟರ್ಸ್ ಗುರುವಾರ ಎಕ್ಸ್ನಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>