ದಿನ ಭವಿಷ್ಯ: ಗುಂಪು ಚಟುವಟಿಕೆಯಲ್ಲಿ ಮುಂದಾಳತ್ವವು ನಿಮ್ಮದಾಗಲಿದೆ
Published 13 ನವೆಂಬರ್ 2025, 19:04 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹಲವು ವಾದ ವಿವಾದಗಳಿಂದ ಸಂಬಂಧದಲ್ಲಿ ಉಂಟಾದ ಒಡಕು ಗಳು ಸಮಾಧಾನದ ಮಾತುಗಳಿಂದಾಗಿ ಪರಿಹಾರವಾಗುತ್ತವೆ. ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಜನರು ಬರಲಿದ್ದಾರೆ.
13 ನವೆಂಬರ್ 2025, 19:04 IST
ವೃಷಭ
ದೇಶಭಕ್ತಿಯ ಹೆಸರಿನಲ್ಲಿ ನಡೆಸಿರುವ ಹಾಗೂ ನಡೆಸುವ ಕಾರ್ಯಗಳು ಜನಮಾನ್ಯವಾಗುತ್ತವೆ. ಗುಂಪು ಚಟುವಟಿಕೆಯಲ್ಲಿ ಮುಂದಾಳತ್ವವು ನಿಮ್ಮದಾಗಲಿದೆ. ಸಾಂಸಾರಿಕ ಜವಾಬ್ದಾರಿಗಳು ಹೆಚ್ಚಲಿವೆ.
13 ನವೆಂಬರ್ 2025, 19:04 IST
ಮಿಥುನ
ಸೂರ್ಯೋದಯದೊಳಗೆ ಮನಸಂಕಲ್ಪ ನೆರವೇರಿಸಿಕೊಳ್ಳಲು ಸರ್ವಪ್ರಯತ್ನ ನಡೆಸುವಿರಿ. ಧನ ಆದಾಯಕ್ಕೆ ಯಾವುದೇ ರೀತಿಯ ಅಡ್ಡಿ ಆತಂಕಗಳು ಇರುವುದಿಲ್ಲ. ಮಾರ್ಗದರ್ಶಕರ ಸಲಹೆ ಪಡೆದು ಪಾಲಿಸಿರಿ.
13 ನವೆಂಬರ್ 2025, 19:04 IST
ಕರ್ಕಾಟಕ
ದಾನ-ಧರ್ಮ ಸ್ವಭಾವ ದುರುಪಯೋಗಪಡಿಸಿಕೊಳ್ಳದಂತೆ ಜಾಗ್ರತೆ ವಹಿಸಿ. ಗೃಹ ಉತ್ಪಾದಕ ವಸ್ತುಗಳ ಮಾರಾಟದಲ್ಲಿ ಲಾಭವಾಗುವ ಸಾಧ್ಯತೆಗಳಿವೆ. ತಂಗಿಯರ ವಿದ್ಯಾಭ್ಯಾಸದಲ್ಲಿ ಮೇಲ್ವಿಚಾರಣೆ ನಡೆಸಿ.
13 ನವೆಂಬರ್ 2025, 19:04 IST
ಸಿಂಹ
ಸ್ಥಿರ ಆಸ್ತಿಯನ್ನು ಸಂಪಾದಿಸುವಲ್ಲಿ ನಿರ್ಣಯದಲ್ಲಿ ದೃಢವಾಗಿ ನಿಲ್ಲುವಂತಹ ತೀರ್ಮಾನವನ್ನು ಮಾಡಿಕೊಳ್ಳಿರಿ. ಸಂಬಂಧಿಗಳಲ್ಲಿ ಆದರ ಭಾವದಿಂದ ನಡೆದುಕೊಳ್ಳುವಿರಿ. ಪ್ರಯಾಣಕ್ಕೆ ಹೆಚ್ಚು ಧನ ವ್ಯಯ ಆಗುವುದು.
13 ನವೆಂಬರ್ 2025, 19:04 IST
ಕನ್ಯಾ
ಮನೆಯಲ್ಲಿ ಸುಖ-ಶಾಂತಿ ಸಮೃದ್ಧಿಯಾಗಿದ್ದರೂ ಮನದಲ್ಲಿ ಮಕ್ಕಳ ವಿಚಾರವಾಗಿ ಭಯದ ಭೀತಿ ತೋರಿಬಂದೀತು. ನೆರೆ ಮನೆಯವರ ಶುಭ ಸಮಾರಂಭಕ್ಕೆ ಹೋಗುವ ಸಲುವಾಗಿ ಕಿರು ಪ್ರಯಾಣ ಇರುವುದು.
13 ನವೆಂಬರ್ 2025, 19:04 IST
ತುಲಾ
ವ್ಯವಹಾರದಲ್ಲಿನ ಹಿಂದಿನ ನಿರ್ಧಾರಗಳು ಒಳಿತಿಗಾಗಿ ಬದಲಾಗುವ ಸಂಭವವಿದೆ. ಕಳೆದು ಹೋದ ವಸ್ತುವನ್ನು ಸಮಾಧಾನದ ಶೋಧನದಿಂದಾಗಿ ಪಡೆದುಕೊಳ್ಳುವಿರಿ. ಪ್ರವಾಸ ಯೋಜನೆಗಳು ಕಾರ್ಯ ರೂಪಕ್ಕೆ ಬರಲಿವೆ.
13 ನವೆಂಬರ್ 2025, 19:04 IST
ವೃಶ್ಚಿಕ
ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಸಂಪಾದನೆಯ ಜತೆಯಲ್ಲಿ ಉಡುಗೊರೆ ಸಿಗುವ ಯೋಗ. ಮುಗ್ಧವಾದ ಮಕ್ಕಳ ಆಟೋಪಚಾರವನ್ನು ಕಂಡು ಹರ್ಷಗೊಳ್ಳುವಿರಿ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.
13 ನವೆಂಬರ್ 2025, 19:04 IST
ಧನು
ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುವ ಆಹಾರವನ್ನು ಸೇವಿಸದಿರಿ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲ ಉಂಟಾಗಬಹುದು.
13 ನವೆಂಬರ್ 2025, 19:04 IST
ಮಕರ
ಉದ್ಯೋಗದ ಬದುಕಿನಲ್ಲಿ ತಪ್ಪಿ ಹೋಗಿದ್ದ ಅವಕಾಶಗಳು ದೊರೆಯಲಿವೆ. ಬಹುಜನರ ಒಡನಾಟದಿಂದ ವಿಶ್ವಾಸ, ಪ್ರೀತಿ ಪಡೆಯುವಂತಾಗುವುದು. ಸಹಿಯನ್ನು ನಕಲು ಪಡಿಸುವವರಿದ್ದಾರೆ. ಎಚ್ಚರವಾಗಿರಿ.
13 ನವೆಂಬರ್ 2025, 19:04 IST
ಕುಂಭ
ಮನೆಯಲ್ಲಿನ ಮಂಗಳ ಕಾರ್ಯಕ್ರಮಕ್ಕೆ ಆಪ್ತರ ನೆರವು ದೊರೆಯದೆ ಖೇದ ಉಂಟಾದರೂ ಹಠದಿಂದ ಉತ್ತಮವಾಗಿ ಮಾಡುವಿರಿ. ವಿದ್ಯಾರ್ಥಿಗಳಿಗೆ ಸ್ವಪ್ರಯತ್ನದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.
13 ನವೆಂಬರ್ 2025, 19:04 IST
ಮೀನ
ಗ್ರಾಮ ಪಂಚಾಯ್ತಿಯಂಥ ಇಲಾಖೆಯ ಅಧಿಕಾರಿಗಳಿಗೆ ಕಾರ್ಯಭಾರ ಹೊರಬೇಕಾಗುವುದು. ಸ್ವಪ್ನಸದೃಶ್ಯವಾದ ಘಟನೆಗಳನ್ನು ನೋಡುವ ಸಾಧ್ಯತೆ ಇದೆ. ಕೃಷಿಕರಿಗೆ ಕೃಷಿಯಲ್ಲಿ ಉತ್ಸಾಹ ಹೆಚ್ಚುವಂತಾಗಲಿದೆ.
13 ನವೆಂಬರ್ 2025, 19:04 IST