ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಬಹುತೇಕ ರಸ್ತೆಗಳಲ್ಲಿ ಜನರ ಓಡಾಟ ಕಡಿಮೆ ಇದೆ. ಚಿಕ್ಕಪೇಟೆ, ಮೈಸೂರು ಬ್ಯಾಂಕ್ ವೃತ್ತ ಹಾಗೂ ಸುತ್ತಮುತ್ತ ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿ, ಹೋಟೆಲ್ಗಳು ಸ್ವಯಂಪ್ರೇರಿತವಾಗಿ ಬಂದ್ ಆಗಿವೆ. ತಮಿಳುನಾಡು ಬಸ್ಗಳು ಹಾಗೂ ಸರಕು ಸಾಗಣೆ ವಾಹನಗಳು ಸಂಚರಿಸುವ ಹೊಸೂರು ರಸ್ತೆಯಲ್ಲೂ ಪೊಲೀಸರ ಭದ್ರತೆ ಬಿಗಿಯಾಗಿದೆ. ಈ ರಸ್ತೆಯಲ್ಲೂ ಜನರ ಓಡಾಟ ಕಡಿಮೆ ಇದೆ.'ಒತ್ತಾಯದ ಬಂದ್ಗೆ ಅವಕಾಶವಿಲ್ಲ. ಯಾರಾದರೂ ಜನರಿಗೆ ತೊಂದರೆ ಕೊಟ್ಟರೆ, ಜನರ ಆಸ್ತಿಗೆ ಹಾನಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಪೊಲೀಸರು ಎಚ್ಚರಿಸಿದ್ದಾರೆ