ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಪ್ರಶಸ್ತಿ ಪ್ರದಾನ ಮಾಡಿ, ‘ಮಾಧ್ಯಮಗಳು ಜನರಿಗೆ ಮಾರ್ಗದರ್ಶಕ ಗಳಿದ್ದಂತೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕಾರ್ಯ ನಿರ್ವಹಣೆಗೂ ಇವು ಸಹಕರಿಸುತ್ತಿವೆ. ಮಾಧ್ಯಮಗಳಿಂದ ರಚನಾತ್ಮಕ ಟೀಕೆ ಬಂದರೆ ತಪ್ಪು ತಿದ್ದಿಕೊಳ್ಳಬಹುದು. ಆರೋಪದ ಸುದ್ದಿಗಳನ್ನು ಮುಖಪುಟದಲ್ಲಿ ಹಾಕುತ್ತಿರಿ. ಅದೇ ವ್ಯಕ್ತಿ ಆರೋಪದಿಂದ ಮುಕ್ತವಾದಾಗ ಅಷ್ಟೇ ದೊಡ್ಡ ಸುದ್ದಿ ಮಾಡುವುದಿಲ್ಲ’ ಎಂದು ಹೇಳಿದರು.