ಮಹದೇವ ಅವರು ಅದೇ ಗ್ರಾಮದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು. ಇದನ್ನು ತಿಳಿದ ಪತ್ನಿ ಮಂಜುಳಾ, ಮಹದೇವ ಅವರನ್ನು ಪ್ರಶ್ನಿಸಿದ್ದರು. ಇದರಿಂದಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಒಂದು ದಿನ ಜಗಳ ನಡೆಯುತ್ತಿದ್ದಾಗ ಮಹದೇವ ಅವರು ಕೋಪದಿಂದ ಮಂಜುಳಗೆ ಹೊಡೆದು ಅವರ ಬಲಗೈಯ ಹೆಬ್ಬೆರಳನ್ನು ಕುಡುಗೋಲಿನಿಂದ ಕತ್ತರಿಸಿದ್ದರು. ಜಗಳವನ್ನು ಬಿಡಿಸಲು ಬಂದಿದ್ದ ಮಂಜುಳಾ ತಾಯಿಯ ಮೇಲೂ ಹಲ್ಲೆ ಮಾಡಿದ್ದರು.