ನಾಗರಾಜ ಅವರು ನ್ಯಾಮತಿ ಕರ್ಣಾಟಕ ಬ್ಯಾಂಕ್ನಲ್ಲಿ ₹ 40 ಸಾವಿರ, ಕೆನರಾ ಬ್ಯಾಂಕ್ನಲ್ಲಿ ₹ 3 ಲಕ್ಷ ಹಾಗೂ ಸವಳಂಗ ಎಸ್ಬಿಐ ಬ್ಯಾಂಕ್ನಲ್ಲಿ ಬಂಗಾರ ಅಡವಿಟ್ಟು ಸಾಲ ಪಡೆದುಕೊಂಡಿದ್ದರು. ಖಾಸಗಿಯವರಿಂದಲೂ ಕೈಗಡ ಸಾಲ ಪಡೆದುಕೊಂಡಿದ್ದರು. ಈ ಬಾರಿ ಅನಾವೃಷ್ಟಿಯ ಕಾರಣ ಬೆಳೆ ಬಂದಿಲ್ಲ. ಸಾಲ ತೀರಿಸುವುದು ಹೇಗೆ ಎಂದು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ನಳಿನಾ ನ್ಯಾಮತಿ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.