ಡಿಎಪಿ ಹಾಗೂ ಯೂರಿಯಾ ಗೊಬ್ಬರ ಪೂರೈಕೆ ನಿಧಾನಗತಿಯಲ್ಲಿದ್ದು ರೈತರು ಪರ್ಯಾಯ ಸಂಯುಕ್ತ ರಸಗೊಬ್ಬರಗಳನ್ನು ಬಳಸಬೇಕು
ಮಲ್ಲಿಕಾರ್ಜುನ ಜಂಟಿ ನಿರ್ದೇಶಕ ಕೃಷಿ ಇಲಾಖೆ
‘ಮೊಳಕೆಯೊಡೆಯದ ಬೀಜಗಳು’
ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದನ್ನು ನಂಬಿಕೊಂಡು ಹಲವು ರೈತರು ಬಿತ್ತನೆ ಕೆಲಸ ಪೂರ್ಣಗೊಳಿಸಿದ್ದಾರೆ. ಆದರೆ ಮುಂಗಾರು ಆರಂಭದ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿತ್ತು. ಇದರಿಂದಾಗಿ ಹಲವು ರೈತರ ಜಮೀನಿನಲ್ಲಿ ಬೀಜಗಳು ಮೊಳಕೆಯೊಡೆದಿಲ್ಲವೆಂಬ ದೂರುಗಳು ಕೇಳಿಬರುತ್ತಿವೆ. ಹಾವೇರಿ ರಾಣೆಬೆನ್ನೂರು ಹಾನಗಲ್ ಬ್ಯಾಡಗಿ ಹಿರೇಕೆರೂರು ರಟ್ಟೀಹಳ್ಳಿ ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನ ಹಲವು ಜಮೀನುಗಳಲ್ಲಿ ಬೆಳೆ ಮೊಳಕೆಯೊಡೆಯುವಲ್ಲಿ ವ್ಯತ್ಯಾಸ ಕಂಡುಬಂದಿದೆ. ಇದರ ಜೊತೆಯಲ್ಲಿ ಅಲ್ಲಲ್ಲಿ ಬೆಳೆಗಳಿಗೆ ರೋಗವೂ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ರೈತರು ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ‘ನಮ್ಮ ಜಮೀನಿನಲ್ಲಿ ಏಕಕಾಲ ಗೋವಿನ ಜೋಳ ಬಿತ್ತನೆ ಮಾಡಿದ್ದೆವು. ನೀರಿನ ಕೊರತೆಯಿಂದ ಜಮೀನಿನ ಹಲವು ಕಡೆ ಬೀಜ ಮೊಳಕೆಯೊಡೆದಿಲ್ಲ. ಅಂಥ ಕಡೆಗಳಲ್ಲಿ ಪುನಃ ಬೀಜಗಳನ್ನು ಹಾಕುತ್ತಿದ್ದೇವೆ’ ಎಂದು ಬ್ಯಾಡಗಿ ರೈತ ಶಂಕ್ರಣ್ಣ ಚಕ್ರಸಾಲಿ ಹೇಳಿದರು.