‘ಎರಡು ದಿನದ ಹಿಂದೆ ಪೊಲೀಸ್ ಕಾನ್ಸ್ಟೆಬಲ್ರ ಪತ್ನಿ ಹಾಗೂ ಪುತ್ರನಿಗೆ ಬೀದಿ ನಾಯಿಯೊಂದು ಆದರ್ಶ ಕಾಲೊನಿಯಲ್ಲಿ ಕಚ್ಚಿ ಗಂಭೀರ ಗಾಯಗೊಳಿಸಿದೆ. ಇದೊಂದೇ ಘಟನೆಯಲ್ಲ. ನಗರದ ಪ್ರತಿ ವಾರ್ಡ್, ಬಜಾರ್ಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ಬೈಕ್ ಸವಾರರು, ಪಾದಚಾರಿಗಳು ಓಣಿಗಳಲ್ಲಿ ಸಂಚರಿಸಲು ಹಿಂದೇಟು ಹಾಕುವಂತಾಗಿದೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.