ಬೆಳಗಾವಿಯ ಸರಾಫ್ ಬಜಾರ್ನಲ್ಲಿ ಸ್ಥಗಿತಗೊಂಡ ಬೆಳ್ಳಿ ಸಾಮಗ್ರಿಗಳ ತಯಾರಿಕಾ ಘಟಕ
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಚಿನ್ನ– ಬೆಳ್ಳಿ ಮಳಿಗೆಗಳೇ ಹೆಚ್ಚಾಗಿರುವ ಬೆಳಗಾವಿ ನಗರದ ಶಹಾಪುರದ ‘ಸರಾಫ್ ಬಜಾರ್’ನಲ್ಲಿ ಈಗ ಗ್ರಾಹಕರ ಕೊರತೆ ಕಾಣುತ್ತಿದೆ
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಹಿಂದೆಲ್ಲ ತಿಂಗಳಿಗೊಮ್ಮೆ ಬೆಲೆ ಏರುಪೇರಾದರೆ ದೊಡ್ಡ ವಿಷಯವಾಗುತ್ತಿತ್ತು. ಈಗ ದಿನದಲ್ಲಿ ಮೂರರಿಂದ ನಾಲ್ಕು ಬಾರಿ ಏರಿಳಿತ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೆಲಸ ಒಪ್ಪಿಕೊಳ್ಳಲು ಯಾರಿಗೂ ಭರವಸೆ ಇಲ್ಲ.
– ಪ್ರಕಾಶ್ ಆಚಾರ್ ಹಲೆಜಿ, ಕಾರ್ಯದರ್ಶಿ, ದಕ್ಷಿಣ ಕನ್ನಡ ಚಿನ್ನ–ಬೆಳ್ಳಿ ಆಭರಣ ತಯಾರಕರ ಸಂಘ
ಬೆಳ್ಳಿ, ಬಂಗಾರದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಖರೀದಿ ಮತ್ತು ದುರಸ್ತಿಗೆಂದು ಬರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಗ್ರಾಹಕರು ಬಾರದ ಕಾರಣ ನಮಗೂ ಕೆಲಸ ಇಲ್ಲದಂತಾಗಿದೆ.
– ಶ್ರೀಕಾಂತ ಪತ್ತಾರ, ಜಿಲ್ಲಾ ಘಟಕದ ಅಧ್ಯಕ್ಷ, ಕರ್ನಾಟಕ ಸ್ವರ್ಣಕಾರರ ಸಂಘ, ಬಾಗಲಕೋಟೆ
ಬೆಳಗಾವಿಯ ಅಕ್ಕಸಾಲಿಗ ಆನಂದ ಹಾವನೂರ ಅವರ ಕಾರ್ಖಾನೆಯಲ್ಲಿ ಸಿದ್ಧಗೊಂಡ ಬೆಳ್ಳಿ ಮೂರ್ತಿಗಳು
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಲೆ ಏರಿಕೆ ಕಾರಣದಿಂದ ಚಿನ್ನ, ಬೆಳ್ಳಿ ಖರೀದಿಸುವವರ ಸಂಖ್ಯೆ ತೀವ್ರವಾಗಿ ಕುಸಿದಿದೆ. ಪರಿಣಾಮ ಅಕ್ಕಸಾಲಿಗರಿಗೂ ಕೆಲಸ ನೀಡಲು ಸಾಧ್ಯವಾಗುತ್ತಿಲ್ಲ.
– ಚೇತನ್ಕುಮಾರ್ ಮೆಹ್ತಾ, ಅಧ್ಯಕ್ಷ,ಕರ್ನಾಟಕ ಜುವೆಲರ್ಸ್ ಅಸೋಸಿಯೇಷನ್
ಅಕ್ಕಸಾಲಿಗರು ಅಸಂಘಟಿತ ವಲಯದಲ್ಲಿ ಬರುತ್ತಾರೆ. ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಣಿ ಮಾಡಿದರೆ ಅಪಘಾತದಲ್ಲಿ ತೀರಿಕೊಂಡರೆ ₹1 ಲಕ್ಷ, ಗಾಯಗೊಂಡರೆ ₹50 ಸಾವಿರ, ಸಹಜ ಸಾವಿಗೆ ₹10 ಸಾವಿರ ಸಹಾಯಧನ ಸಿಗುತ್ತದೆ.
– ರಮೇಶ ಸುಂಬಡ, ಜಿಲ್ಲಾ ಕಾರ್ಮಿಕ ಅಧಿಕಾರಿ, ಕಾರ್ಮಿಕ ಇಲಾಖೆ, ಬಾಗಲಕೋಟೆ ಜಿಲ್ಲೆ
ಬಾಗಲಕೋಟೆಯ ಚಿನ್ನ, ಬೆಳ್ಳಿ ದುರಸ್ತಿ ಅಂಗಡಿಯಲ್ಲಿ ಗ್ರಾಹಕರಿಗಾಗಿ ಕಾಯುತ್ತಿರುವ ಅಕ್ಕಸಾಲಿಗ