<p><strong>ಸೀತಾಮರ್ಹಿ:</strong> ಆರ್ಜೆಡಿ ನೇತೃತ್ವದ ಮಹಾ ಘಟಬಂಧನ್ ಅನ್ನು ಜನರು ಖಂಡಿತವಾಗಿಯೂ ಮತ ನೀಡಿ ಬೆಂಬಲಿಸುವುದಿಲ್ಲ. ಏಕೆಂದರೆ ಇವರು ಅಧಿಕಾರಕ್ಕೆ ಬಂದರೆ ಜನರ ತಲೆಗೆ ‘ಕಟ್ಟಾ’ (ದೇಸಿ ಬಂದೂಕು) ಇಟ್ಟು, ಕೈ ಎತ್ತಲು ಹೇಳುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲೇವಡಿ ಮಾಡಿದ್ದಾರೆ.</p><p>ವಿಧಾನಸಭಾ ಚುನಾವಣೆ ನಡೆಯುತ್ತಿರುವ ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ರ್ಯಾಲಿಯನ್ನುದ್ದೇಶಿಸಿ ಶನಿವಾರ ಅವರು ಮಾತನಾಡಿದರು.</p><p>‘ಎನ್ಡಿಎ ಸರ್ಕಾರದಲ್ಲಿ ಸ್ಟಾರ್ಟ್ಅಪ್ ಉದ್ಯಮಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ನಡೆಯುತ್ತಿದೆ. ಶಿಕ್ಷಣ ಮತ್ತು ಕ್ರೀಡೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆದರೆ ಮತ್ತೊಂದೆಡೆ ಆರ್ಜೆಡಿಯು ಮಕ್ಕಳನ್ನು ‘ರಂಗ್ದಾರ್’ (ಬೀದಿ ಗೂಳಿ) ಅನ್ನಾಗಿ ಬೆಳೆಯುವಂತೆ ಕರೆ ನೀಡುತ್ತಿದೆ. ಹೀಗೆ ಬಂದೂಕು ಸಂಸ್ಕೃತಿಯ ಹಾಗೂ ದುರಾಡಳಿತ ನಡೆಸುವ, ಹಿಂಸಾಚಾರದಲ್ಲಿ ತೊಡಗುವ ಭ್ರಷ್ಟರನ್ನು ಅಧಿಕಾರಕ್ಕೆ ತರಬೇಡಿ’ ಎಂದರು.</p><p>‘ನಮಗೆ ಇಂಥ ‘ಕಟ್ಟಾ ಸರ್ಕಾರ್’ ಬೇಡ. ನಮಗೆ ಮತ್ತೆ ಎನ್ಡಿಎ ಸರ್ಕಾರ ಬೇಕು’ ಎಂಬ ಘೋಷಣೆಯನ್ನು ಪ್ರಧಾನಿ ಇದೇ ಸಂದರ್ಭದಲ್ಲಿ ಮೊಳಗಿಸಿದರು. ಬಿಹಾರ ಚುನಾವಣೆಯಲ್ಲಿ ಈವರೆಗೂ ಹತ್ತಕ್ಕೂ ಹೆಚ್ಚು ರ್ಯಾಲಿಗಳಲ್ಲಿ ಭಾಗವಹಿಸಿರುವ ನರೇಂದ್ರ ಮೋದಿ, ಈ ಘೋಷಣೆಯನ್ನು ಹೇಳುತ್ತಿದ್ದಾರೆ.</p>.<h3>ವಿರೋಧಿಗಳಿಗೆ 65 ವೋಲ್ಟ್ನ ಆಘಾತ</h3><p>'ತಲೆಗೆ ಬಂದೂಕು ಇಡುವ ಸರ್ಕಾರ ಜನರಿಗೆ ಬೇಡ. ಮಕ್ಕಳಿಗೆ ಶಾಲೆ, ಕಂಪ್ಯೂಟರ್, ಕ್ರಿಕೆಟ್ ಬ್ಯಾಟ್ ಹಾಗೂ ಹಾಕಿ ಸ್ಟಿಕ್ ಹೊಂದಲು ಉತ್ತೇಜಿಸುವ ಎನ್ಡಿಎ ಸರ್ಕಾರವನ್ನು ಅಪೇಕ್ಷಿಸುತ್ತಿದ್ದಾರೆ. ಮೊದಲ ಹಂತದ ಮತದಾನದಲ್ಲಿ ಶೇ 65.08ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಇದು ವಿರೋಧಿಗಳಿಗೆ 65 ವೋಲ್ಟ್ನ ಆಘಾತ ನೀಡಿದಂತಾಗಿದೆ. ಹೀಗಾಗಿ ಅವರು ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ’ ಎಂದು ಮೋದಿ ವಿರೋಧಿಗಳ ಕಾಲೆಳೆದಿದ್ದಾರೆ.</p><p>‘ಮುಖ್ಯಮಂತ್ರಿ ಮಹಿಳಾ ಉದ್ಯಮಿ ಯೋಜನೆ ಮೂಲಕ ಪ್ರತಿ ಮಹಿಳೆಯ ಖಾತೆಗೆ ₹10 ಸಾವಿರ ನಗದನ್ನು ನೇರ ವರ್ಗಾವಣೆ ಮಾಡಲಾಗಿದೆ. ‘ಜಂಗಲ್ ರಾಜ್’ ನಡೆಸುವವರು ಇದನ್ನು ಎಂದಿಗೂ ಊಹಿಸಿರಲಿಲ್ಲ. ಕಾಂಗ್ರೆಸ್ನ ನಾಮ್ದಾರ್ (ರಾಹುಲ್ ಗಾಂಧಿ) ಅವರ ತಂದೆ (ರಾಜೀವ್ ಗಾಂಧಿ) ಹಿಂದೆ ಪ್ರಧಾನಿಯಾಗಿದ್ದಾಗ ಒಂದು ಮಾತು ಹೇಳಿದ್ದರು. ಸರ್ಕಾರ ನೀಡುವ ಪ್ರತಿ ₹1ರಲ್ಲಿ ಕೇವಲ 15 ಪೈಸೆ ಮಾತ್ರ ಜನರನ್ನು ತಲುಪುತ್ತಿದೆ. ಈ ಲೂಟಿಯ ಹಿಂದೆ ರಕ್ತಸಿಕ್ತ ಕೈಗಳಿವೆ’ ಎಂದು ಆರೋಪಿಸಿದರು.</p><p>‘ಎನ್ಡಿಎ ಸರ್ಕಾರವು ಸೀತಾ ಜನ್ಮಸ್ಥಳವನ್ನು ಅಭಿವೃದ್ಧಿಗೊಳಿಸುವ ಸಂಕಲ್ಪ ಮಾಡಿದೆ. ಆದರೆ ಕಾಂಗ್ರೆಸ್ನ ನಾಮ್ದಾರ್ ಅವರು ಛತ್ ಪೂಜೆಯನ್ನು ‘ನೌಟಂಕಿ’ (ನಾಟಕ) ಎಂದು ಹೇಳಿ ಅವಮಾನಿಸಿದ್ದಾರೆ. ಇದು ಹಿಂದೂಗಳ ಭಾವನೆಗೆ ಆದ ಘಾಸಿಯಲ್ಲವೇ? ಅದಕ್ಕಾಗಿ ಅವರಿಗೆ ಅವಮಾನ ಆಗಬೇಕಲ್ಲವೇ? ಪ್ರಜಾಪ್ರಭುತ್ವದಲ್ಲಿ ಇದಕ್ಕೆ ನೀಡುವ ಬಹುದೊಡ್ಡ ಶಿಕ್ಷೆ ಎಂದರೆ ಅವರಿಗೆ ಮತ ಹಾಕದಿರುವುದು’ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.</p><p>‘ತಮ್ಮ ಮತ ಬ್ಯಾಂಕ್ ಭದ್ರತೆಗಾಗಿ ಆರ್ಜೆಡಿ ಹಾಗೂ ಕಾಂಗ್ರೆಸ್ ಪಕ್ಷಗಳ ಮುಖಂಡರು ರಾಮ ಮಂದಿರ ಉದ್ಘಾಟನೆಯನ್ನು ಬಹಿಷ್ಕರಿಸಿದರು. ಮಹಾ ಕುಂಭಮೇಳದಲ್ಲೂ ಇವರು ಪಾಲ್ಗೊಂಡಿರಲಿಲ್ಲ. ಅಯೋಧ್ಯೆಯಲ್ಲಿ ಸ್ಥಾಪಿಸಲಾಗಿರುವ ಮಾತಾ ಶಬರಿ, ಮಹರ್ಷಿ ವಾಲ್ಮೀಕಿ ಹಾಗೂ ನಿಶಾದ್ ರಾಜ್ ದೇಗುಲಗಳ ಉದ್ಘಾಟನೆಗೂ ಇವರು ಬರಲಿಲ್ಲ. ಮತ ಬ್ಯಾಂಕ್ಗಾಗಿ ರಾಜಕೀಯ ಮಾಡುವವರು ಎಂದಿಗೂ ರಾಜ್ಯಕ್ಕೆ ಒಳ್ಳೆಯದನ್ನು ಮಾಡುವುದಿಲ್ಲ. ಇವರೇನಿದ್ದರೂ ನುಸುಳುಕೋರರಿಗೆ ನೆರವಾಗುವವರು’ ಎಂದು ವಿರೋಧ ಪಕ್ಷದವರನ್ನು ಮೋದಿ ಜರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೀತಾಮರ್ಹಿ:</strong> ಆರ್ಜೆಡಿ ನೇತೃತ್ವದ ಮಹಾ ಘಟಬಂಧನ್ ಅನ್ನು ಜನರು ಖಂಡಿತವಾಗಿಯೂ ಮತ ನೀಡಿ ಬೆಂಬಲಿಸುವುದಿಲ್ಲ. ಏಕೆಂದರೆ ಇವರು ಅಧಿಕಾರಕ್ಕೆ ಬಂದರೆ ಜನರ ತಲೆಗೆ ‘ಕಟ್ಟಾ’ (ದೇಸಿ ಬಂದೂಕು) ಇಟ್ಟು, ಕೈ ಎತ್ತಲು ಹೇಳುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲೇವಡಿ ಮಾಡಿದ್ದಾರೆ.</p><p>ವಿಧಾನಸಭಾ ಚುನಾವಣೆ ನಡೆಯುತ್ತಿರುವ ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ರ್ಯಾಲಿಯನ್ನುದ್ದೇಶಿಸಿ ಶನಿವಾರ ಅವರು ಮಾತನಾಡಿದರು.</p><p>‘ಎನ್ಡಿಎ ಸರ್ಕಾರದಲ್ಲಿ ಸ್ಟಾರ್ಟ್ಅಪ್ ಉದ್ಯಮಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ನಡೆಯುತ್ತಿದೆ. ಶಿಕ್ಷಣ ಮತ್ತು ಕ್ರೀಡೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆದರೆ ಮತ್ತೊಂದೆಡೆ ಆರ್ಜೆಡಿಯು ಮಕ್ಕಳನ್ನು ‘ರಂಗ್ದಾರ್’ (ಬೀದಿ ಗೂಳಿ) ಅನ್ನಾಗಿ ಬೆಳೆಯುವಂತೆ ಕರೆ ನೀಡುತ್ತಿದೆ. ಹೀಗೆ ಬಂದೂಕು ಸಂಸ್ಕೃತಿಯ ಹಾಗೂ ದುರಾಡಳಿತ ನಡೆಸುವ, ಹಿಂಸಾಚಾರದಲ್ಲಿ ತೊಡಗುವ ಭ್ರಷ್ಟರನ್ನು ಅಧಿಕಾರಕ್ಕೆ ತರಬೇಡಿ’ ಎಂದರು.</p><p>‘ನಮಗೆ ಇಂಥ ‘ಕಟ್ಟಾ ಸರ್ಕಾರ್’ ಬೇಡ. ನಮಗೆ ಮತ್ತೆ ಎನ್ಡಿಎ ಸರ್ಕಾರ ಬೇಕು’ ಎಂಬ ಘೋಷಣೆಯನ್ನು ಪ್ರಧಾನಿ ಇದೇ ಸಂದರ್ಭದಲ್ಲಿ ಮೊಳಗಿಸಿದರು. ಬಿಹಾರ ಚುನಾವಣೆಯಲ್ಲಿ ಈವರೆಗೂ ಹತ್ತಕ್ಕೂ ಹೆಚ್ಚು ರ್ಯಾಲಿಗಳಲ್ಲಿ ಭಾಗವಹಿಸಿರುವ ನರೇಂದ್ರ ಮೋದಿ, ಈ ಘೋಷಣೆಯನ್ನು ಹೇಳುತ್ತಿದ್ದಾರೆ.</p>.<h3>ವಿರೋಧಿಗಳಿಗೆ 65 ವೋಲ್ಟ್ನ ಆಘಾತ</h3><p>'ತಲೆಗೆ ಬಂದೂಕು ಇಡುವ ಸರ್ಕಾರ ಜನರಿಗೆ ಬೇಡ. ಮಕ್ಕಳಿಗೆ ಶಾಲೆ, ಕಂಪ್ಯೂಟರ್, ಕ್ರಿಕೆಟ್ ಬ್ಯಾಟ್ ಹಾಗೂ ಹಾಕಿ ಸ್ಟಿಕ್ ಹೊಂದಲು ಉತ್ತೇಜಿಸುವ ಎನ್ಡಿಎ ಸರ್ಕಾರವನ್ನು ಅಪೇಕ್ಷಿಸುತ್ತಿದ್ದಾರೆ. ಮೊದಲ ಹಂತದ ಮತದಾನದಲ್ಲಿ ಶೇ 65.08ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಇದು ವಿರೋಧಿಗಳಿಗೆ 65 ವೋಲ್ಟ್ನ ಆಘಾತ ನೀಡಿದಂತಾಗಿದೆ. ಹೀಗಾಗಿ ಅವರು ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ’ ಎಂದು ಮೋದಿ ವಿರೋಧಿಗಳ ಕಾಲೆಳೆದಿದ್ದಾರೆ.</p><p>‘ಮುಖ್ಯಮಂತ್ರಿ ಮಹಿಳಾ ಉದ್ಯಮಿ ಯೋಜನೆ ಮೂಲಕ ಪ್ರತಿ ಮಹಿಳೆಯ ಖಾತೆಗೆ ₹10 ಸಾವಿರ ನಗದನ್ನು ನೇರ ವರ್ಗಾವಣೆ ಮಾಡಲಾಗಿದೆ. ‘ಜಂಗಲ್ ರಾಜ್’ ನಡೆಸುವವರು ಇದನ್ನು ಎಂದಿಗೂ ಊಹಿಸಿರಲಿಲ್ಲ. ಕಾಂಗ್ರೆಸ್ನ ನಾಮ್ದಾರ್ (ರಾಹುಲ್ ಗಾಂಧಿ) ಅವರ ತಂದೆ (ರಾಜೀವ್ ಗಾಂಧಿ) ಹಿಂದೆ ಪ್ರಧಾನಿಯಾಗಿದ್ದಾಗ ಒಂದು ಮಾತು ಹೇಳಿದ್ದರು. ಸರ್ಕಾರ ನೀಡುವ ಪ್ರತಿ ₹1ರಲ್ಲಿ ಕೇವಲ 15 ಪೈಸೆ ಮಾತ್ರ ಜನರನ್ನು ತಲುಪುತ್ತಿದೆ. ಈ ಲೂಟಿಯ ಹಿಂದೆ ರಕ್ತಸಿಕ್ತ ಕೈಗಳಿವೆ’ ಎಂದು ಆರೋಪಿಸಿದರು.</p><p>‘ಎನ್ಡಿಎ ಸರ್ಕಾರವು ಸೀತಾ ಜನ್ಮಸ್ಥಳವನ್ನು ಅಭಿವೃದ್ಧಿಗೊಳಿಸುವ ಸಂಕಲ್ಪ ಮಾಡಿದೆ. ಆದರೆ ಕಾಂಗ್ರೆಸ್ನ ನಾಮ್ದಾರ್ ಅವರು ಛತ್ ಪೂಜೆಯನ್ನು ‘ನೌಟಂಕಿ’ (ನಾಟಕ) ಎಂದು ಹೇಳಿ ಅವಮಾನಿಸಿದ್ದಾರೆ. ಇದು ಹಿಂದೂಗಳ ಭಾವನೆಗೆ ಆದ ಘಾಸಿಯಲ್ಲವೇ? ಅದಕ್ಕಾಗಿ ಅವರಿಗೆ ಅವಮಾನ ಆಗಬೇಕಲ್ಲವೇ? ಪ್ರಜಾಪ್ರಭುತ್ವದಲ್ಲಿ ಇದಕ್ಕೆ ನೀಡುವ ಬಹುದೊಡ್ಡ ಶಿಕ್ಷೆ ಎಂದರೆ ಅವರಿಗೆ ಮತ ಹಾಕದಿರುವುದು’ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.</p><p>‘ತಮ್ಮ ಮತ ಬ್ಯಾಂಕ್ ಭದ್ರತೆಗಾಗಿ ಆರ್ಜೆಡಿ ಹಾಗೂ ಕಾಂಗ್ರೆಸ್ ಪಕ್ಷಗಳ ಮುಖಂಡರು ರಾಮ ಮಂದಿರ ಉದ್ಘಾಟನೆಯನ್ನು ಬಹಿಷ್ಕರಿಸಿದರು. ಮಹಾ ಕುಂಭಮೇಳದಲ್ಲೂ ಇವರು ಪಾಲ್ಗೊಂಡಿರಲಿಲ್ಲ. ಅಯೋಧ್ಯೆಯಲ್ಲಿ ಸ್ಥಾಪಿಸಲಾಗಿರುವ ಮಾತಾ ಶಬರಿ, ಮಹರ್ಷಿ ವಾಲ್ಮೀಕಿ ಹಾಗೂ ನಿಶಾದ್ ರಾಜ್ ದೇಗುಲಗಳ ಉದ್ಘಾಟನೆಗೂ ಇವರು ಬರಲಿಲ್ಲ. ಮತ ಬ್ಯಾಂಕ್ಗಾಗಿ ರಾಜಕೀಯ ಮಾಡುವವರು ಎಂದಿಗೂ ರಾಜ್ಯಕ್ಕೆ ಒಳ್ಳೆಯದನ್ನು ಮಾಡುವುದಿಲ್ಲ. ಇವರೇನಿದ್ದರೂ ನುಸುಳುಕೋರರಿಗೆ ನೆರವಾಗುವವರು’ ಎಂದು ವಿರೋಧ ಪಕ್ಷದವರನ್ನು ಮೋದಿ ಜರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>