ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಅಜಿತ್‌ ಬಣವೇ ನಿಜವಾದ ಎನ್‌ಸಿಪಿ: ರಾಹುಲ್‌ ನಾರ್ವೇಕರ್‌

ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಹೇಳಿಕೆ
Published : 15 ಫೆಬ್ರುವರಿ 2024, 15:24 IST
Last Updated : 15 ಫೆಬ್ರುವರಿ 2024, 15:24 IST
ಫಾಲೋ ಮಾಡಿ
Comments
ಸುಪ್ರಿಯಾ ಸುಳೆ
ಸುಪ್ರಿಯಾ ಸುಳೆ
ಅಗೋಚರ ಶಕ್ತಿಯ ಕೈವಾಡ
ಸುಪ್ರಿಯಾ ಸುಳೆ ಮುಂಬೈ (ಪಿಟಿಐ): ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷ– ಶರದ್‌ಚಂದ್ರ ಪವಾರ್‌ ಬಣದ ನಾಯಕಿ ಸುಪ್ರಿಯಾ ಸುಳೆ ಅವರು ಬಿಜೆಪಿಯ ಹೆಸರನ್ನು ಉಲ್ಲೇಖಿಸಿದೇ ಆ ಪಕ್ಷದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದಾರೆ. ‘ಶರದ್‌ ಪವಾರ್‌ ಅವರು ಹಿಂದೆಯೂ ಎನ್‌ಸಿಪಿಯ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದರು. ಮುಂದೆಯೂ ಅವರೇ ಪಕ್ಷದ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿರುತ್ತಾರೆ. ನಮ್ಮ ತಂದೆಯಿಂದ ಪಕ್ಷವನ್ನು ಕಸಿದುಕೊಳ್ಳಲು ಯಾವುದೋ ‘ಅಗೋಚರ ಶಕ್ತಿ’ ಪ್ರಯತ್ನಿಸುತ್ತಿದೆ’ ಎಂದು ಅವರು ಹೇಳಿದ್ದಾರೆ. ‘ಅಜಿತ್‌ ಪವಾರ್‌ ಅವರ ನೇತೃತ್ವದ ಬಣವೇ ನಿಜವಾದ ಎನ್‌ಸಿಪಿ ಎಂದು ಭಾರತೀಯ ಚುನಾವಣಾ ಆಯೋಗ ಹೇಳಿದೆ. ಪಕ್ಷವನ್ನು ಕಟ್ಟಿದವರಿಂದಲೇ ಪಕ್ಷ ಮತ್ತು ಚಿಹ್ನೆಯನ್ನು ಕಸಿದುಕೊಳ್ಳಲಾಗಿದೆ. ಆದ್ದರಿಂದ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ನಾವು ಸುಪ್ರೀಂ ಕೋರ್ಟ್‌ ಮೊರೆಹೋಗಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT