<p><strong>ಕೊಲಂಬೊ</strong>: ಶ್ರೀಲಂಕಾದ ಪೂರ್ವ ಭಾಗದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಭಾರತ ₹230.71 ಕೋಟಿ ನೆರವು ನೀಡುತ್ತಿದೆ.</p><p>ಮಂಗಳವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಶ್ರೀಲಂಕಾ ಆರೋಗ್ಯ ಸಚಿವ ಹಾಗೂ ವಕ್ತಾರ ನಳಂದಾ ಜಯಥಿಸ್ಸಾ ಅವರು ಈ ವಿಷಯ ತಿಳಿಸಿದರು.</p><p>ನಮ್ಮ ಕೋರಿಕೆಯ ಮೇರೆಗಿನ ಭಾರತ್ ಸರ್ಕಾರದ ಪ್ರಸ್ತಾವಗಳಿಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿ ಸಹಿ ಹಾಕಿದೆ. ಇದು ಉಭಯ ರಾಷ್ಟ್ರಗಳ ರಾಜಕೀಯ–ಆರ್ಥಿಕ ಸಹಕಾರ ಬಲ ವೃದ್ಧಿಗೆ ಅನುಕೂಲ ಆಗಲಿದೆ ಎಂದು ಅವರು ವಿವರಿಸಿದರು.</p><p>₹230.71 ಕೋಟಿಯಲ್ಲಿ ₹30.15 ಕೋಟಿ ಶಿಕ್ಷಣಕ್ಕೆ ₹70.80 ಕೋಟಿ ಆರೋಗ್ಯಕ್ಕೆ ಮತ್ತು ₹60.20 ಕೋಟಿಯನ್ನು ಕೃಷಿ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ. ಇದರಿಂದ ಸ್ಥಳೀಯರ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗಲಿ. ಇದಕ್ಕಾಗಿ ನಾವು ಭಾರತ್ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.</p><p>2023ರ ಆರಂಭದಲ್ಲಿ ಶ್ರೀಲಂಕಾ ರಾಜಕೀಯ ಅಸ್ಥಿರತೆಯಿಂದ ಆರ್ಥಿಕ ದಿವಾಳಿತನವನ್ನು ಎದುರಿಸಿತ್ತು. ಹೀಗಾಗಿ ಭಾರತ, ಶ್ರೀಲಂಕಾಕ್ಕೆ ಮಾನವೀಯ ನೆರವು ನೀಡಲು ಮುಂದಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲಂಬೊ</strong>: ಶ್ರೀಲಂಕಾದ ಪೂರ್ವ ಭಾಗದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಭಾರತ ₹230.71 ಕೋಟಿ ನೆರವು ನೀಡುತ್ತಿದೆ.</p><p>ಮಂಗಳವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಶ್ರೀಲಂಕಾ ಆರೋಗ್ಯ ಸಚಿವ ಹಾಗೂ ವಕ್ತಾರ ನಳಂದಾ ಜಯಥಿಸ್ಸಾ ಅವರು ಈ ವಿಷಯ ತಿಳಿಸಿದರು.</p><p>ನಮ್ಮ ಕೋರಿಕೆಯ ಮೇರೆಗಿನ ಭಾರತ್ ಸರ್ಕಾರದ ಪ್ರಸ್ತಾವಗಳಿಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿ ಸಹಿ ಹಾಕಿದೆ. ಇದು ಉಭಯ ರಾಷ್ಟ್ರಗಳ ರಾಜಕೀಯ–ಆರ್ಥಿಕ ಸಹಕಾರ ಬಲ ವೃದ್ಧಿಗೆ ಅನುಕೂಲ ಆಗಲಿದೆ ಎಂದು ಅವರು ವಿವರಿಸಿದರು.</p><p>₹230.71 ಕೋಟಿಯಲ್ಲಿ ₹30.15 ಕೋಟಿ ಶಿಕ್ಷಣಕ್ಕೆ ₹70.80 ಕೋಟಿ ಆರೋಗ್ಯಕ್ಕೆ ಮತ್ತು ₹60.20 ಕೋಟಿಯನ್ನು ಕೃಷಿ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ. ಇದರಿಂದ ಸ್ಥಳೀಯರ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗಲಿ. ಇದಕ್ಕಾಗಿ ನಾವು ಭಾರತ್ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.</p><p>2023ರ ಆರಂಭದಲ್ಲಿ ಶ್ರೀಲಂಕಾ ರಾಜಕೀಯ ಅಸ್ಥಿರತೆಯಿಂದ ಆರ್ಥಿಕ ದಿವಾಳಿತನವನ್ನು ಎದುರಿಸಿತ್ತು. ಹೀಗಾಗಿ ಭಾರತ, ಶ್ರೀಲಂಕಾಕ್ಕೆ ಮಾನವೀಯ ನೆರವು ನೀಡಲು ಮುಂದಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>