<p><strong>ವಾಷಿಂಗ್ಟನ್</strong>: ಬಡವರ, ದೀನದಲಿತರ ಪರ ದನಿಯಾಗಿದ್ದ ‘ಪೋಪ್ ಆಫ್ ಸ್ಲಂ’ ಖ್ಯಾತಿಯ ಪೋಪ್ ಫ್ರಾನ್ಸಿಸ್ ಸೋಮವಾರ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು.</p><p>ಶ್ವಾಸಕೋಶದ ಸೋಂಕಿನಿಂದ ಮಾರ್ಚ್ 24ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು ಸಾರ್ವಜನಿಕ ಸಮಾರಂಭಗಳಿಂದ ದೂರವಿದ್ದರು. </p><p>ಈಸ್ಟರ್ ಭಾನುವಾರದ ಪ್ರಯುಕ್ತ ನಿನ್ನೆ(ಏ.20) ಸೈಂಟ್ ಪೀಟರ್ ಬೆಸಿಲಿಕದಲ್ಲಿ ಗಾಲಿ ಕುರ್ಚಿಯಲ್ಲಿಯೇ ಕುಳಿತು ಅನುಯಾಯಿಗಳಿಗೆ ದರ್ಶನ ನೀಡಿದ್ದರು. ಈ ವೇಳೆ ಪೋಪ್ ಫ್ರಾನ್ಸಿಸ್ ಅವರ ಪರವಾಗಿ ಮತ್ತೊಬ್ಬರು ಈಸ್ಟರ್ ಭಾಷಣವನ್ನು ಓದಿದ್ದಾರೆ.</p>.<p>ತಮ್ಮ ಕೊನೆಯ ಸಂದೇಶದಲ್ಲಿ, ‘ನಾವು ಸಾವಿಗಾಗಿ ಅಲ್ಲ ಬದುಕುವುದಕ್ಕಾಗಿ ಇಲ್ಲಿ ಇದ್ದೇವೆ’ ಎಂದು ತಿಳಿಸಿದ್ದರು.</p><p>‘ಧಾರ್ಮಿಕ ಸ್ವಾತಂತ್ರ್ಯ ಮತ್ತು ಇತರರ ಅಭಿಪ್ರಾಯಗಳನ್ನು ಗೌರವಿಸದ ಹೊರತು ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ’ ಎಂದೂ ಹೇಳಿದ್ದರು.</p>.<blockquote><strong>ಉಕ್ರೇನ್ನಲ್ಲಿ ಯುದ್ಧ ನಿಲ್ಲಿಸಲು ಕರೆ:</strong></blockquote>.<p>‘ಯುದ್ಧದಿಂದ ನಲುಗಿರುವ ಉಕ್ರೇನ್ಗೆ ಈಸ್ಟರ್ ಉಡುಗೊರೆಯಾಗಿ ಆ ದೇವರು ಶಾಂತಿಯನ್ನು ದಯಪಾಲಿಸಲಿ. ಶಾಶ್ವತ ಶಾಂತಿಗಾಗಿ ನಡೆಯುತ್ತಿರುವ ಎಲ್ಲ ಪ್ರಯತ್ನಗಳು ಸಫಲವಾಗಲಿ’ ಎಂದು ಪ್ರಾರ್ಥಿಸಿದ್ದಾರೆ.</p><p>ಯುದ್ಧದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಅವರು, ಯುದ್ಧ ನಿಲ್ಲಿಸುವಂತೆ ಜಾಗತಿಕ ನಾಯಕರಿಗೆ ಕರೆ ನೀಡಿದ್ದಾರೆ.</p>.<blockquote><strong>ಸುಡಾನ್ ಮತ್ತು ಮ್ಯಾನ್ಮಾರ್ ಪರವಾಗಿ ಪ್ರಾರ್ಥನೆ:</strong></blockquote>.<p>ತಮ್ಮ ಕೊನೆಯ ಭಾಷಣದಲ್ಲಿ ಮಿಲಿಟರಿ ಸಂಘರ್ಷ ಮತ್ತು ಭೂಕಂಪದಿಂದ ಬಳಲುತ್ತಿರುವ ಮ್ಯಾನ್ಮಾರ್ ಜನರಿಗಾಗಿ ಪೋಪ್ ಪ್ರಾರ್ಥಿಸಿದ್ದಾರೆ. ಸಂಘರ್ಷ ಅಂತ್ಯ ಕಂಡು ಶಾಂತಿ ನೆಲೆಸಲಿ ಎಂದು ಹಾರೈಸಿದ್ದಾರೆ. ಅಲ್ಲದೇ ಭೂಕಂಪದಿಂದ ಕುಟುಂಬ ಸದಸ್ಯರನ್ನು ಕಳೆದುಕೊಂಡವರಿಗೆ ಸಾಂತ್ವನ ಹೇಳಿರುವ ಅವರು, ಈ ಸಮಯದಲ್ಲಿ ಸಹಾಯ ಹಸ್ತ ಚಾಚಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.</p><p>ಇನ್ನೂ, ಹಿಂಸಾಚಾರ, ಸಂಘರ್ಷಕ್ಕೆ ಬಲಿಯಾಗಿರುವ ಆಫ್ರಿಕಾದ ಜನರಿಗೆ ಅದರಲ್ಲಿಯೂ ವಿಶೇಷವಾಗಿ ಕಾಂಗೋ ಗಣರಾಜ್ಯ, ಸುಡಾನ್ ಮತ್ತು ದಕ್ಷಿಣ ಸುಡಾನ್ ಜನರಿಗಾಗಿ ಪೋಪ್ ಮಿಡಿದಿದ್ದಾರೆ. ಹಿಂಸಾಚಾರ ನಿಂತು ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದ್ದಾರೆ.</p>.<blockquote><strong>ಗಾಜಾದ ಪರಿಸ್ಥಿತಿ ಬಗ್ಗೆ ಕಳವಳ:</strong></blockquote>.<p>ಗಾಜಾದ ಜನರು ಮತ್ತು ಅದರ ಕ್ರಿಶ್ಚಿಯನ್ ಸಮುದಾಯದ ಬಗ್ಗೆ ನಾನು ಚಿಂತಾಕ್ರಾಂತನಾಗಿದ್ದೇನೆ. ಭೀಕರ ಸಂಘರ್ಷವು ಸಾವು ಮತ್ತು ವಿನಾಶಕ್ಕೆ ಕಾರಣವಾಗುತ್ತಿದೆ. ಶೋಚನೀಯ ಅವಮಾನವೀಯ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ ಎಂದು ಹೇಳಿದ್ದರು. ಅಲ್ಲದೆ ಮತ್ತೊಮ್ಮೆ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್</strong>: ಬಡವರ, ದೀನದಲಿತರ ಪರ ದನಿಯಾಗಿದ್ದ ‘ಪೋಪ್ ಆಫ್ ಸ್ಲಂ’ ಖ್ಯಾತಿಯ ಪೋಪ್ ಫ್ರಾನ್ಸಿಸ್ ಸೋಮವಾರ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು.</p><p>ಶ್ವಾಸಕೋಶದ ಸೋಂಕಿನಿಂದ ಮಾರ್ಚ್ 24ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು ಸಾರ್ವಜನಿಕ ಸಮಾರಂಭಗಳಿಂದ ದೂರವಿದ್ದರು. </p><p>ಈಸ್ಟರ್ ಭಾನುವಾರದ ಪ್ರಯುಕ್ತ ನಿನ್ನೆ(ಏ.20) ಸೈಂಟ್ ಪೀಟರ್ ಬೆಸಿಲಿಕದಲ್ಲಿ ಗಾಲಿ ಕುರ್ಚಿಯಲ್ಲಿಯೇ ಕುಳಿತು ಅನುಯಾಯಿಗಳಿಗೆ ದರ್ಶನ ನೀಡಿದ್ದರು. ಈ ವೇಳೆ ಪೋಪ್ ಫ್ರಾನ್ಸಿಸ್ ಅವರ ಪರವಾಗಿ ಮತ್ತೊಬ್ಬರು ಈಸ್ಟರ್ ಭಾಷಣವನ್ನು ಓದಿದ್ದಾರೆ.</p>.<p>ತಮ್ಮ ಕೊನೆಯ ಸಂದೇಶದಲ್ಲಿ, ‘ನಾವು ಸಾವಿಗಾಗಿ ಅಲ್ಲ ಬದುಕುವುದಕ್ಕಾಗಿ ಇಲ್ಲಿ ಇದ್ದೇವೆ’ ಎಂದು ತಿಳಿಸಿದ್ದರು.</p><p>‘ಧಾರ್ಮಿಕ ಸ್ವಾತಂತ್ರ್ಯ ಮತ್ತು ಇತರರ ಅಭಿಪ್ರಾಯಗಳನ್ನು ಗೌರವಿಸದ ಹೊರತು ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ’ ಎಂದೂ ಹೇಳಿದ್ದರು.</p>.<blockquote><strong>ಉಕ್ರೇನ್ನಲ್ಲಿ ಯುದ್ಧ ನಿಲ್ಲಿಸಲು ಕರೆ:</strong></blockquote>.<p>‘ಯುದ್ಧದಿಂದ ನಲುಗಿರುವ ಉಕ್ರೇನ್ಗೆ ಈಸ್ಟರ್ ಉಡುಗೊರೆಯಾಗಿ ಆ ದೇವರು ಶಾಂತಿಯನ್ನು ದಯಪಾಲಿಸಲಿ. ಶಾಶ್ವತ ಶಾಂತಿಗಾಗಿ ನಡೆಯುತ್ತಿರುವ ಎಲ್ಲ ಪ್ರಯತ್ನಗಳು ಸಫಲವಾಗಲಿ’ ಎಂದು ಪ್ರಾರ್ಥಿಸಿದ್ದಾರೆ.</p><p>ಯುದ್ಧದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಅವರು, ಯುದ್ಧ ನಿಲ್ಲಿಸುವಂತೆ ಜಾಗತಿಕ ನಾಯಕರಿಗೆ ಕರೆ ನೀಡಿದ್ದಾರೆ.</p>.<blockquote><strong>ಸುಡಾನ್ ಮತ್ತು ಮ್ಯಾನ್ಮಾರ್ ಪರವಾಗಿ ಪ್ರಾರ್ಥನೆ:</strong></blockquote>.<p>ತಮ್ಮ ಕೊನೆಯ ಭಾಷಣದಲ್ಲಿ ಮಿಲಿಟರಿ ಸಂಘರ್ಷ ಮತ್ತು ಭೂಕಂಪದಿಂದ ಬಳಲುತ್ತಿರುವ ಮ್ಯಾನ್ಮಾರ್ ಜನರಿಗಾಗಿ ಪೋಪ್ ಪ್ರಾರ್ಥಿಸಿದ್ದಾರೆ. ಸಂಘರ್ಷ ಅಂತ್ಯ ಕಂಡು ಶಾಂತಿ ನೆಲೆಸಲಿ ಎಂದು ಹಾರೈಸಿದ್ದಾರೆ. ಅಲ್ಲದೇ ಭೂಕಂಪದಿಂದ ಕುಟುಂಬ ಸದಸ್ಯರನ್ನು ಕಳೆದುಕೊಂಡವರಿಗೆ ಸಾಂತ್ವನ ಹೇಳಿರುವ ಅವರು, ಈ ಸಮಯದಲ್ಲಿ ಸಹಾಯ ಹಸ್ತ ಚಾಚಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.</p><p>ಇನ್ನೂ, ಹಿಂಸಾಚಾರ, ಸಂಘರ್ಷಕ್ಕೆ ಬಲಿಯಾಗಿರುವ ಆಫ್ರಿಕಾದ ಜನರಿಗೆ ಅದರಲ್ಲಿಯೂ ವಿಶೇಷವಾಗಿ ಕಾಂಗೋ ಗಣರಾಜ್ಯ, ಸುಡಾನ್ ಮತ್ತು ದಕ್ಷಿಣ ಸುಡಾನ್ ಜನರಿಗಾಗಿ ಪೋಪ್ ಮಿಡಿದಿದ್ದಾರೆ. ಹಿಂಸಾಚಾರ ನಿಂತು ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದ್ದಾರೆ.</p>.<blockquote><strong>ಗಾಜಾದ ಪರಿಸ್ಥಿತಿ ಬಗ್ಗೆ ಕಳವಳ:</strong></blockquote>.<p>ಗಾಜಾದ ಜನರು ಮತ್ತು ಅದರ ಕ್ರಿಶ್ಚಿಯನ್ ಸಮುದಾಯದ ಬಗ್ಗೆ ನಾನು ಚಿಂತಾಕ್ರಾಂತನಾಗಿದ್ದೇನೆ. ಭೀಕರ ಸಂಘರ್ಷವು ಸಾವು ಮತ್ತು ವಿನಾಶಕ್ಕೆ ಕಾರಣವಾಗುತ್ತಿದೆ. ಶೋಚನೀಯ ಅವಮಾನವೀಯ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ ಎಂದು ಹೇಳಿದ್ದರು. ಅಲ್ಲದೆ ಮತ್ತೊಮ್ಮೆ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>