<p>‘ಕುವೆಂಪು, ಅಡಿಗರು, ನಿಸಾರ್ ಅಹಮದ್, ವಿಲ್ಸನ್ ಕಟೀಲರ ಕವನ, ವಚನಗಳು...’ ಬೆಕ್ಕಣ್ಣ ಒಂದು ಎರಡು ಮೂರು ಎಂದು ಎಣಿಸುತ್ತ ಕವಿಗಳ ಹೆಸರುಗಳನ್ನು ಹೇಳುತ್ತಿತ್ತು.</p>.<p>‘ಏನಲೇ... ಈ ಕವಿಗಳ ಕವನ ಓದಬೇಕಂತ ಗುರುತು ಮಾಡಿಕೊಳ್ಳಾಕೆ ಹತ್ತೀಯೇನು?’ ಎಂದೆ ಅಚ್ಚರಿಯಿಂದ. Podcast ಚುರುಮುರಿ: ಬಜೆಟ್ ಕವನ</p>. Podcast ಚುರುಮುರಿ: ಬಜೆಟ್ ಕವನ.<p>‘ನಾನು ಚುರುಮುರಿ: ಬಜೆಟ್ ಕವನಓದಕ್ಕಲ್ಲ, ಸಿದ್ದು ಅಂಕಲ್ಲು ಬಜೆಟ್ ಮಂಡಿಸಬೇಕಿದ್ರೆ ಇವರ ಕವನಗಳ ಸಾಲುಗಳನ್ನು ಉಲ್ಲೇಖ ಮಾಡ್ಯಾರೆ. ಅದ್ಸರಿ, ಈ ಬಜೆಟ್ ಮಂಡಿಸಬೇಕಿದ್ರೆ ಕವನಗಳನ್ನು ಎದಕ್ಕೆ ಉಲ್ಲೇಖಿಸತಾರೆ?’ ಬೆಕ್ಕಣ್ಣ ಕೇಳಿದಾಗ ನನಗೂ ಥಟ್ಟನೆ ಉತ್ತರ ಹೊಳೆಯಲಿಲ್ಲ.</p>.<p>‘ಕವಿಗಳ ಕವನದ ಸಾಲುಗಳನ್ನು ನಡುವೆ ಸೇರಿಸಿದ್ರೆ ಬಜೆಟ್ಟಿಗೆ ಒಂದು ವಜನು ಬರತೈತಿ. ಬಜೆಟ್ಟಿನಾಗೆ ಏನು ಮಂಡನೆ ಮಾಡತಾರೆ ಅದಕ್ಕೆ ಸಮರ್ಥನೆ ಸಿಗತೈತಿ ಅಂತ ಇರಬಕು’ ಎಂದೆ.</p>.<p>‘ಅಂದರೆ ಕವಿಗಳು ಕವಿತೆಗಳಲ್ಲಿ ವ್ಯಕ್ತಪಡಿಸಿದ ಸಮಬಾಳಿನ ಆಶಯವನ್ನು ಬಜೆಟ್ಟಿನಾಗೆ ಪೂರ್ಣ ಮಾಡತೀವಿ ಅಂತೇನು?’ ಬೆಕ್ಕಣ್ಣನ ಮರುಪ್ರಶ್ನೆ.</p>.<p>‘ಹೌದು, ಆದರೆ ಬಜೆಟ್ ಮಿತಿವಳಗೆ ಅನ್ನೋ ಕರಾರಿಗೆ ಒಳಪಟ್ಟು!’ ಎಂದು ನಕ್ಕೆ.</p>.<p>‘ಹಂಗಾರೆ ನಮ್ ಸಿಎಮ್ಮು, ನಿರ್ಮಲಕ್ಕ ಇವ್ರೆಲ್ಲ ಬಜೆಟ್ ಮಂಡನೆಗೆ ಮೊದಲು ಆಳವಾಗಿ ಕವನಾಧ್ಯಯನ ಮಾಡತಾರೆ’.</p>.<p>‘ಅವರಿಗೆಲ್ಲಿ ಟೈಮಿರತೈತಿ? ಬಜೆಟ್ ಭಾಷಣ ತಯಾರು ಮಾಡೋ ಅವರ ತಂಡದವರು ಕವನಗಳನ್ನು ಓದಿ, ಆರಿಸತಾರೆ’.</p>.<p>‘ಬಜೆಟ್ ಭಾಷಣದಾಗೆ ಉಲ್ಲೇಖಿಸಿದ ಕವಿಗಳಿಗೆ ಏನರೆ ವಿಶೇಷ ಇನಾಮು ಕೊಡಬೇ ಕಲ್ಲವಾ’ ಎಂದು ಭಾರಿ ಮುಗುಮ್ಮಾಗಿ ಕೇಳಿತು.</p>.<p>‘ಹೋಗಲೇ... ನೀ ಇಲ್ಲದ ಕ್ಯಾತೆ ತೆಗೆಯಾಕೆ ಹತ್ತಿ. ನಿಜವಾದ ಕವಿಗಳು ಇನಾಮು ಬಯಸಂ ಗಿಲ್ಲ. ಹಂಗೆಲ್ಲ ಇನಾಮು ಕೊಡತಿದ್ದರೆ, ಬಜೆಟ್ ಮಂಡನೆವಳಗೆ ಉಲ್ಲೇಖಿಸಕ್ಕೆ ಅಂತನೇ ಕವನ ಬರೆಯೋ ಬಜೆಟ್ ಕವಿಗಳೂ ಇರತಿದ್ದರು’ ಎಂದೆ.</p>.<p>‘ನಾ ಮುಂದಿನ ವರ್ಷದ ಬಜೆಟ್ಟಿಗೆ ಅಂತ ಈಗಲೇ ಒಂದಿಷ್ಟು ಕವನ ಬರದೀನಿ. ಸಿದ್ದು ಅಂಕಲ್, ಮತ್ತ ನಿರ್ಮಲಕ್ಕಂಗೆ ಕಳಿಸೂದೊಂದೇ ಬಾಕಿ!’ ಎಂದು ಹ್ಹಿಹ್ಹಿಗುಟ್ಟಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಕುವೆಂಪು, ಅಡಿಗರು, ನಿಸಾರ್ ಅಹಮದ್, ವಿಲ್ಸನ್ ಕಟೀಲರ ಕವನ, ವಚನಗಳು...’ ಬೆಕ್ಕಣ್ಣ ಒಂದು ಎರಡು ಮೂರು ಎಂದು ಎಣಿಸುತ್ತ ಕವಿಗಳ ಹೆಸರುಗಳನ್ನು ಹೇಳುತ್ತಿತ್ತು.</p>.<p>‘ಏನಲೇ... ಈ ಕವಿಗಳ ಕವನ ಓದಬೇಕಂತ ಗುರುತು ಮಾಡಿಕೊಳ್ಳಾಕೆ ಹತ್ತೀಯೇನು?’ ಎಂದೆ ಅಚ್ಚರಿಯಿಂದ. Podcast ಚುರುಮುರಿ: ಬಜೆಟ್ ಕವನ</p>. Podcast ಚುರುಮುರಿ: ಬಜೆಟ್ ಕವನ.<p>‘ನಾನು ಚುರುಮುರಿ: ಬಜೆಟ್ ಕವನಓದಕ್ಕಲ್ಲ, ಸಿದ್ದು ಅಂಕಲ್ಲು ಬಜೆಟ್ ಮಂಡಿಸಬೇಕಿದ್ರೆ ಇವರ ಕವನಗಳ ಸಾಲುಗಳನ್ನು ಉಲ್ಲೇಖ ಮಾಡ್ಯಾರೆ. ಅದ್ಸರಿ, ಈ ಬಜೆಟ್ ಮಂಡಿಸಬೇಕಿದ್ರೆ ಕವನಗಳನ್ನು ಎದಕ್ಕೆ ಉಲ್ಲೇಖಿಸತಾರೆ?’ ಬೆಕ್ಕಣ್ಣ ಕೇಳಿದಾಗ ನನಗೂ ಥಟ್ಟನೆ ಉತ್ತರ ಹೊಳೆಯಲಿಲ್ಲ.</p>.<p>‘ಕವಿಗಳ ಕವನದ ಸಾಲುಗಳನ್ನು ನಡುವೆ ಸೇರಿಸಿದ್ರೆ ಬಜೆಟ್ಟಿಗೆ ಒಂದು ವಜನು ಬರತೈತಿ. ಬಜೆಟ್ಟಿನಾಗೆ ಏನು ಮಂಡನೆ ಮಾಡತಾರೆ ಅದಕ್ಕೆ ಸಮರ್ಥನೆ ಸಿಗತೈತಿ ಅಂತ ಇರಬಕು’ ಎಂದೆ.</p>.<p>‘ಅಂದರೆ ಕವಿಗಳು ಕವಿತೆಗಳಲ್ಲಿ ವ್ಯಕ್ತಪಡಿಸಿದ ಸಮಬಾಳಿನ ಆಶಯವನ್ನು ಬಜೆಟ್ಟಿನಾಗೆ ಪೂರ್ಣ ಮಾಡತೀವಿ ಅಂತೇನು?’ ಬೆಕ್ಕಣ್ಣನ ಮರುಪ್ರಶ್ನೆ.</p>.<p>‘ಹೌದು, ಆದರೆ ಬಜೆಟ್ ಮಿತಿವಳಗೆ ಅನ್ನೋ ಕರಾರಿಗೆ ಒಳಪಟ್ಟು!’ ಎಂದು ನಕ್ಕೆ.</p>.<p>‘ಹಂಗಾರೆ ನಮ್ ಸಿಎಮ್ಮು, ನಿರ್ಮಲಕ್ಕ ಇವ್ರೆಲ್ಲ ಬಜೆಟ್ ಮಂಡನೆಗೆ ಮೊದಲು ಆಳವಾಗಿ ಕವನಾಧ್ಯಯನ ಮಾಡತಾರೆ’.</p>.<p>‘ಅವರಿಗೆಲ್ಲಿ ಟೈಮಿರತೈತಿ? ಬಜೆಟ್ ಭಾಷಣ ತಯಾರು ಮಾಡೋ ಅವರ ತಂಡದವರು ಕವನಗಳನ್ನು ಓದಿ, ಆರಿಸತಾರೆ’.</p>.<p>‘ಬಜೆಟ್ ಭಾಷಣದಾಗೆ ಉಲ್ಲೇಖಿಸಿದ ಕವಿಗಳಿಗೆ ಏನರೆ ವಿಶೇಷ ಇನಾಮು ಕೊಡಬೇ ಕಲ್ಲವಾ’ ಎಂದು ಭಾರಿ ಮುಗುಮ್ಮಾಗಿ ಕೇಳಿತು.</p>.<p>‘ಹೋಗಲೇ... ನೀ ಇಲ್ಲದ ಕ್ಯಾತೆ ತೆಗೆಯಾಕೆ ಹತ್ತಿ. ನಿಜವಾದ ಕವಿಗಳು ಇನಾಮು ಬಯಸಂ ಗಿಲ್ಲ. ಹಂಗೆಲ್ಲ ಇನಾಮು ಕೊಡತಿದ್ದರೆ, ಬಜೆಟ್ ಮಂಡನೆವಳಗೆ ಉಲ್ಲೇಖಿಸಕ್ಕೆ ಅಂತನೇ ಕವನ ಬರೆಯೋ ಬಜೆಟ್ ಕವಿಗಳೂ ಇರತಿದ್ದರು’ ಎಂದೆ.</p>.<p>‘ನಾ ಮುಂದಿನ ವರ್ಷದ ಬಜೆಟ್ಟಿಗೆ ಅಂತ ಈಗಲೇ ಒಂದಿಷ್ಟು ಕವನ ಬರದೀನಿ. ಸಿದ್ದು ಅಂಕಲ್, ಮತ್ತ ನಿರ್ಮಲಕ್ಕಂಗೆ ಕಳಿಸೂದೊಂದೇ ಬಾಕಿ!’ ಎಂದು ಹ್ಹಿಹ್ಹಿಗುಟ್ಟಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>