<p><strong>ಮುಂಬೈ: </strong>ಕರ್ನಾಟಕ ತಂಡವು ಒಂಬತ್ತನೇ ಬಾರಿ ರಣಜಿ ಪ್ರಶಸ್ತಿ ಗೆಲ್ಲಲು ಇನ್ನು ಎರಡು ಗೆಲುವುಗಳಷ್ಟೇ ದೂರದಲ್ಲಿದೆ. ಕೆ.ಎಲ್.ರಾಹುಲ್ ಅವರ ಶತಕ ಮತ್ತು ರವಿಚಂದ್ರನ್ ಸ್ಮರಣ್ ಅವರ ಅಜೇಯ 83 ರನ್ಗಳ ನೆರವಿನಿಂದ ಕರ್ನಾಟಕ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಇನ್ನೂ ಒಂದು ದಿನ ಉಳಿದಿರುವಂತೆ ಮುಂಬೈ ತಂಡವನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸಿತು.</p><p>ದೇವದತ್ತ ಪಡಿಕ್ಕಲ್ ನೇತೃತ್ವದ ತಂಡ ಇದೇ 15 ರಿಂದ ಡೆಹ್ರಾಡೂನ್ನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಉತ್ತರಾಖಂಡ ತಂಡವನ್ನು ಎದುರಿಸಲಿದೆ.</p><p>ಟೆಸ್ಟ್ ತಂಡದ ಆರಂಭ ಆಟಗಾರ ಕೆ.ಎಲ್.ರಾಹುಲ್ ಅಮೋಘವಾಗಿ ಆಡಿ 130 ರನ್ (182 ಎಸೆತ, 4x14, 6x1) ಗಳಿಸಿ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದರು. ಅವರಿಗೆ ಎಡಗೈ ಬ್ಯಾಟರ್ ಸ್ಮರಣ್ ಸಮರ್ಥ ಬೆಂಬಲ ನೀಡಿದರು. 123 ಎಸೆತಗಳ ಅವರ ಅಜೇಯ ಇನಿಂಗ್ಸ್ನಲ್ಲಿ 11 ಬೌಂಡರಿಗಳಿದ್ದವು. ಇದರಲ್ಲಿ ಸೊಗಸಾದ ಪುಲ್ ಮತ್ತು ಡ್ರೈವ್ ಹೊಡೆತಗಳಿದ್ದವು. </p><p>ಕರ್ನಾಟಕ ತಂಡವು 2 ವಿಕೆಟ್ಗೆ 113 ರನ್ಗಳೊಡನೆ ಸೋಮವಾರ ನಾಲ್ಕನೇ ದಿನದಾಟ ಮುಂದುವರಿಸಿದಾಗ ಗೆಲುವಿಗೆ ಇನ್ನೂ 212 ರನ್ಗಳ ಅಗತ್ಯವಿತ್ತು. ಕರುಣ್ ನಾಯರ್ (13), ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ಈ ವೇಳೆ ರಾಹುಲ್ ಜೊತೆಗೂಡಿದ ಸ್ಮರಣ್ ಅವರು ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದರು. ಕೇವಲ 159 ಎಸೆತಗಳಲ್ಲಿ ನಾಲ್ಕನೇ ವಿಕೆಟ್ಗೆ 147 ರನ್ ಸೇರಿಸಿ ಒತ್ತಡ ನಿವಾರಿಸಿದರು. </p><p>ಶಾರ್ದೂಲ್ ಠಾಕೂರ್ ಮತ್ತು ತುಷಾರ ದೇಶಪಾಂಡೆ ಅವರ ಶಾರ್ಟ್ಬಾಲ್ ಅಸ್ತ್ರ ಫಲ ನೀಡಲಿಲ್ಲ. ರಾಹುಲ್ಗೆ ಅದೃಷ್ಟದ ಬಲವೂ ಇತ್ತು. ಠಾಕೂರ್ ಬೌಲಿಂಗ್ನಲ್ಲಿ ಬ್ಯಾಟಿಗೆ ತಗುಲಿದ ಚೆಂಡು ಮೊದಲ ಸ್ಪಿಪ್ನತ್ತ ಹಾರಿತ್ತು. ಆದರೆ ಜೈಸ್ವಾಲ್ ಕ್ಯಾಚ್ ಹಿಡಿಯುವಷ್ಟರಲ್ಲಿ ಸಿದ್ದೇಶ್ ಲಾಡ್ ಎರಡನೇ ಸ್ಲಿಪ್ನಿಂದ ಅಡ್ಡಬಂದರು. ಆಗ ಅವರ ಮೊತ್ತ 75. ನಂತರ ಅವರು ಮೊದಲ ದರ್ಜೆ ಕ್ರಿಕೆಟ್ನಲ್ಲಿ 24ನೇ ಶತಕ ಪೂರೈಸಿದರು.</p><p>ಲಂಚ್ ವೇಳೆಗೆ ಕರ್ನಾಟಕ ಗೆಲುವಿಗೆ 60 ರನ್ಗಳು ಬೇಕಿದ್ದು ಏಳು ವಿಕೆಟ್ಗಳು ಉಳಿದಿದ್ದವು. ನಂತರ ಆತಂಕದ ಕ್ಷಣಗಳನ್ನು ಕಂಡಿತು. 7.2 ಓವರುಗಳ ಅಂತರದಲ್ಲಿ 3 ವಿಕೆಟ್ಗಳು ಬಿದ್ದವು. ರಾಹುಲ್ ಮೊದಲನೆಯರಾಗಿ ನಿರ್ಗಮಿಸಿದರು. ದೇಶಪಾಂಡೆ ಅವರ ಶಾರ್ಟ್ ಎಸೆತತವನ್ನು ಆಡಲು ಹೋಗಿ ಶಾರ್ಟ್ ಥರ್ಡ್ಮ್ಯಾನ್ನಲ್ಲಿ ಯಶಸ್ವಿ ಜೈಸ್ವಾಲ್ ಹಿಡಿದ ಉತ್ತಮ ಕ್ಯಾಚಿಗೆ ನಿರ್ಗಮಿಸಬೇಕಾಯಿತು. ಶ್ರೇಯಸ್ ಗೋಪಾಲ್ ಮತ್ತು ಕೃತಿಕ್ ಕೃಷ್ಣ ಕೂಡ ಹೆಚ್ಚುಹೊತ್ತು ನಿಲ್ಲಲಿಲ್ಲ.</p><p>ಸ್ಮರಣ್ ಜೊತೆಗೂಡಿದ ವಿದ್ಯಾಧರ ಪಾಟೀಲ್ (ಔಟಾಗದೇ 31, 30ಎ, 4x3, 6x1) ಟೀ ವಿರಾಮಕ್ಕೆ ಅರ್ಧ ಗಂಟೆಯಿರುವಾಗ ಗೆಲುವು ಪೂರೈಸಿದರು.</p>.<p><strong>ಸ್ಕೋರುಗಳು:</strong> </p><p><strong>ಮೊದಲ ಇನಿಂಗ್ಸ್:</strong> ಮುಂಬೈ: 120; ಕರ್ನಾಟಕ: 173</p><p><strong>ಎರಡನೇ ಇನಿಂಗ್ಸ್:</strong> ಮುಂಬೈ: 98.3 ಓವರುಗಳಲ್ಲಿ 377; ಕರ್ನಾಟಕ: 73.4 ಓವರುಗಳಲ್ಲಿ 6 ವಿಕೆಟ್ಗೆ 325 (ಕೆ.ಎಲ್.ರಾಹುಲ್ 130, ಸ್ಮರಣ್ ರವಿಚಂದ್ರನ್ ಔಟಾಗದೇ 83, ವಿದ್ಯಾಧರ ಪಾಟೀಲ ಔಟಾಗದೇ 31; ಶಾರ್ದೂಲ್ ಠಾಕೂರ್ 55ಕ್ಕೆ2, ತುಷಾರ್ ದೇಶಪಾಂಡೆ 67ಕ್ಕೆ2, ತನುಷ್ ಕೋಟ್ಯಾನ್ 77ಕ್ಕೆ2). </p><p><strong>ಪಂದ್ಯದ ಆಟಗಾರ:</strong> ಕೆ.ಎಲ್.ರಾಹುಲ್.</p>
<p><strong>ಮುಂಬೈ: </strong>ಕರ್ನಾಟಕ ತಂಡವು ಒಂಬತ್ತನೇ ಬಾರಿ ರಣಜಿ ಪ್ರಶಸ್ತಿ ಗೆಲ್ಲಲು ಇನ್ನು ಎರಡು ಗೆಲುವುಗಳಷ್ಟೇ ದೂರದಲ್ಲಿದೆ. ಕೆ.ಎಲ್.ರಾಹುಲ್ ಅವರ ಶತಕ ಮತ್ತು ರವಿಚಂದ್ರನ್ ಸ್ಮರಣ್ ಅವರ ಅಜೇಯ 83 ರನ್ಗಳ ನೆರವಿನಿಂದ ಕರ್ನಾಟಕ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಇನ್ನೂ ಒಂದು ದಿನ ಉಳಿದಿರುವಂತೆ ಮುಂಬೈ ತಂಡವನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸಿತು.</p><p>ದೇವದತ್ತ ಪಡಿಕ್ಕಲ್ ನೇತೃತ್ವದ ತಂಡ ಇದೇ 15 ರಿಂದ ಡೆಹ್ರಾಡೂನ್ನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಉತ್ತರಾಖಂಡ ತಂಡವನ್ನು ಎದುರಿಸಲಿದೆ.</p><p>ಟೆಸ್ಟ್ ತಂಡದ ಆರಂಭ ಆಟಗಾರ ಕೆ.ಎಲ್.ರಾಹುಲ್ ಅಮೋಘವಾಗಿ ಆಡಿ 130 ರನ್ (182 ಎಸೆತ, 4x14, 6x1) ಗಳಿಸಿ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದರು. ಅವರಿಗೆ ಎಡಗೈ ಬ್ಯಾಟರ್ ಸ್ಮರಣ್ ಸಮರ್ಥ ಬೆಂಬಲ ನೀಡಿದರು. 123 ಎಸೆತಗಳ ಅವರ ಅಜೇಯ ಇನಿಂಗ್ಸ್ನಲ್ಲಿ 11 ಬೌಂಡರಿಗಳಿದ್ದವು. ಇದರಲ್ಲಿ ಸೊಗಸಾದ ಪುಲ್ ಮತ್ತು ಡ್ರೈವ್ ಹೊಡೆತಗಳಿದ್ದವು. </p><p>ಕರ್ನಾಟಕ ತಂಡವು 2 ವಿಕೆಟ್ಗೆ 113 ರನ್ಗಳೊಡನೆ ಸೋಮವಾರ ನಾಲ್ಕನೇ ದಿನದಾಟ ಮುಂದುವರಿಸಿದಾಗ ಗೆಲುವಿಗೆ ಇನ್ನೂ 212 ರನ್ಗಳ ಅಗತ್ಯವಿತ್ತು. ಕರುಣ್ ನಾಯರ್ (13), ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ಈ ವೇಳೆ ರಾಹುಲ್ ಜೊತೆಗೂಡಿದ ಸ್ಮರಣ್ ಅವರು ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದರು. ಕೇವಲ 159 ಎಸೆತಗಳಲ್ಲಿ ನಾಲ್ಕನೇ ವಿಕೆಟ್ಗೆ 147 ರನ್ ಸೇರಿಸಿ ಒತ್ತಡ ನಿವಾರಿಸಿದರು. </p><p>ಶಾರ್ದೂಲ್ ಠಾಕೂರ್ ಮತ್ತು ತುಷಾರ ದೇಶಪಾಂಡೆ ಅವರ ಶಾರ್ಟ್ಬಾಲ್ ಅಸ್ತ್ರ ಫಲ ನೀಡಲಿಲ್ಲ. ರಾಹುಲ್ಗೆ ಅದೃಷ್ಟದ ಬಲವೂ ಇತ್ತು. ಠಾಕೂರ್ ಬೌಲಿಂಗ್ನಲ್ಲಿ ಬ್ಯಾಟಿಗೆ ತಗುಲಿದ ಚೆಂಡು ಮೊದಲ ಸ್ಪಿಪ್ನತ್ತ ಹಾರಿತ್ತು. ಆದರೆ ಜೈಸ್ವಾಲ್ ಕ್ಯಾಚ್ ಹಿಡಿಯುವಷ್ಟರಲ್ಲಿ ಸಿದ್ದೇಶ್ ಲಾಡ್ ಎರಡನೇ ಸ್ಲಿಪ್ನಿಂದ ಅಡ್ಡಬಂದರು. ಆಗ ಅವರ ಮೊತ್ತ 75. ನಂತರ ಅವರು ಮೊದಲ ದರ್ಜೆ ಕ್ರಿಕೆಟ್ನಲ್ಲಿ 24ನೇ ಶತಕ ಪೂರೈಸಿದರು.</p><p>ಲಂಚ್ ವೇಳೆಗೆ ಕರ್ನಾಟಕ ಗೆಲುವಿಗೆ 60 ರನ್ಗಳು ಬೇಕಿದ್ದು ಏಳು ವಿಕೆಟ್ಗಳು ಉಳಿದಿದ್ದವು. ನಂತರ ಆತಂಕದ ಕ್ಷಣಗಳನ್ನು ಕಂಡಿತು. 7.2 ಓವರುಗಳ ಅಂತರದಲ್ಲಿ 3 ವಿಕೆಟ್ಗಳು ಬಿದ್ದವು. ರಾಹುಲ್ ಮೊದಲನೆಯರಾಗಿ ನಿರ್ಗಮಿಸಿದರು. ದೇಶಪಾಂಡೆ ಅವರ ಶಾರ್ಟ್ ಎಸೆತತವನ್ನು ಆಡಲು ಹೋಗಿ ಶಾರ್ಟ್ ಥರ್ಡ್ಮ್ಯಾನ್ನಲ್ಲಿ ಯಶಸ್ವಿ ಜೈಸ್ವಾಲ್ ಹಿಡಿದ ಉತ್ತಮ ಕ್ಯಾಚಿಗೆ ನಿರ್ಗಮಿಸಬೇಕಾಯಿತು. ಶ್ರೇಯಸ್ ಗೋಪಾಲ್ ಮತ್ತು ಕೃತಿಕ್ ಕೃಷ್ಣ ಕೂಡ ಹೆಚ್ಚುಹೊತ್ತು ನಿಲ್ಲಲಿಲ್ಲ.</p><p>ಸ್ಮರಣ್ ಜೊತೆಗೂಡಿದ ವಿದ್ಯಾಧರ ಪಾಟೀಲ್ (ಔಟಾಗದೇ 31, 30ಎ, 4x3, 6x1) ಟೀ ವಿರಾಮಕ್ಕೆ ಅರ್ಧ ಗಂಟೆಯಿರುವಾಗ ಗೆಲುವು ಪೂರೈಸಿದರು.</p>.<p><strong>ಸ್ಕೋರುಗಳು:</strong> </p><p><strong>ಮೊದಲ ಇನಿಂಗ್ಸ್:</strong> ಮುಂಬೈ: 120; ಕರ್ನಾಟಕ: 173</p><p><strong>ಎರಡನೇ ಇನಿಂಗ್ಸ್:</strong> ಮುಂಬೈ: 98.3 ಓವರುಗಳಲ್ಲಿ 377; ಕರ್ನಾಟಕ: 73.4 ಓವರುಗಳಲ್ಲಿ 6 ವಿಕೆಟ್ಗೆ 325 (ಕೆ.ಎಲ್.ರಾಹುಲ್ 130, ಸ್ಮರಣ್ ರವಿಚಂದ್ರನ್ ಔಟಾಗದೇ 83, ವಿದ್ಯಾಧರ ಪಾಟೀಲ ಔಟಾಗದೇ 31; ಶಾರ್ದೂಲ್ ಠಾಕೂರ್ 55ಕ್ಕೆ2, ತುಷಾರ್ ದೇಶಪಾಂಡೆ 67ಕ್ಕೆ2, ತನುಷ್ ಕೋಟ್ಯಾನ್ 77ಕ್ಕೆ2). </p><p><strong>ಪಂದ್ಯದ ಆಟಗಾರ:</strong> ಕೆ.ಎಲ್.ರಾಹುಲ್.</p>