‘ದಲಿತ ಬಂಧು ಯೋಜನೆಯಲ್ಲಿ ಬಿಆರ್ಎಸ್ ಶಾಸಕರು ಶೇ 30ರಷ್ಟು ಕಮಿಷನ್ ಪಡೆದಿದ್ದಾರೆಯೇ, ಇಲ್ಲವೇ? ಶಾಸಕರು ಶೇಕಡ 30ರಷ್ಟು ಕಡಿತಗೊಳಿಸುತ್ತಿದ್ದಾರೆ ಎಂದು ನೀವು (ಕೆಸಿಆರ್) ಶಾಸಕರ ಸಭೆಯಲ್ಲಿ ಹೇಳಿಲ್ಲವೇ? ಈ 30 ಪರ್ಸೆಂಟ್ ಕಮಿಷನ್ ಸರ್ಕಾರವನ್ನು ನವೆಂಬರ್ 30ರಂದು ಮನೆಗೆ ಕಳುಹಿಸಬೇಕು ಮತ್ತು ಬಿಜೆಪಿ ಸರ್ಕಾರವನ್ನು ತರಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ’ ಎಂದು ನಡ್ಡಾ ಹೇಳಿದರು. ತೆಲಂಗಾಣವು ಶೇಕಡ 8.5ರಷ್ಟು ಹಣದುಬ್ಬರದಿಂದ ತತ್ತರಿಸುತ್ತಿದೆ ಮತ್ತು ಇಂಧನ ಬೆಲೆಗಳು ದೇಶದಲ್ಲೇ ಅತಿ ಹೆಚ್ಚು ಎಂದರು.