<p><strong>ನವದೆಹಲಿ:</strong> ತನ್ನ ಸಹಜೀವನ ಸಂಗಾತಿ ಶ್ರದ್ಧಾ ವಾಲಕರ್ ಹತ್ಯೆಗೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪರೀಕ್ಷೆಗೆ ಒಳಗಾಗಿರುವ ಅಫ್ತಾಬ್ ಪೂನಾವಾಲಾ, ತಪ್ಪೊಪ್ಪಿಕೊಂಡಿದ್ದಾನೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ.</p>.<p>ವಿಧಿ ವಿಜ್ಞಾನ ಪರೀಕ್ಷೆ ವೇಳೆ ಅಫ್ತಾಬ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆದರೆ ಅವನಿಗೆ ಹತ್ಯೆ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ಆದಾಗ್ಯೂ ಈ ಪರೀಕ್ಷೆ ಅಥವಾ ಮಂಪರು ಪರೀಕ್ಷೆಯಲ್ಲಿನ ಇಂತಹ ತಪ್ಪೊಪ್ಪಿಗೆ, ವಾಡಿಕೆಯಂತೆ ಪ್ರಾಥಮಿಕ ಸಾಕ್ಷ್ಯವಾಗಿ ಪರಿಗಣನೆಯಾಗುವುದಿಲ್ಲ. ಇದನ್ನು ಸಾಕ್ಷ್ಯಕ್ಕೆ ಪೂರಕವಾಗಿ ಬಳಸಬಹುದು ಎಂದು ಮೂಲಗಳು ಹೇಳಿವೆ.</p>.<p>ಮಂಪರು ಪರೀಕ್ಷೆ ಮುಂದಿನ ಹಂತ. ಅದಾದ ಬಳಿಕ ಡಿ.1ರಂದು ಸುಳ್ಳು ಪತ್ತೆ ಪರೀಕ್ಷೆ ನಡೆಯಲಿದೆ. ದೆಹಲಿಯ ಸ್ಥಳೀಯ ನ್ಯಾಯಾಲಯವು ಡಿ.1–5ರವರೆಗೆ ಈಪರೀಕ್ಷೆ ನಡೆಸಲು ಅನುಮತಿ ನೀಡಿದೆ.</p>.<p>ಮೇ ತಿಂಗಳಿನಲ್ಲಿ ಶ್ರದ್ಧಾ ಹತ್ಯೆ ನಡೆದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ತನಿಖೆಯ ವೇಳೆ ಪತ್ತೆಯಾದ ಶ್ರದ್ಧಾ ದೇಹದ ಭಾಗಗಳನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ. ಅದರ ವರದಿ ಬಳಿಕವೇ ಅದು ಶ್ರದ್ಧಾ ದೇಹವೆಂಬುದು ಖಾತ್ರಿಯಾಗಲಿದೆ. ಹೀಗಾಗಿ ಇತರೆ ಖಚಿತ ಸಾಕ್ಷ್ಯ ಲಭಿಸಿದ ಬಳಿಕವಷ್ಟೆ ಈ ಪರೀಕ್ಷೆಗಳ ವರದಿ ಪೊಲೀಸರಿಗೆ ಸಹಾಯಕವಾಗಲಿದೆ.</p>.<p>ತನ್ನ ಪ್ರೇಯಸಿ ಶ್ರದ್ಧಾ ಹತ್ಯೆಗೈದಿದ್ದ ಆರೋಪಿ ಅಫ್ತಾಬ್, ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ವಿವಿಧೆಡೆ ಎಸೆದಿದ್ದ ಎಂದು ಪ್ರಾಥಮಿಕ ತನಿಖೆ ಬಳಿಕ ಪೊಲೀಸರು ಹೇಳಿದ್ದರು.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ತನ್ನ ಸಹಜೀವನ ಸಂಗಾತಿ ಶ್ರದ್ಧಾ ವಾಲಕರ್ ಹತ್ಯೆಗೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪರೀಕ್ಷೆಗೆ ಒಳಗಾಗಿರುವ ಅಫ್ತಾಬ್ ಪೂನಾವಾಲಾ, ತಪ್ಪೊಪ್ಪಿಕೊಂಡಿದ್ದಾನೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ.</p>.<p>ವಿಧಿ ವಿಜ್ಞಾನ ಪರೀಕ್ಷೆ ವೇಳೆ ಅಫ್ತಾಬ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆದರೆ ಅವನಿಗೆ ಹತ್ಯೆ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ಆದಾಗ್ಯೂ ಈ ಪರೀಕ್ಷೆ ಅಥವಾ ಮಂಪರು ಪರೀಕ್ಷೆಯಲ್ಲಿನ ಇಂತಹ ತಪ್ಪೊಪ್ಪಿಗೆ, ವಾಡಿಕೆಯಂತೆ ಪ್ರಾಥಮಿಕ ಸಾಕ್ಷ್ಯವಾಗಿ ಪರಿಗಣನೆಯಾಗುವುದಿಲ್ಲ. ಇದನ್ನು ಸಾಕ್ಷ್ಯಕ್ಕೆ ಪೂರಕವಾಗಿ ಬಳಸಬಹುದು ಎಂದು ಮೂಲಗಳು ಹೇಳಿವೆ.</p>.<p>ಮಂಪರು ಪರೀಕ್ಷೆ ಮುಂದಿನ ಹಂತ. ಅದಾದ ಬಳಿಕ ಡಿ.1ರಂದು ಸುಳ್ಳು ಪತ್ತೆ ಪರೀಕ್ಷೆ ನಡೆಯಲಿದೆ. ದೆಹಲಿಯ ಸ್ಥಳೀಯ ನ್ಯಾಯಾಲಯವು ಡಿ.1–5ರವರೆಗೆ ಈಪರೀಕ್ಷೆ ನಡೆಸಲು ಅನುಮತಿ ನೀಡಿದೆ.</p>.<p>ಮೇ ತಿಂಗಳಿನಲ್ಲಿ ಶ್ರದ್ಧಾ ಹತ್ಯೆ ನಡೆದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ತನಿಖೆಯ ವೇಳೆ ಪತ್ತೆಯಾದ ಶ್ರದ್ಧಾ ದೇಹದ ಭಾಗಗಳನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ. ಅದರ ವರದಿ ಬಳಿಕವೇ ಅದು ಶ್ರದ್ಧಾ ದೇಹವೆಂಬುದು ಖಾತ್ರಿಯಾಗಲಿದೆ. ಹೀಗಾಗಿ ಇತರೆ ಖಚಿತ ಸಾಕ್ಷ್ಯ ಲಭಿಸಿದ ಬಳಿಕವಷ್ಟೆ ಈ ಪರೀಕ್ಷೆಗಳ ವರದಿ ಪೊಲೀಸರಿಗೆ ಸಹಾಯಕವಾಗಲಿದೆ.</p>.<p>ತನ್ನ ಪ್ರೇಯಸಿ ಶ್ರದ್ಧಾ ಹತ್ಯೆಗೈದಿದ್ದ ಆರೋಪಿ ಅಫ್ತಾಬ್, ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ವಿವಿಧೆಡೆ ಎಸೆದಿದ್ದ ಎಂದು ಪ್ರಾಥಮಿಕ ತನಿಖೆ ಬಳಿಕ ಪೊಲೀಸರು ಹೇಳಿದ್ದರು.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>