ನವದೆಹಲಿ: ದೆಹಲಿ ಬಜೆಟ್ಗೆ ಸಂಬಂಧಿಸಿದ ಕೇಂದ್ರ ಸರ್ಕಾರ ಮತ್ತು ಆಮ್ ಆದ್ಮಿ ಪಕ್ಷದ ನಡುವಿನ ತಿಕ್ಕಾಟ ಅಂತ್ಯಗೊಂಡಿದ್ದು, ಇಂದು ಬಜೆಟ್ ಮಂಡನೆಯಾಗಲಿದೆ.
ಬಜೆಟ್ನಲ್ಲಿನ ಮೂಲಸೌಕರ್ಯ, ಜಾಹೀರಾತು ಮತ್ತು ಕೆಲವು ಹಂಚಿಕೆಗಳಿಗೆ ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಗೃಹ ಸಚಿವಾಲಯ ದೆಹಲಿ ಬಜೆಟ್ಗೆ ಅನುಮೋದನೆ ನೀಡಿದೆ.
ಆಮ್ ಆದ್ಮಿ ಪಕ್ಷದ ಸರ್ಕಾರದ ಸ್ಪಷ್ಟೀಕರಣದ ನಂತರ ಮಂಗಳವಾರ ಸಂಜೆ ದೆಹಲಿ ಬಜೆಟ್ ಅನ್ನು ಕೇಂದ್ರವು ಅಂಗೀಕರಿಸಿ, ವಿಧಾನಸಭೆಯಲ್ಲಿ ಅದರ ಮಂಡನೆಗೆ ದಾರಿ ಮಾಡಿಕೊಟ್ಟಿತು. ಮಂಗಳವಾರ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಲು ನಿರ್ಧರಿಸಲಾಗಿತ್ತು. ಆದರೆ ಕೇಂದ್ರವು ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಲೆಫ್ಟಿನೆಂಟ್ ಗವರ್ನರ್ ಅವರ ಕಳವಳಗಳನ್ನು ಪರಿಹರಿಸಿದ ನಂತರ ಬಜೆಟ್ ಅನ್ನು ಮರುಸಲ್ಲಿಸುವಂತೆ ಕೇಳಿಕೊಂಡಿತ್ತು.
ಹಣಕಾಸು ಸಚಿವ ಕೈಲಾಶ್ ಗೆಹ್ಲೋತ್ ಅವರು ಇಂದು ದೆಹಲಿ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಲಿದ್ದು, ಗಾತ್ರ ₹ 78,800 ಕೋಟಿ. ₹ 22,000 ಕೋಟಿ ಮೂಲಸೌಕರ್ಯ ಮತ್ತು ₹ 550 ಕೋಟಿ ಜಾಹೀರಾತುಗಳಿಗೆ ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.