ಶ್ರೀನಗರ: ಇಲ್ಲಿನ ಪಾಲ್ಪೋರಾ ಪ್ರದೇಶದಲ್ಲಿ ಅನ್ಸರ್ ಘಜ್ವತ್–ಉಲ್–ಹಿಂದ್ ಉಗ್ರ ಸಂಘಟನೆಯ ಭಯೋತ್ಪಾಕನೊಬ್ಬನನ್ನು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳೊಂದಿಗೆ ಗುರುವಾರ ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
‘ಖಚಿತ ಮಾಹಿತಿಗಳ ಆಧಾರದ ಮೇಲೆ ಪೊಲೀಸರು ಹಾಗೂ ಸೇನಾ ಪಡೆಗಳು ಪಾಲ್ಪೋರಾದಲ್ಲಿ ವಿಶೇಷ ಚೆಕ್ಪೋಸ್ಟ್ಗಳನ್ನು ಹಾಕಿದ್ದರು. ಈ ವೇಳೆ ಪೊಲೀಸರು ಹಾಗೂ ಸೇನಾ ಪಡೆಯನ್ನು ನೋಡಿ ತಪ್ಪಿಸಿಕೊಳ್ಳಲು ಭಯೋತ್ಪಾದಕ ಪ್ರಯತ್ನಿಸಿದ. ಆಗ ಅವನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದರು.
‘ಬಂಧನದ ಬಳಿಕ ಉಗ್ರನಹೆಸರು ಜುನೈದ್ ಅಹ್ಮದ್ ಪಾರೆ ಎಂದು ತಿಳಿದುಬಂದಿದೆ. ಈತನಿಂದ ಒಂದು ಪಿಸ್ತೂಲು, ಒಂದು ಮ್ಯಾಗಜಿನ್ ಹಾಗೂ 5 ಸುತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದೂ ಹೇಳಿದರು.