1984ರಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಲು ‘ಆಪರೇಷನ್ ಮೇಘದೂತ್’ನ ಭಾಗವಾಗಿ ಚಂದ್ರಶೇಖರ ಸೇರಿದಂತೆ 20 ಮಂದಿಯಿದ್ದ ಯೋಧರ ತಂಡವನ್ನು ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ಗೆ ಕಳುಹಿಸಲಾಗಿತ್ತು. ಈ ತಂಡವು ಗಸ್ತು ತಿರುಗುತ್ತಿದ್ದಾಗ ಹಿಮಪಾತಕ್ಕೆ ಸಿಲುಕಿತ್ತು. ತಂಡದಲ್ಲಿದ್ದ 15 ಮಂದಿಯ ಮೃತದೇಹಗಳು ಪತ್ತೆಯಾಗಿದ್ದವು. ಆದರೆ ಚಂದ್ರಶೇಖರ ಸೇರಿದಂತೆ ಐವರ ಮೃತದೇಹಗಳು ಪತ್ತೆಯಾಗಿರಲಿಲ್ಲ.