<p><strong>ಮುಂಬೈ:</strong> ಮುಂಬೈ ಕಡಲ ಕಿನಾರೆಯ ಸಮೀಪ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಸೇವನೆ ಪ್ರಕರಣಕ್ಕೆ ಸಂಬಂಧಿಸಿ ದಿನದಿಂದ ದಿನಕ್ಕೆ ತಿರುವುಗಳನ್ನು ಪಡೆಯುತ್ತಿದ್ದು, ಇದೀಗ ಪ್ರಮುಖ ಸಾಕ್ಷಿ ಕಿರಣ್ ಗೋಸವಿ ಪೊಲೀಸರಿಗೆ ಶರಣಾಗಲು ಮುಂದಾಗಿದ್ದಾರೆ.</p>.<p>ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ನನ್ನು ಮಾದಕ ಪದಾರ್ಥ ನಿಯಂತ್ರಣ ಬ್ಯೂರೊ (ಎನ್ಸಿಬಿ) ಬಂಧಿಸಿದ ಬಳಿಕ ಖಾಸಗಿ ವಕೀಲ ಕಿರಣ್ ಗೋಸವಿ ಅವರು ಆರ್ಯನ್ ಜೊತೆ ತೆಗೆದುಕೊಂಡಿದ್ದ ಸೆಲ್ಫಿಮತ್ತು ವಿಡಿಯೋಗಳಿಂದ ಸುದ್ದಿಯ ಮುನ್ನೆಲೆಗೆ ಬಂದಿದ್ದರು.</p>.<p>ಡ್ರಗ್ಸ್ ಸೇವನೆ ಪ್ರಕರಣ ನಡೆದಾಗ ಸ್ಥಳದಲ್ಲಿ ಕಿರಣ್ ಗೋಸವಿ ಇರುವುದು ಸೆಲ್ಫಿ ಮತ್ತು ವಿಡಿಯೋದಿಂದ ಬಯಲಾಗಿತ್ತು. ಹೀಗಾಗಿ ಎನ್ಸಿಬಿ ಗೋಸವಿ ಅವರನ್ನು ಪ್ರಮುಖ ಸಾಕ್ಷಿಯಾಗಿ ಗುರುತಿಸಿ, ಲುಕ್ ಔಟ್ ನೋಟಿಸ್ ಜಾರಿ ಮಾಡಿತ್ತು.</p>.<p><a href="https://www.prajavani.net/india-news/drugs-case-court-refuses-to-pass-blanket-order-over-wankhede-plea-on-witness-extortion-affidavit-878621.html" itemprop="url">ದಿನ ದಿನಕ್ಕೂ ತಿರುವು ಪಡೆಯುತ್ತಿರುವ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ! </a></p>.<p>ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಕಿರಣ್ ಗೋಸವಿ ಎನ್ಸಿಬಿಯ 'ಸ್ವತಂತ್ರ ಸಾಕ್ಷಿ'. ಮಹಾರಾಷ್ಟ್ರದಲ್ಲಿ ತನಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿರುವ ಗೋಸವಿ ಉತ್ತರ ಪ್ರದೇಶ ಪೊಲೀಸರಿಗೆ ಶರಣಾಗಲು ಬಯಸಿದ್ದಾರೆ ಎನ್ನಲಾಗಿದೆ.</p>.<p>'ಲಖನೌ ಪೊಲೀಸ್ ಠಾಣೆಯು ಪ್ರಕರಣದ ವ್ಯಾಪ್ತಿಗೆ ಬಾರದೆ ಇರುವುದರಿಂದ ಕಿರಣ್ ಗೋಸವಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಅವರು ಇಲ್ಲಿ ಶರಣಾಗಲು ಸಾಧ್ಯವಿಲ್ಲ' ಎಂದು ಲಖನೌ ಪೊಲೀಸ್ ಕಮಿಷನರ್ ಡಿಕೆ ಠಾಕೂರ್ ತಿಳಿಸಿದ್ದಾರೆ.</p>.<p>ಗೋಸವಿ ಅವರ ಧ್ವನಿ ಎನ್ನಲಾದ ಧ್ವನಿಸುರಳಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ಇದರಲ್ಲಿ ಕರೆ ಮಾಡಿದ ವ್ಯಕ್ತಿಯು ಮಢಿಯಾಂ ಪೊಲೀಸ್ ಚೌಕಿಯೇ ಎಂದು ಕೇಳಿ ಖಾತರಿ ಪಡಿಸಿಕೊಳ್ಳುತ್ತಾರೆ. ಬಳಿಕ 'ನಾನಿಲ್ಲಿಗೆ ಬರಬೇಕು. ನಾನು ಕಿರಣ್ ಗೋಸವಿ. ನಾನು ಶರಣಾಗಬೇಕು' ಎಂದು ಹೇಳಿದ್ದಾರೆ.</p>.<p><a href="https://www.prajavani.net/india-news/drugs-case-court-refuses-to-pass-blanket-order-over-wankhede-plea-on-witness-extortion-affidavit-878517.html" itemprop="url">ಡ್ರಗ್ಸ್ ಕೇಸ್: ವಿಶೇಷ ಆದೇಶ ಹೊರಡಿಸಲು ಸಾಧ್ಯವಿಲ್ಲ- ವಾಂಖೆಡೆಗೆ ನ್ಯಾಯಾಲಯ </a></p>.<p>ಪೊಲೀಸರು ಕಾರಣ ಕೇಳಿದಾಗ, 'ಸದ್ಯದ ಪರಿಸ್ಥಿತಿಯಲ್ಲಿ ಇದುವೇ ಸಮೀಪದ ಪೊಲೀಸ್ ಠಾಣೆಯಾಗಿದೆ' ಎಂದು ಗೋಸವಿ ಹೇಳಿದ್ದಾರೆ. ಗೋಸವಿ ಅವರು ಶರಣಾಗಲು ಮುಂದಾಗಿರುವುದನ್ನು ಖಾತರಿ ಪಡಿಸಿಕೊಂಡ ಬಳಿಕ ಪೊಲೀಸರು 'ಇಲ್ಲ, ನೀವಿಲ್ಲಿ ಶರಣಾಗಲು ಸಾಧ್ಯವಿಲ್ಲ. ಬೇರೆ ಕಡೆ ಪ್ರಯತ್ನಿಸಿ' ಎಂದಿರುವುದು ಧ್ವನಿಸುರಳಿಯಲ್ಲಿದೆ.</p>.<p>ಮಢಿಯಾಂ ಪೊಲೀಸ್ ಠಾಣೆಯಿಂದ ಆಡಿಯೋ ತುಣುಕು ಬಯಲಾಗಿರುವ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದು, ಭದ್ರತೆ ಬಗ್ಗೆ ಪ್ರಶ್ನಿಸಲಾಗುತ್ತಿದೆ. ಠಾಣೆಗೆ ಸಾಕಷ್ಟು ಅಧಿಕಾರಿಗಳು ಆಗಮಿಸಿದ್ದಾರೆ.</p>.<p>ಪ್ರಕರಣದ ಮತ್ತೊಬ್ಬ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ಅವರು ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಲಂಚದ ಆರೋಪ ಮಾಡಿದ್ದಾರೆ. ಪ್ರಕರಣದಿಂದ ಆರ್ಯನ್ ಖಾನ್ನನ್ನು ಕೈಬಿಡಲು ವಾಂಖೆಡೆ ಮತ್ತು ಇತರರು 25 ಕೋಟಿಗೆ ಬೇಡಿಕೆ ಇರಿಸಿದ್ದರು ಎಂದು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಮುಂಬೈ ಕಡಲ ಕಿನಾರೆಯ ಸಮೀಪ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಸೇವನೆ ಪ್ರಕರಣಕ್ಕೆ ಸಂಬಂಧಿಸಿ ದಿನದಿಂದ ದಿನಕ್ಕೆ ತಿರುವುಗಳನ್ನು ಪಡೆಯುತ್ತಿದ್ದು, ಇದೀಗ ಪ್ರಮುಖ ಸಾಕ್ಷಿ ಕಿರಣ್ ಗೋಸವಿ ಪೊಲೀಸರಿಗೆ ಶರಣಾಗಲು ಮುಂದಾಗಿದ್ದಾರೆ.</p>.<p>ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ನನ್ನು ಮಾದಕ ಪದಾರ್ಥ ನಿಯಂತ್ರಣ ಬ್ಯೂರೊ (ಎನ್ಸಿಬಿ) ಬಂಧಿಸಿದ ಬಳಿಕ ಖಾಸಗಿ ವಕೀಲ ಕಿರಣ್ ಗೋಸವಿ ಅವರು ಆರ್ಯನ್ ಜೊತೆ ತೆಗೆದುಕೊಂಡಿದ್ದ ಸೆಲ್ಫಿಮತ್ತು ವಿಡಿಯೋಗಳಿಂದ ಸುದ್ದಿಯ ಮುನ್ನೆಲೆಗೆ ಬಂದಿದ್ದರು.</p>.<p>ಡ್ರಗ್ಸ್ ಸೇವನೆ ಪ್ರಕರಣ ನಡೆದಾಗ ಸ್ಥಳದಲ್ಲಿ ಕಿರಣ್ ಗೋಸವಿ ಇರುವುದು ಸೆಲ್ಫಿ ಮತ್ತು ವಿಡಿಯೋದಿಂದ ಬಯಲಾಗಿತ್ತು. ಹೀಗಾಗಿ ಎನ್ಸಿಬಿ ಗೋಸವಿ ಅವರನ್ನು ಪ್ರಮುಖ ಸಾಕ್ಷಿಯಾಗಿ ಗುರುತಿಸಿ, ಲುಕ್ ಔಟ್ ನೋಟಿಸ್ ಜಾರಿ ಮಾಡಿತ್ತು.</p>.<p><a href="https://www.prajavani.net/india-news/drugs-case-court-refuses-to-pass-blanket-order-over-wankhede-plea-on-witness-extortion-affidavit-878621.html" itemprop="url">ದಿನ ದಿನಕ್ಕೂ ತಿರುವು ಪಡೆಯುತ್ತಿರುವ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ! </a></p>.<p>ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಕಿರಣ್ ಗೋಸವಿ ಎನ್ಸಿಬಿಯ 'ಸ್ವತಂತ್ರ ಸಾಕ್ಷಿ'. ಮಹಾರಾಷ್ಟ್ರದಲ್ಲಿ ತನಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿರುವ ಗೋಸವಿ ಉತ್ತರ ಪ್ರದೇಶ ಪೊಲೀಸರಿಗೆ ಶರಣಾಗಲು ಬಯಸಿದ್ದಾರೆ ಎನ್ನಲಾಗಿದೆ.</p>.<p>'ಲಖನೌ ಪೊಲೀಸ್ ಠಾಣೆಯು ಪ್ರಕರಣದ ವ್ಯಾಪ್ತಿಗೆ ಬಾರದೆ ಇರುವುದರಿಂದ ಕಿರಣ್ ಗೋಸವಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಅವರು ಇಲ್ಲಿ ಶರಣಾಗಲು ಸಾಧ್ಯವಿಲ್ಲ' ಎಂದು ಲಖನೌ ಪೊಲೀಸ್ ಕಮಿಷನರ್ ಡಿಕೆ ಠಾಕೂರ್ ತಿಳಿಸಿದ್ದಾರೆ.</p>.<p>ಗೋಸವಿ ಅವರ ಧ್ವನಿ ಎನ್ನಲಾದ ಧ್ವನಿಸುರಳಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ಇದರಲ್ಲಿ ಕರೆ ಮಾಡಿದ ವ್ಯಕ್ತಿಯು ಮಢಿಯಾಂ ಪೊಲೀಸ್ ಚೌಕಿಯೇ ಎಂದು ಕೇಳಿ ಖಾತರಿ ಪಡಿಸಿಕೊಳ್ಳುತ್ತಾರೆ. ಬಳಿಕ 'ನಾನಿಲ್ಲಿಗೆ ಬರಬೇಕು. ನಾನು ಕಿರಣ್ ಗೋಸವಿ. ನಾನು ಶರಣಾಗಬೇಕು' ಎಂದು ಹೇಳಿದ್ದಾರೆ.</p>.<p><a href="https://www.prajavani.net/india-news/drugs-case-court-refuses-to-pass-blanket-order-over-wankhede-plea-on-witness-extortion-affidavit-878517.html" itemprop="url">ಡ್ರಗ್ಸ್ ಕೇಸ್: ವಿಶೇಷ ಆದೇಶ ಹೊರಡಿಸಲು ಸಾಧ್ಯವಿಲ್ಲ- ವಾಂಖೆಡೆಗೆ ನ್ಯಾಯಾಲಯ </a></p>.<p>ಪೊಲೀಸರು ಕಾರಣ ಕೇಳಿದಾಗ, 'ಸದ್ಯದ ಪರಿಸ್ಥಿತಿಯಲ್ಲಿ ಇದುವೇ ಸಮೀಪದ ಪೊಲೀಸ್ ಠಾಣೆಯಾಗಿದೆ' ಎಂದು ಗೋಸವಿ ಹೇಳಿದ್ದಾರೆ. ಗೋಸವಿ ಅವರು ಶರಣಾಗಲು ಮುಂದಾಗಿರುವುದನ್ನು ಖಾತರಿ ಪಡಿಸಿಕೊಂಡ ಬಳಿಕ ಪೊಲೀಸರು 'ಇಲ್ಲ, ನೀವಿಲ್ಲಿ ಶರಣಾಗಲು ಸಾಧ್ಯವಿಲ್ಲ. ಬೇರೆ ಕಡೆ ಪ್ರಯತ್ನಿಸಿ' ಎಂದಿರುವುದು ಧ್ವನಿಸುರಳಿಯಲ್ಲಿದೆ.</p>.<p>ಮಢಿಯಾಂ ಪೊಲೀಸ್ ಠಾಣೆಯಿಂದ ಆಡಿಯೋ ತುಣುಕು ಬಯಲಾಗಿರುವ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದು, ಭದ್ರತೆ ಬಗ್ಗೆ ಪ್ರಶ್ನಿಸಲಾಗುತ್ತಿದೆ. ಠಾಣೆಗೆ ಸಾಕಷ್ಟು ಅಧಿಕಾರಿಗಳು ಆಗಮಿಸಿದ್ದಾರೆ.</p>.<p>ಪ್ರಕರಣದ ಮತ್ತೊಬ್ಬ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ಅವರು ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಲಂಚದ ಆರೋಪ ಮಾಡಿದ್ದಾರೆ. ಪ್ರಕರಣದಿಂದ ಆರ್ಯನ್ ಖಾನ್ನನ್ನು ಕೈಬಿಡಲು ವಾಂಖೆಡೆ ಮತ್ತು ಇತರರು 25 ಕೋಟಿಗೆ ಬೇಡಿಕೆ ಇರಿಸಿದ್ದರು ಎಂದು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>