ಶಿವಸಾಗರ (ಅಸ್ಸಾಂ): ‘ಅಸ್ಸಾಂ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಸಿಎಎ ಜಾರಿಗೊಳಿಸುವುದಿಲ್ಲ. ಅಸ್ಸಾಂ ಒಪ್ಪಂದದ ಅನುಸಾರ ಜನರ ಹಕ್ಕುಗಳನ್ನು ರಕ್ಷಿಸಲಾಗುವುದು’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಬಿಜೆಪಿ ಮತ್ತು ಆರ್ಎಸ್ಎಸ್ ಅಸ್ಸಾಂ ರಾಜ್ಯವನ್ನು ವಿಭಜನಗೊಳಿಸುತ್ತಿವೆ ಎಂದೂ ಭಾನುವಾರ ಆರೋಪಿಸಿದರು. ಮಾರ್ಚ್–ಏಪ್ರಿಲ್ ತಿಂಗಳಲ್ಲಿ ಅಸ್ಸಾಂ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
ಚುನಾವಣೆಗೆ ಪೂರ್ವಭಾವಿಯಾಗಿ ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯಕ್ಕೆ ದೆಹಲಿ ಅಥವಾ ನಾಗಪುರದ ನಿರ್ದೇಶನ ಪಾಲಿಸದ, ತನ್ನದೇ ಜನರ ಧ್ವನಿಯನ್ನು ಆಲಿಸುವ ಮುಖ್ಯಮಂತ್ರಿಯ ಅಗತ್ಯವಿದೆ’ ಎಂದರು.
#WATCH | ".....Hum ne yeh gamchha pehna hai.. ispe likha hai CAA.. ispe humne cross laga rakha hai, matlab chahe kuchh bhi ho jaye.. CAA nahi hoga.. 'hum do, hamare do' achhi tarah sun lo, (CAA) nahi hoga, kabhi nahi hoga," says Congress leader Rahul Gandhi in Sivasagar, Assam pic.twitter.com/ZYk7xAUdYx
ಅಸ್ಸಾಂ ಒಪ್ಪಂದ ರಾಜ್ಯವನ್ನು ರಕ್ಷಿಸಲಿದ್ದು, ಶಾಂತಿ ನೆಲೆಸಲು ಕಾರಣವಾಗಿದೆ. ನಾನು ಮತ್ತು ನನ್ನ ಪಕ್ಷದ ಕಾರ್ಯಕರ್ತರು ಇದನ್ನು ಉಳಿಸಲು ಕಾರ್ಯನಿರ್ವಹಿಸುತ್ತೇವೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಿದರು.
ಅಸ್ಸಾಂ ಒಪ್ಪಂದವನ್ನು ಆಧಾರವಾಗಿಸಿ ರಾಜ್ಯವನ್ನು ವಿಭಜಿಸಲು ಆರ್ಎಸ್ಎಸ್ ಯತ್ನಿಸುತ್ತಿವೆ. ಅತಿಕ್ರಮವಾಗಿ ನುಸುಳುವಿಕೆ ರಾಜ್ಯದ ಸಮಸ್ಯೆಯಾಗಿದೆ. ರಾಜ್ಯದ ಜನರೇ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಬದ್ಧರಾಗಿದ್ದಾರೆ ಎಂದರು.