‘ಇದು ಕೇವಲ ಟೆಲಿಕಾಂ ಸೇವೆ ಪೂರೈಕೆದಾರರು ಮಾತ್ರವಲ್ಲದೇ, ಸಾರ್ವಜನಿಕರಲ್ಲೂ ಭೀತಿಯನ್ನು ಸೃಷ್ಟಿ ಮಾಡಬಹುದು. ಈ ಕ್ರಮವು ಇಂಟರ್ನೆಟ್ ಸೇವೆಯ ಮೇಲೆ ಪರಿಣಾಮ ಬೀರಲಿದೆ. ಪ್ರಮುಖವಾಗಿ ಐಟಿ ಸಂಸ್ಥೆಗಳು ತೊಂದರೆಗೊಳಗಾಗಲಿವೆ. ಕೋವಿಡ್ ಪರಿಸ್ಥಿತಿಯಲ್ಲಿ ಬಹುತೇಕ ಸಂಸ್ಥೆಗಳ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ನೆಲದಡಿಯಿಂದ ಫೈಬರ್ ಸೇವೆಯನ್ನು ಕಲ್ಪಿಸಲು ಸಂಸ್ಥೆಗಳು ಶ್ರಮಿಸುತ್ತಿವೆ. ಹಾಗಾಗಿ ಕೇಬಲ್ ತೆರವಿಗೆ ಸಂಬಂಧಿಸಿದಂತೆ ಯಾವುದೇ ಏಕಪಕ್ಷೀಯ ಕ್ರಮ ಕೈಗೊಳ್ಳಬಾರದು’ ಎಂದು ಸಿಒಎಐನ ವ್ಯವಸ್ಥಾಪಕ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಎಸ್.ಪಿ ಕೊಚ್ಚಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.