ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ ಜೋಡೊ ಯಾತ್ರೆಯಲ್ಲಿ ‘ರಾ‘ ಮಾಜಿ ಮುಖ್ಯಸ್ಥ ಅಮರಜೀತ್‌ ಭಾಗಿ

ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಕೂಡ ಭಾಗಿ
Last Updated 3 ಜನವರಿ 2023, 12:30 IST
ಅಕ್ಷರ ಗಾತ್ರ

ಲಖನೌ: ಕ್ರಿಸ್ಮಸ್ ಹಾಗೂ ಹೊಸ ವರ್ಷದ ವಿರಾಮದ ಬಳಿಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆ ಮಂಗಳವಾರ ಪುನಾರಂಭಗೊಂಡಿತು.

ದೆಹಲಿಯ ಯಮುನಾ ಬಜಾರ್‌ನಿಂದ ಆರಂಭಗೊಂಡ ಯಾತ್ರೆ, ಮಧ್ಯಾಹ್ನದ ಹೊತ್ತಿಗೆ ಲೋನಿ ಮೂಲಕ ಉತ್ತರ ಪ್ರದೇಶಕ್ಕೆ ತಲುಪಿತು. ಈ ವೇಳೆ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (RAW) ಮಾಜಿ ಮುಖ್ಯಸ್ಥ ಅಮರಜೀತ್‌ ಸಿಂಗ್‌ ದೌಲತ್ ಹಾಗೂ ಶಿವಸೇನಾದ (ಉದ್ಧವ್ ಠಾಕ್ರೆ ಬಣ)ನಾಯಕಿ ಪ್ರಿಯಾಂಕಾ ಚತುರ್ವೇದಿ ಜತೆಗೂಡಿದರು.

ಇದೇ ವೇಳೆ ಸಮಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಹಾಗೂ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಅವರು, ಯಾತ್ರೆಗೆ ಶುಭ ಹಾರೈಸಿದರು.

ಉತ್ತರ ಪ್ರದೇಶದಲ್ಲಿ ಮೂರು ದಿನ ಸಾಗಲಿರುವ ಯಾತ್ರೆಯು ಜನವರಿ 6 ರಂದು ಮರಳಿ ಹರಿಯಾಣ ಪ್ರವೇಶಿಸಲಿದೆ.

ಯಾತ್ರೆಯು ಪಂಜಾಬ್‌ನಲ್ಲಿ ಜನವರಿ 11 ರಿಂದ 20 ರವರೆಗೆ ಸಾಗಲಿದೆ. ಹಿಮಾಚಲ ಪ್ರದೇಶದಲ್ಲಿ ಒಂದು ದಿನ ನಡೆಯಲಿದೆ.

ನಂತರ ಜನವರಿ 20ರ ಸಂಜೆ ಯಾತ್ರೆ ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT