ವಕೀಲರಾದ ಕಾಮಿನಿ ಜೈಸ್ವಾಲ್ ಅವರ ಮೂಲಕ ಸಲ್ಲಿಸಲಾದ ಎರಡನೇ ಪರಿಶೀಲನಾ ಅರ್ಜಿಯಲ್ಲಿ ಭೂಷಣ್ ಅವರು, ಈ ವಿಷಯದ ಬಗ್ಗೆ ಮುಕ್ತ ನ್ಯಾಯಾಲಯದಲ್ಲಿ ಮೌಖಿಕ ವಿಚಾರಣೆ ನಡೆಸಬೇಕೆಂದು ಕೋರಿದ್ದಾರೆ. ಈಗ ನೀಡಿರುವ ಆಕ್ಷೇಪಾರ್ಹ ತೀರ್ಪುನ್ನು ಉಲ್ಲೇಖಿಸಿರುವ ಅವರು, ಹೊಸದಾಗಿ ವಿಚಾರಣೆ ನಡೆಸುವಂತೆ ಮರುಪರಿಶೀಲನಾ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಅರ್ಜಿಯಲ್ಲಿ ಎತ್ತಿರುವ ಪ್ರಶ್ನೆಗಳ ವಿಚಾರಣೆ ನಡೆಸಲು ದೊಡ್ಡ ಪೀಠಕ್ಕೆ ವರ್ಗಾಯಿಸಬೇಕು ಎಂದು ಕೋರಿದ್ದಾರೆ.