ಈ ಹಿಂದೆ ಮಹಾಮೈತ್ರಿ ಕೂಟವನ್ನು ಬೆಂಬಲಿಸಿದ್ದ ಹಿಂದೂಸ್ತಾನಿ ಆವಾಮಿ ಮೋರ್ಚಾ (ಜಾತ್ಯತೀತ) ಅಧ್ಯಕ್ಷ, ಬಿಹಾರ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಅವರು ಮತ್ತೆ ಎನ್ಡಿಎ ಮೈತ್ರಿ ಸೇರಿದ್ದಾರೆ. ಕೇಂದ್ರದ ಮಾಜಿ ಸಚಿವ ಉಪೇಂದ್ರ ಕುಶ್ವಾಹ ನೇತೃತ್ವದ ರಾಷ್ಟ್ರೀಯ ಲೋಕ್ ಸಮತಾ ಪಾರ್ಟಿ (ಆರ್ಎಲ್ಎಸ್ಪಿ) ಕೂಡ ಮಹಾಮೈತ್ರಿಯಿಂದ ಹಿಂದೆ ಸರಿದಿದ್ದು ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಂಡ ಸ್ಪರ್ಧೆ ಮಾಡಲಿದೆ.