ನವದೆಹಲಿ: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಭವನದಲ್ಲಿ ಸೋಮವಾರ ಭೇಟಿಯಾದ ಭಾರತದಲ್ಲಿರುವ ಯುಎಇ ರಾಯಭಾರಿ ಡಾ.ಅಬ್ದುಲ್ ನಾಸರ್ ಅಲ್ಶಾಲಿ ಸಮಾಲೋಚನೆ ನಡೆಸಿದರು.
ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಜಾಯೆದ್ ಅಲ್ ನಹ್ಯಾನ್ ಅವರ ಶುಭಾಶಯಗಳನ್ನು ರಾಷ್ಟ್ರಪತಿ ಅವರಿಗೆ ಹೇಳಿದರು. ‘ಯುಎಇ ದೇಶ ಇನ್ನಷ್ಟು ಪ್ರಗತಿ ಸಾಧಿಸಲಿ. ದ್ವಿಪಕ್ಷೀಯ ಸಂಬಂಧ ಸದಾ ಹೀಗೆಯೇ ಇರಲಿ. ಉಭಯ ರಾಷ್ಟ್ರಗಳು ಪರಸ್ಪರ ಸಹಕಾರದಿಂದ ಮುಂದುವರಿಯಬೇಕು’ ಎಂದು ರಾಷ್ಟ್ರಪತಿ ಅವರು ಆಶಿಸಿದರು.