<p><strong>ಕೋಲ್ಕತ್ತ:</strong> ಪಶ್ಚಿಮ ಬಂಗಾಳದ ಬಿರ್ಭೂಮ್ ಹತ್ಯಾಕಾಂಡವು ಸ್ಥಳೀಯ ಟಿಎಂಸಿ ನಾಯಕ ಭದು ಶೇಖ್ ಎಂಬುವವರ ಹತ್ಯೆಯ ‘ನೇರ ಪರಿಣಾಮ’ವಾಗಿದ್ದು, ‘ಯೋಜಿತ ಮತ್ತು ಸಂಘಟಿತ’ವಾಗಿ ನಡೆದಿತ್ತು ಎಂದು ಕೇಂದ್ರೀಯ ತನಿಖಾ ದಳವು (ಸಿಬಿಐ) ತನ್ನ ಪ್ರಾಥಮಿಕ ವರದಿಯಲ್ಲಿ ಹೇಳಿದೆ.</p>.<p>ಬೊಗ್ತುಯಿ ಗ್ರಾಮದ ಮನೆಯೊಂದರಲ್ಲಿ ಏಳು ಜನರ ಮೃತದೇಹಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸಿಕ್ಕಿದ್ದವು. ಅವರನ್ನು ಹಾಗೆ ಕೊಲ್ಲುವುದಕ್ಕೂ ಮೊದಲು ತೀವ್ರವಾಗಿ ಹಲ್ಲೆ ಮಾಡಲಾಗಿತ್ತು ಎಂದು ಗುರುವಾರ ಹೈಕೋರ್ಟ್ಗೆ ಸಲ್ಲಿಸಲಾದ 20 ಪುಟಗಳ ಸಿಬಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ.</p>.<p>‘ಇದಕ್ಕೂ ಮುನ್ನ ಅದೇ ದಿನ ಬೆಳಗ್ಗೆ, ಬೊಗ್ತುಯ್ನಲ್ಲಿ ಟಿಎಂಸಿ ಮುಖಂಡ ಭದು ಶೇಖ್ನ ಹತ್ಯೆ ನಡೆದಿತ್ತು. ಅದರ ನೇರ ಪರಿಣಾಮವೇ ಈ ಹತ್ಯಾಕಾಂಡ. ಶೇಖ್ನ ಹತ್ಯೆಯ ನಂತರ, ಆತನ ಆಪ್ತರು ಗುಂಪು ಗೂಡಿ ದಾಳಿ ನಡೆಸಲು ತೀರ್ಮಾನಿಸಿದ್ದರು. ವಿರೋಧಿಗಳ ಮನೆಗಳನ್ನು ಸುಡಲಾರಂಭಿಸಿದರು. ಅವರ ಕುಟುಂಬ ಸದಸ್ಯರನ್ನು ಅತ್ಯಂತ ಯೋಜಿತ ಮತ್ತು ಸಂಘಟಿತವಾಗಿ ಕೊಲ್ಲಲಾರಂಭಿಸಿದರು’ ಎಂದು ಸಿಬಿಐ ವರದಿಯಲ್ಲಿ ಹೇಳಲಾಗಿದೆ.</p>.<p>ಬೋಗ್ತುಯಿಯಲ್ಲಿ ಮೃತ ಭದು ಶೇಖ್ ಹಾಗೂ ಪಾಲಾಶ್ ಶೇಖ್, ಸೋನಾ ಶೇಖ್ ಎಂಬುವವರ ಎರಡು ಗುಂಪುಗಳ ನಡುವೆ ದೀರ್ಘಕಾಲದ ವೈರತ್ವವಿತ್ತು. ಸ್ಥಳೀಯ ಪ್ರಾಬಲ್ಯ, ವಾಣಿಜ್ಯ ವಾಹನಗಳಿಂದ ಸಂಗ್ರಹಿಸಲಾಗುವ ಅಕ್ರಮ ಹಣ, ಇತರ ಕಾನೂನುಬಾಹಿರ ಚಟುವಟಿಕೆಗಳಿಂದ ಬರುವ ಆದಾಯದ ಮೇಲಿನ ನಿಯಂತ್ರಣಕ್ಕಾಗಿ ಈ ಗುಂಪುಗಳ ನಡುವೆ ವೈರತ್ವ ಮನೆ ಮಾಡಿತ್ತು ಎಂದು ಸಿಬಿಐ ಹೇಳಿದೆ.</p>.<p>ಬೋಗ್ತುಯಿ ಗ್ರಾಮದಲ್ಲಿ ಮಾರ್ಚ್ 22ರಂದು 9 ಮಂದಿಯನ್ನು ಜೀವಂತವಾಗಿ ಸುಟ್ಟುಹಾಕಲಾಗಿತ್ತು. ಈ ಪ್ರಕರಣದ ತನಿಖೆಗಾಗಿ ಪಶ್ಚಿಮ ಬಂಗಾಳ ಸರ್ಕಾರ ಎಸ್ಐಟಿ ರಚಿಸಿತ್ತು. ಆದರೆ, ಕೋಲ್ಕತ್ತ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ಪಶ್ಚಿಮ ಬಂಗಾಳದ ಬಿರ್ಭೂಮ್ ಹತ್ಯಾಕಾಂಡವು ಸ್ಥಳೀಯ ಟಿಎಂಸಿ ನಾಯಕ ಭದು ಶೇಖ್ ಎಂಬುವವರ ಹತ್ಯೆಯ ‘ನೇರ ಪರಿಣಾಮ’ವಾಗಿದ್ದು, ‘ಯೋಜಿತ ಮತ್ತು ಸಂಘಟಿತ’ವಾಗಿ ನಡೆದಿತ್ತು ಎಂದು ಕೇಂದ್ರೀಯ ತನಿಖಾ ದಳವು (ಸಿಬಿಐ) ತನ್ನ ಪ್ರಾಥಮಿಕ ವರದಿಯಲ್ಲಿ ಹೇಳಿದೆ.</p>.<p>ಬೊಗ್ತುಯಿ ಗ್ರಾಮದ ಮನೆಯೊಂದರಲ್ಲಿ ಏಳು ಜನರ ಮೃತದೇಹಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸಿಕ್ಕಿದ್ದವು. ಅವರನ್ನು ಹಾಗೆ ಕೊಲ್ಲುವುದಕ್ಕೂ ಮೊದಲು ತೀವ್ರವಾಗಿ ಹಲ್ಲೆ ಮಾಡಲಾಗಿತ್ತು ಎಂದು ಗುರುವಾರ ಹೈಕೋರ್ಟ್ಗೆ ಸಲ್ಲಿಸಲಾದ 20 ಪುಟಗಳ ಸಿಬಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ.</p>.<p>‘ಇದಕ್ಕೂ ಮುನ್ನ ಅದೇ ದಿನ ಬೆಳಗ್ಗೆ, ಬೊಗ್ತುಯ್ನಲ್ಲಿ ಟಿಎಂಸಿ ಮುಖಂಡ ಭದು ಶೇಖ್ನ ಹತ್ಯೆ ನಡೆದಿತ್ತು. ಅದರ ನೇರ ಪರಿಣಾಮವೇ ಈ ಹತ್ಯಾಕಾಂಡ. ಶೇಖ್ನ ಹತ್ಯೆಯ ನಂತರ, ಆತನ ಆಪ್ತರು ಗುಂಪು ಗೂಡಿ ದಾಳಿ ನಡೆಸಲು ತೀರ್ಮಾನಿಸಿದ್ದರು. ವಿರೋಧಿಗಳ ಮನೆಗಳನ್ನು ಸುಡಲಾರಂಭಿಸಿದರು. ಅವರ ಕುಟುಂಬ ಸದಸ್ಯರನ್ನು ಅತ್ಯಂತ ಯೋಜಿತ ಮತ್ತು ಸಂಘಟಿತವಾಗಿ ಕೊಲ್ಲಲಾರಂಭಿಸಿದರು’ ಎಂದು ಸಿಬಿಐ ವರದಿಯಲ್ಲಿ ಹೇಳಲಾಗಿದೆ.</p>.<p>ಬೋಗ್ತುಯಿಯಲ್ಲಿ ಮೃತ ಭದು ಶೇಖ್ ಹಾಗೂ ಪಾಲಾಶ್ ಶೇಖ್, ಸೋನಾ ಶೇಖ್ ಎಂಬುವವರ ಎರಡು ಗುಂಪುಗಳ ನಡುವೆ ದೀರ್ಘಕಾಲದ ವೈರತ್ವವಿತ್ತು. ಸ್ಥಳೀಯ ಪ್ರಾಬಲ್ಯ, ವಾಣಿಜ್ಯ ವಾಹನಗಳಿಂದ ಸಂಗ್ರಹಿಸಲಾಗುವ ಅಕ್ರಮ ಹಣ, ಇತರ ಕಾನೂನುಬಾಹಿರ ಚಟುವಟಿಕೆಗಳಿಂದ ಬರುವ ಆದಾಯದ ಮೇಲಿನ ನಿಯಂತ್ರಣಕ್ಕಾಗಿ ಈ ಗುಂಪುಗಳ ನಡುವೆ ವೈರತ್ವ ಮನೆ ಮಾಡಿತ್ತು ಎಂದು ಸಿಬಿಐ ಹೇಳಿದೆ.</p>.<p>ಬೋಗ್ತುಯಿ ಗ್ರಾಮದಲ್ಲಿ ಮಾರ್ಚ್ 22ರಂದು 9 ಮಂದಿಯನ್ನು ಜೀವಂತವಾಗಿ ಸುಟ್ಟುಹಾಕಲಾಗಿತ್ತು. ಈ ಪ್ರಕರಣದ ತನಿಖೆಗಾಗಿ ಪಶ್ಚಿಮ ಬಂಗಾಳ ಸರ್ಕಾರ ಎಸ್ಐಟಿ ರಚಿಸಿತ್ತು. ಆದರೆ, ಕೋಲ್ಕತ್ತ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>