‘ಸರಕಾರದ ತಪ್ಪು ನೀತಿಗಳಿಂದಾಗಿ ಬಡತನ ಮತ್ತು ನಿರುದ್ಯೋಗ ಏರುತ್ತಿದೆ. ಸರ್ಕಾರಿ ಉದ್ಯೋಗಗಳು ಮತ್ತು ಮೀಸಲಾತಿ ಸೌಲಭ್ಯಗಳು ಅವರಿಗೆ ಅಲಭ್ಯವಾಗಿವೆ. ಪರಿಸ್ಥಿತಿ ಹೀಗಿರುವಾಗ, ಸಣ್ಣ ಪುಟ್ಟ ಸರ್ಕಾರಿ ಕೆಲಸಗಳಿಗೂ ವರ್ಷಗಟ್ಟಲೆ ಪರೀಕ್ಷೆ ನಡೆಸದೇ ಇರುವುದು ಅನ್ಯಾಯವೇ ಸರಿ. ಯುವಕರು ‘ಪಕೋಡಾ’ ಮಾರುವಂತೆ ಮಾಡುವ ಸಂಕುಚಿತ ಮನೋಭಾವವನ್ನು ಬಿಜೆಪಿ ಬದಲಾಯಿಸಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.