ಫೆಬ್ರುವರಿ 21ರಂದು ಕಾಸರಗೋಡಿನಿಂದ ಆರಂಭವಾಗಲಿರುವ ಬಿಜೆಪಿಯ ‘ವಿಜಯ ಯಾತ್ರೆ’ಯ ಸಿದ್ಧತೆಗಳ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೂರು ಬಾರಿ ಸಂಸದನಾಗಿ ಆಯ್ಕೆಯಾದ ಬಳಿಕವೂ ಅಮೇಠಿಯ ಅಭಿವೃದ್ಧಿಗೆ ರಾಹುಲ್ ಏನೂ ಮಾಡಿಲ್ಲ. ಅಲ್ಲಿ ಏನೂ ಅಭಿವೃದ್ಧಿಯಾಗಿಲ್ಲ. ಅಲ್ಲಿನ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ಎಕ್ಸ್–ರೇ ಯಂತ್ರ ಕೂಡ ಇಲ್ಲ’ ಎಂದು ಹೇಳಿದ್ದಾರೆ.