‘ಒಂದೇ ಬಾರಿ ಇಷ್ಟೊಂದು ಜನರು ಮೃತಪಡುತ್ತಾರೆ ಎಂಬ ಅಂದಾಜು ಯಾರಿಗೂ ಇರಲಿಲ್ಲ. ಸಾಮಾನ್ಯಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದರಿಂದ ಮೃತದೇಹಗಳನ್ನು ಇರಿಸಲು ಅಗತ್ಯವಾದ ಶೀಥಲೀಕರಣ ವ್ಯವಸ್ಥೆ ಇರಲಿಲ್ಲ. ಒಂದಿಬ್ಬರು ಮೃತಪಡುವ ಸಮಯದಲ್ಲಿ 10ರಿಂದ 20 ಜನರು ಮೃತಪಟ್ಟಿದ್ದರಿಂದ ಹೀಗಾಗಿದೆ. ಇಷ್ಟೊಂದು ಜನರಿಗೆ ಫ್ರೀಜರ್ ಒದಗಿಸಲು ಹೇಗೆ ಸಾಧ್ಯ? ಚಿತಾಗಾರಗಳೂ ಭರ್ತಿಯಾಗಿವೆ’ ಎಂದು ರಾಯಪುರದ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಮೀರಾ ಬಘೆಲ್ ತಿಳಿಸಿದ್ದಾರೆ.