ಪಟ್ನಾ: ಗಂಗಾ ನದಿಯದಡದಲ್ಲಿ ಸೋಮವಾರ ಮೃತದೇಹಗಳ ರಾಶಿ ಪತ್ತೆಯಾಗಿರುವುದು ದುರುದುಷ್ಟಕರ ಎಂದಿರುವಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಘಟನೆ ಬಗ್ಗೆ ತನಿಖೆ ನಡೆಸುವಂತೆ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ.
ಬಿಹಾರದ ಬಕ್ಸಾರ್ ಜಿಲ್ಲೆಯ ಚೌಸಾ ಗ್ರಾಮದ ಗಂಗಾ ಮಹಾದೇವ್ ಘಾಟ್ ಬಳಿ 12ಕ್ಕೂ ಹೆಚ್ಚು ಹೆಣಗಳು ತೇಲಿ ಬಂದು ದಡ ಸೇರಿದ್ದವು. ಈ ವೇಳೆ ನಾಯಿಗಳು ಶವಗಳನ್ನು ಕಿತ್ತು ತಿನ್ನುವ ಭಯಾನಕ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಗಂಗಾ ನದಿ ಹರಿಯುವ ಉತ್ತರ ಪ್ರದೇಶ,ಬಿಹಾರದಲ್ಲೂ ನದಿಯ ತೀರದಲ್ಲಿ ಶವಗಳು ಪತ್ತೆಯಾಗಿದ್ದವು. ಶವಗಳ ಮೇಲೆ ಸೀಲ್ ಮಾರ್ಕ್ ಇರುವುದು ಪತ್ತೆಯಾಗಿರುವುದರಿಂದ ಅವು ಕೋವಿಡ್ ಮೃತದೇಹಗಳು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದರು.
ಈ ಘಟನೆ ಸಂಬಂಧ ಉಭಯ ರಾಜ್ಯಗಳು ತನಿಖೆ ನಡೆಸಬೇಕು ಎಂದು ಗಜೇಂದ್ರ ಸಿಂಗ್ ಶೇಖಾವತ್ ಸೂಚಿಸಿದ್ದಾರೆ.