ಈ ಕುರಿತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಪಕ್ಷದ ವಕ್ತಾರರಾದ, ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಪತ್ರ ಬರೆದಿದ್ದಾರೆ. ‘ಸಿಲುಕಿಕೊಂಡಿರುವ ನಾವಿಕರಿಗೆ ಕೇಂದ್ರದಿಂದ ಯಾವುದೇ ನೆರವು ದೊರೆತಿಲ್ಲ. ಅವರನ್ನು ಸಂಪರ್ಕಿಸಲು ಕುಟುಂಬ ಸದಸ್ಯರೂ ಕಷ್ಟಪಡುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಮಹಾರಾಷ್ಟ್ರದವರಾಗಿದ್ದಾರೆ’ ಎಂದಿದ್ದಾರೆ.