ನವದೆಹಲಿ: ದೇಶದ ಯುವಜನತೆಯ ಆರ್ಥಿಕತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಾಗೂ ಅವರ ಕನಸುಗಳನ್ನು ನನಸಾಗಿಸುವ ಮೂಲಕ ’ಅಮೃತ ಪೀಳಿಗೆ’ ಸೃಷ್ಟಿಸಲು ಅಪ್ರೆಂಟಿಸ್ಶಿಪ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲಾಗಿದೆ.
2023-24 ಬಜೆಟ್ ಮಂಡಿಸಿದ ಸಚಿವ ನಿರ್ಮಲಾ ಸೀತಾರಾಮನ್, ’ಪ್ಯಾನ್-ಇಂಡಿಯಾ ನ್ಯಾಷನಲ್ ಅಪ್ರೆಂಟಿಸ್ಶಿಪ್ ಪ್ರಮೋಷನ್ ಸ್ಕೀಮ್’ ಅಡಿಯಲ್ಲಿ 3 ವರ್ಷಗಳಲ್ಲಿ 47 ಲಕ್ಷ ಯುವಕರಿಗೆ ಸ್ಟೈಫಂಡ್ ಬೆಂಬಲವನ್ನ ಒದಗಿಸುವುದಾಗಿ ಘೋಷಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಇದರಿಂದ ಕೌಶಲ್ಯ, ಆರ್ಥಿಕತೆ, ವ್ಯಾಪಾರ ಅವಕಾಶಗಳ ಕುರಿತು ಮಾಹಿತಿ ಒದಗಿಸುವುದರಿಂದ ಯುವಜನತೆಗೆ ಉದ್ಯೋಗ ಸೃಷ್ಠಿಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಕೌಶಲ್ ವಿಕಾಸ್ 4.0 ಯೋಜನೆಯಡಿ ಮುಂದಿನ ಮೂರು ವರ್ಷಗಳಲ್ಲಿ ಲಕ್ಷಾಂತರ ಯುವಕರಿಗೆ ಕೌಶಲ್ಯ, ಉದ್ಯೋಗ, ಉದ್ಯಮ ಪಾಲುದಾರಿಕೆ ಕುರಿತ ವಿವಿಧ ತರಬೇತಿಯನ್ನು ನೀಡಲಾಗುವುದು. ಕೋರ್ಸ್ಗಳ ಜೊತೆಗೆ ಕೌಶಲ ಮೂಡಿಸಲಾಗುವುದು ಎಂದು ಹೇಳಿದ್ದಾರೆ.
ಈ ಹೊಸ ಯೋಜನೆಯಡಿಯಲ್ಲಿ ಕೋಡಿಂಗ್, ರೊಬೊಟಿಕ್ಸ್, ಮೆಕಾಟ್ರಾನಿಕ್ಸ್, ಐಒಟಿ, 3ಡಿ ಪ್ರಿಂಟಿಂಗ್, ಡ್ರೋನ್ಗಳು ಮತ್ತು ಮೃದು ಕೌಶಲ್ಯಗಳಂತಹ ಕೋರ್ಸ್ಗಳನ್ನು ಜಾರಿಗೆ ತರಲಾಗುವುದು ಎಂದು ಸೀತಾರಾಮನ್ ತಿಳಿಸಿದರು.