ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಿಜವಾದ ಬಣ್ಣ ಬಯಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಶುಕ್ರವಾರ ತಿರುಗೇಟು ನೀಡಿದ್ದಾರೆ.
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರದಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮನೆಗೆ ಸಿಬಿಐ ದಾಳಿ ನಡೆಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅನುರಾಗ್ ಠಾಕೂರ್, ಜನ ಸಾಮಾನ್ಯರನ್ನು ಮೂರ್ಖರೆಂದು ಭಾವಿಸಬೇಡಿ. ಭಷ್ಟಾಚಾರಿಗಳು ಪ್ರಮಾಣಿಕರಾಗಿ ಇರಲು ಎಷ್ಟೇ ಪ್ರಯತ್ನಿಸಿದರೂ ಅವರು ಭ್ರಷ್ಟರಾಗಿಯೇ ಉಳಿಯುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಆಮ್ ಆದ್ಮಿ ಪಕ್ಷದ ಭ್ರಷ್ಟಾಚಾರವು ಒಂದಲ್ಲ, ಹಲವು ಬಾರಿ ಬಯಲಿಗೆ ಬಂದಿದೆ. ಶಿಕ್ಷಣ ಅಲ್ಲ ಅಬಕಾರಿ ನೀತಿಯಲ್ಲಿ ಆದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಯುತ್ತಿದೆ. ಹಾಗೊಂದು ವೇಳೆ ಅಬಕಾರಿ ನೀತಿಯಲ್ಲಿ ಸಮಸ್ಯೆ ಇಲ್ಲದಿದ್ದಲ್ಲಿ ಯಾತಕ್ಕಾಗಿ ವಾಪಾಸ್ ಪಡೆದರು ಎಂದು ಪ್ರಶ್ನಿಸಿದರು.
ಕೇಜ್ರಿವಾಲ್ ರಾಷ್ಟ್ರದ ಹೆಸರಲ್ಲಿ ಸಂದೇಶ ನೀಡುವುದನ್ನು ನಿಲ್ಲಿಸಬೇಕು. ಸಚಿವ ಸತ್ಯೇಂದ್ರ ಜೈನ್ ಜೈಲಿಗೆ ಹೋದಾಗಲೂ ಅವರನ್ನು ವಜಾ ಮಾಡಲಿಲ್ಲ. ದೆಹಲಿಯ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
#WATCH | No matter how hard a corrupt person tries to prove himself innocent, he will still remain corrupt. This is not the first case of corruption by AAP. There has been huge corruption in the liquor stores in Delhi: Union Min Anurag Thakur on CBI raids at Dy CM's residence pic.twitter.com/gFdlj1OblC