ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಹಾಗೂ ಉತ್ತರ ಪ್ರದೇಶದಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಆರೋಪಿ ಅನೂಪ್ ಮಾನ್ಜಿ, ಅಕ್ರಮ ಗಣಿಗಾರಿಕೆ ಜೊತೆಗೆ ಇಸಿಎಲ್ನ ಕುನುಸ್ತೋರಿಯಾ ಹಾಗೂ ಕಾಜೋರ್ ಪ್ರದೇಶದಲ್ಲಿರುವ ಗಣಿಯಿಂದ ಕಲ್ಲಿದ್ದಲನ್ನು ಕಳವು ಮಾಡುತ್ತಿದ್ದರು ಎನ್ನುವ ಆರೋಪವಿದೆ. ಇಸಿಎಲ್ನ ವಿಚಕ್ಷಣಾ ದಳ ಹಾಗೂ ಅದರ ಕಾರ್ಯಪಡೆಯು ಮೇ 2020ರಿಂದ ಅಕ್ರಮ ಗಣಿಗಾರಿಕೆ ನಡೆದಿರುವುದನ್ನು ಪತ್ತೆಹಚ್ಚಿತ್ತು. ತನಿಖೆ ಸಂದರ್ಭದಲ್ಲಿ ಅಕ್ರಮವಾಗಿ ಲಾರಿಗಳ ತೂಕವನ್ನು ಅಳೆಯುವ ಕೇಂದ್ರಗಳನ್ನು(ವೇಬ್ರಿಜ್) ತಂಡವು ಪತ್ತೆಹಚ್ಚಿತ್ತು. ಇಸಿಎಲ್ ಪ್ರದೇಶದಿಂದ ಯೋಜನಾಬದ್ಧವಾಗಿ ಅಕ್ರಮವಾಗಿ ಕಲ್ಲಿದ್ದಲು ಗಣಿಗಾರಿಕೆ ಮಾಡಿ ಸಾಗಿಸುತ್ತಿರುವುದು ಈ ವೇಳೆ ಪತ್ತೆಯಾಗಿತ್ತು.