ಮಹಾಸಮುಂಡ್: ‘ಛತ್ತೀಸಗಡದ ಮಹಾಸಮುಂಡ್ ಜಿಲ್ಲೆಯಲ್ಲಿ ಟ್ರಕ್ವೊಂದರಿಂದ ₹2.20 ಕೋಟಿ ಮೌಲ್ಯದ 1.1 ಟನ್ ಗಾಂಜಾ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಶಂಕಿತ ಕಳ್ಳಸಾಗಣೆದಾರರಿಬ್ಬರನ್ನು ಬಂಧಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.
‘ಒಡಿಶಾದಿಂದ ಉತ್ತರ ಪ್ರದೇಶಕ್ಕೆ ಟ್ರಕ್ವೊಂದರಲ್ಲಿ ಹಲಸಿನ ಹಣ್ಣುಗಳ ಕೆಳಗೆ ಗಾಂಜಾವನ್ನು ಅಡಗಿಸಿ ಸಾಗಿಸಲಾಗುತ್ತಿತ್ತು. ತೆಮ್ರಿ ನಾಕಾದಲ್ಲಿ ಪರಿಶೀಲನೆ ವೇಳೆ ಟ್ರಕ್ನಲ್ಲಿ ಗಾಂಜಾ ಪತ್ತೆಯಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಫುಲ್ ಠಾಕೂರ್ ಅವರು ಮಾಹಿತಿ ನೀಡಿದರು.
ಈ ಪ್ರಕರಣ ಸಂಬಂಧ ಟ್ರಕ್ ಚಾಲಕ ದೇವೇಂದ್ರ ಸಿಂಗ್ ಮತ್ತು ಆತನ ಸಹಾಯಕ ಬಲ್ಬೀರ್ ಸಿಂಗ್ನನ್ನು ಬಂಧಿಸಲಾಗಿದೆ. ಇವರಿಬ್ಬರು ಮೂಲತಃ ಆಲಿಗಢದವರು. ಆರೋಪಿಗಳ ಬಳಿಯಿಂದ ಗಾಂಜಾ, ₹20 ಸಾವಿರ ನಗದು ಮತ್ತು ಟ್ರಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.