ನಾರಾಯಣಪುರ: ಛತ್ತೀಸಗಡದ ನಾರಾಯಣಪುರದಲ್ಲಿ ಶನಿವಾರ ಜಿಲ್ಲಾ ಮೀಸಲು ಪಡೆ (ಡಿಆರ್ಜಿ) ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಯೋಧ ಹುತಾತ್ಮರಾಗಿ, ಮತ್ತೊಬ್ಬ ಯೋಧ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಸಂತು ವಡ್ಡೆ ಹುತಾತ್ಮರಾದ ಯೋಧ. ಕಾನ್ಸ್ಟೆಬಲ್ ಬಜ್ಜು ರಾಮ್ ಕಚ್ಲಾಮ್ ಅವರಿಗೆ ಗಾಯಗಳಾಗಿವೆ.
ಓರ್ಛಾ ಪೊಲೀಸ್ ಠಾಣೆ ವ್ಯಾಪ್ತಿಯ ತಾಡೂರ್ ಗ್ರಾಮದಲ್ಲಿ ನಕ್ಸಲರ ವಿರುದ್ಧ ಡಿಆರ್ಜಿ ಕೈಗೊಂಡಿದ್ದ ಕಾರ್ಯಾಚರಣೆ ಮುಗಿಸಿ, ಮರಳುವ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್ ಗರ್ಗ್ ತಿಳಿಸಿದರು.