ವಿವಾದಾತ್ಮಕ ಹೇಳಿಕೆಗಳಿಗಾಗೇ ಹೆಸರಾಗಿದ್ದಾರೆ ಎಂಬುದನ್ನು ಉಲ್ಲೇಖಿಸಿ ಕಾಂಗ್ರೆಸ್ ಪಕ್ಷವು ದೇವ್ ಅವರನ್ನು `ಬಿಜೆಪಿಯ ರಾಖಿ ಸಾವಂತ್' ಎಂದೂ ಟೀಕಿಸಿದೆ. ದೇವ್ ವಿರುದ್ಧ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗ ಠಾಣೆಗೆ ದೂರು ನೀಡಿದ್ದು ಶಾಸಕರವಿರುದ್ಧ ತಕ್ಷಣ ಕ್ರಮಜರುಗಿಸಬೇಕು ಎಂಧು ಒತ್ತಾಯಿಸಿದೆ. ಸಾದೋ ಅಸ್ಸಾಂ ಗೊರಿಯಾ, ಮೊರಿಯಾ ದೇಶಿ ಜಾತಿಯಾ ಪರಿಷತ್ ಕೂಡಾ ಶಾಸಕರ ವಿರುದ್ಧ ವಿವಿಧ ಠಾಣೆಗಳಲ್ಲಿ ದೂರು ದಾಖಲಿಸಿದೆ. ಬಿಜೆಪಿ ಮುಖಂಡರೂ ಶಾಸಕರ ಕ್ಷಮೆಗೆ ಆಗ್ರಹಿಸಿದ್ದಾರೆ.