ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕನ ವಿರುದ್ಧ ಆರು ಪ್ರಕರಣ ದಾಖಲು

Last Updated 10 ಆಗಸ್ಟ್ 2020, 5:58 IST
ಅಕ್ಷರ ಗಾತ್ರ

ಗುವಾಹಟಿ: 'ಚಿಂತಕ, ಕವಿ ಸೈಯದ್ ಅಬ್ದುಲ್ ಮಲ್ಲಿಕ್ ಅವರು`ಬೌದ್ಧಿಕ ಜಿಹಾದ್' ಎಂದು ಟೀಕಿಸಿ ನೀಡಿದ್ದ ವಿವಾದಾತ್ಮಕ ಹೇಳಿಕೆಗಾಗಿ ಅಸ್ಸಾಂನ ಬಿಜೆಪಿ ಶಾಸಕ ಶೈಲಾದಿತ್ಯ ದೇವ್ ವಿರುದ್ಧವಿವಿಧ ಸಂಘಟನೆಗಳು ಆರಕ್ಕೂ ಹೆಚ್ಚು ಮೊಕದ್ದಮೆ ದಾಖಲಿಸಿವೆ.

ಬಿಜೆಪಿ ಮುಖಂಡ, ಅಸ್ಸಾಂನ ಅಲ್ಪಸಂಖ್ಯಾತರ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮುಮಿನುಲ್ ಅವೊಲ್ ಅವರೂ ಶಾಸಕರ ಹೇಳಿಕೆ ಖಂಡಿಸಿದ್ದು ಸಾರ್ವಜನಿಕ ಕ್ಷಮೆಗೆ ಆಗ್ರಹಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷವು ದೇವ್ ಅವರು 'ಮಾನಸಿಕ ಸ್ಥಿಮಿತ' ಇಲ್ಲದ ವ್ಯಕ್ತಿ. ಅವರನ್ನು ಮನೋರೋಗ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಬೇಕು ಎಂದು ಒತ್ತಾಯಿಸಿದೆ.

ವಿವಾದಾತ್ಮಕ ಹೇಳಿಕೆಗಳಿಗಾಗೇ ಹೆಸರಾಗಿದ್ದಾರೆ ಎಂಬುದನ್ನು ಉಲ್ಲೇಖಿಸಿ ಕಾಂಗ್ರೆಸ್ ಪಕ್ಷವು ದೇವ್ ಅವರನ್ನು `ಬಿಜೆಪಿಯ ರಾಖಿ ಸಾವಂತ್' ಎಂದೂ ಟೀಕಿಸಿದೆ. ದೇವ್ ವಿರುದ್ಧ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗ ಠಾಣೆಗೆ ದೂರು ನೀಡಿದ್ದು ಶಾಸಕರವಿರುದ್ಧ ತಕ್ಷಣ ಕ್ರಮಜರುಗಿಸಬೇಕು ಎಂಧು ಒತ್ತಾಯಿಸಿದೆ. ಸಾದೋ ಅಸ್ಸಾಂ ಗೊರಿಯಾ, ಮೊರಿಯಾ ದೇಶಿ ಜಾತಿಯಾ ಪರಿಷತ್ ಕೂಡಾ ಶಾಸಕರ ವಿರುದ್ಧ ವಿವಿಧ ಠಾಣೆಗಳಲ್ಲಿ ದೂರು ದಾಖಲಿಸಿದೆ. ಬಿಜೆಪಿ ಮುಖಂಡರೂ ಶಾಸಕರ ಕ್ಷಮೆಗೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT