ಈ ಬಗ್ಗೆ ಪ್ರತಿಕ್ರಿಯಿಸಿರುವ ಗುಜರಾತ್ ಕಾಂಗ್ರೆಸ್ನ ಮುಖ್ಯ ವಕ್ತಾರ ಮನೀಷ್ ದೋಶಿ, ‘ತ್ರಿವೇದಿ ಮತ್ತು ಮೋದಿ ಇಬ್ಬರೂ ಸರ್ಕಾರದ ಹಿರಿಯ ಸಚಿವರು. ಹಾಗಿದ್ದೂ ಪ್ರಮುಖ ಖಾತೆಯಿಂದ ಅವರನ್ನು ಪದಚ್ಯುತಗೊಳಿಸುವ ಮುಖ್ಯಮಂತ್ರಿಗಳ ನಡೆಗೆ ಕಾರಣ ಏನೆಂದು ತಿಳಿದುಕೊಳ್ಳುವುದು ಗುಜರಾತ್ನ ಜನರ ಹಕ್ಕು’ ಎಂದು ತಿಳಿಸಿದ್ದಾರೆ.